Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!

ಚಾಮರಾಜನಗರಕ್ಕೆ ಅನಿರೀಕ್ಷಿತವಾಗಿ ಬಂದೆ, ಆದರೆ 2 ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಿ ಸೋಲಿಸಿದರೂ ಅಂತ ನಾಯಕರ ವಿರುದ್ದ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

First published:

  • 17

    Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!

    ಚಾಮರಾಜನಗರ: ಎಲೆಕ್ಷನ್ ಸೋತ ಮೇಲೆ ಬಿಜೆಪಿ ನಾಯಕರ ವಿರುದ್ಧ ವಿ.ಸೋಮಣ್ಣ ಗರಂ ಆಗಿದ್ದಾರೆ. ನನ್ನ ಕೈ ಕಾಲು ಎಲ್ಲವನ್ನೂ ಕತ್ತರಿಸಿ ಹಾಕಿಬಿಟ್ಟರಿ ಅಂತ ತಮ್ಮ ವಿರುದ್ದ ಪಿತೂರಿ ನಡೆಸಿದವರ ವಿರುದ್ದ ಸೋಮಣ್ಣ ಗರಂ ಆಗಿದ್ದಾರೆ.

    MORE
    GALLERIES

  • 27

    Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!

    ಜನತಾದಳದಿಂದ ಬಿಜೆಪಿಗೆ ಬಂದೆ, ಇಲ್ಲೇ ಉಳಿದಿದ್ದೆ. ಚಾಮರಾಜನಗರಕ್ಕೂ ಅನಿರೀಕ್ಷಿತವಾಗಿ ಬಂದೆ, ಆದರೆ 2 ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಿ ಸೋಲಿಸಿದರೂ ಅಂತ ನಾಯಕರ ವಿರುದ್ದ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 37

    Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!

    ಚಾಮರಾಜನಗರದಲ್ಲಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಸೋಮಣ್ಣ ಅವರು, ನನ್ನನ್ನು ಸೋಲಿಸಲು ಅಲ್ಲಿಂದಾನೆ ಡೈರಕ್ಷನ್ ಬಂದಿತ್ತು. ನನ್ನ ಸೋಲಿಗೆ ನಮ್ಮ ಸಮಾಜದವರೇ ಕಾರಣ ಎಂದು ಆರೋಪಿಸಿದರು.

    MORE
    GALLERIES

  • 47

    Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!

    ಮುಂಚೂಣಿ ನಾಯಕರೇ ಕಾರಣ ಡೈರೆಕ್ಷನ್ ಎಲ್ಲಿಂದಾ? ಅಲ್ಲಿಂದಾನೆ! ಯಥಾರಾಜಾ ತಥಾ ಪ್ರಜಾ ಎಂದು ಯಾರ ಹೆಸರು ಹೇಳದೆ ಪಕ್ಷದಲ್ಲಿರುವ ತಮ್ಮದೇ ಸಮಾಜದ ಮುಂಚೂಣಿ ನಾಯಕನ ವಿರುದ್ಧ ಗುಡುಗಿದ್ದಾರೆ.

    MORE
    GALLERIES

  • 57

    Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!

    ಅಲ್ಲದೆ, 12 ಚುನಾವಣೆ ಎದುರಿಸಿರುವ ನನಗೆ ಯಾವತ್ತು ಇಂತಹ ಮಾನಸಿಕ ಯಾತನೆ ಆಗಿರಲಿಲ್ಲ. ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ, ಇಲ್ಲಿಗೆ ನಾನಾಗಿಯೇ ಬರಲ್ಲಿಲ್ಲ. ಪಕ್ಷದ ಆದೇಶದ ಮೇರೆಗೆ ಬಂದೆ, ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬೇಕು ಕಾಯಕಲ್ಪ ಕೊಡಬೇಕು ಅಂದುಕೊಂಡಿದ್ದೆ ಎಂದು ತಿಳಿಸಿದರು.

    MORE
    GALLERIES

  • 67

    Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!

    ಕೆಜೆಪಿಗೆ ಹೋಗಲ್ಲ ಅಂತ ಹೇಳಿದವನು ಈ ಸೋಮಣ್ಣ ಒಬ್ಬನೇ, ಇನ್ಯಾವನು ಹೇಳಲಿಲ್ಲ, ನಾನು ಗಂಡಸ್ತನ ಇದ್ದವನು. ನಾವು ಎಲ್ಲಾ ಜನತಾ ದಳದಿಂದ ಬಿಜೆಪಿಗೆ ಬಂದವರು. ಬಿಜೆಪಿಗೆ ಬಂದಿದ್ದೀನಿ ಬಿಜೆಪಿಲೇ ಉಳಿತೀನಿ ಅಂತ ಉಳಿದೆ. ಚಾಮರಾಜನಗರಕ್ಕೆ ನಾನು ಅನಿರೀಕ್ಷಿತವಾಗಿ ಬಂದವನು. ಚಾಮರಾಜನಗರವನ್ನು ಬಹು ಎತ್ತರಕ್ಕೆ ಕೊಂಡೊಯ್ಯಬೇಕು ಅಂದ್ಕೊಂಡಿದ್ದೆ ಎಂದರು.

    MORE
    GALLERIES

  • 77

    Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!

    ಆದರೆ, ನನ್ನ ಕೈ ಕಾಲು ಎಲ್ಲವನ್ನು ಕತ್ತರಿಸಿ ಹಾಕಿಬಿಟ್ಟಿದ್ದೀರಿ. ನೀವೇನು ಮನುಷ್ಯರಾ ಎಂದು ತಮ್ಮ ವಿರುದ್ದ ಪಿತೂರಿ ನಡೆಸಿದವರ ವಿರುದ್ದ ಸೋಮಣ್ಣ ಗುಡುಗಿದರು.

    MORE
    GALLERIES