Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

ಇಂದು ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ದಾಖಲೆ ಇಲ್ಲದ ಸುಮಾರು 42 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಫ್ಯಾನ್​​ಗಳು, ಅನ್ನಭಾಗ್ಯ ಅಕ್ಕಿ, ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

First published:

  • 18

    Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

    ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದ ಚುನಾವಣಾ ಕಣ ತೀವ್ರ ರಂಗು ಪಡೆದುಕೊಳ್ಳುತ್ತಿದೆ. ಇದರ ನಡುವೆ ಪೊಲೀಸರು ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್​ಪೋಸ್ಟ್​​ಗಳನ್ನು ನಿರ್ಮಿಸಿ ತಪಾಸಣೆ ನಡೆಸುತ್ತಿದ್ದಾರೆ. ಇಂದು ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ದಾಖಲೆ ಇಲ್ಲದ ಸುಮಾರು 42 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಫ್ಯಾನ್​​ಗಳು, ಅನ್ನಭಾಗ್ಯ ಅಕ್ಕಿ, ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

    ವಿಜಯಪುರ ಜಿಲ್ಲೆಯ ಚಡಚಣ ಪೊಲೀಸರು ಅನುಮಾನಾಸ್ಪದವಾಗಿ ಕಾರಿನಲ್ಲಿ ತೆರಳುತ್ತಿದ್ದವರ ತಪಾಸಣೆ ಮಾಡಿ ದಾಖಲಾತಿ ಇಲ್ಲದೆ ಸಾಗಾಟ ಮಾಡುತ್ತಿದ್ದ 480 ಗ್ರಾಂ ಚಿನ್ನಾಭರಣ 6 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಸೊಲ್ಲಾಪುರ ನಿವಾಸಿ ವಿಜಯ ಪಡೋಳಕರ ಎಂಬಾವರನ್ನು ವಶಕ್ಕೆ ಪಡೆದಕೊಂಡಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

    MORE
    GALLERIES

  • 38

    Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

    ಮಂಡ್ಯದ ನಾಗಮಂಗಲ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ. ನಾಗಮಂಗಲ ತಾಲೂಕು ಚಿಣ್ಯ ಗ್ರಾಮದ ಚೆಕ್ ಪೋಸ್ಟ್ ನಲ್ಲಿ ಘಟನೆ ನಡೆದಿದ್ದು, ಹೊಸದುರ್ಗದಿಂದ ಮಂಡ್ಯ ತಾಲೂಕಿನ ಶಿವಳ್ಳಿಗೆ ಬರುತ್ತಿದ್ದ ಕ್ಯಾಂಟರ್​​ನಲ್ಲಿ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ. 50 ಕೆ.ಜಿ ತೂಕದ 250 ಚೀಲಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    MORE
    GALLERIES

  • 48

    Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

    ರಾಮನಗರ ತಾಲೂಕಿನ ಹನುಮಂತನಗರ ಚೆಕ್ ಪೋಸ್ಟ್​ನಲ್ಲಿ ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 5 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೋವಾ ಕಾರಿನಲ್ಲಿ ಜಯಂತ್ ಎಂಬವರು ಬೆಂಗಳೂರಿನಿಂದ ಮೈಸೂರಿಗೆ ಹಣ ತೆಗೆದುಕೊಂಡು ಹೋಗುತ್ತಿದ್ದರು. ಘಟನೆ ಬಗ್ಗೆ ಬಿಡದಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    MORE
    GALLERIES

  • 58

    Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

    ಮಂಗಳೂರಿನಲ್ಲಿ ಇಂದು ಒಂದೇ ದಿನ ದಾಖಲೆ ಇಲ್ಲದ 10 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ 200 ಲೀಟರ್ ಮದ್ಯ, 65 ಕೆ.ಜಿ ಡ್ರಗ್ಸ್, ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 27 ಕಡೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. 25 ಮಂದಿ ಕ್ರಿಮಿನಲ್ ಗಳನ್ನು ಗಡಿಪಾರು ಮಾಡಲಾಗಿದೆ. ಉಳಿದಂತೆ ಇಬ್ಬರು ಕ್ರಿಮಿನಲ್ ಗಳ ಮೇಲೆ ಗೂಂಡಾ ಆಕ್ಟ್ ದಾಖಲು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.

    MORE
    GALLERIES

  • 68

    Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

    ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ತಟ್ಟೆಕೆರೆ ಚೆಕ್ ಪೋಸ್ಟ್ ಪೊಲೀಸರು ಎರಡು ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಜಿಗಣಿ ಮಾರ್ಗವಾಗಿ ಹಾರೋಹಳ್ಳಿ ಬರುತ್ತಿದ್ದ ಸಿಫ್ಟ್​ ಕಾರನ್ನು ತಪಾಸಣೆ ಮಾಡಿದಾಗ ಹಣ ಪತ್ತೆಯಾಗಿದೆ. ಹಾರೋಹಳ್ಳಿ ಪೊಲೀಸರಿಂದ ಪ್ರಕರಣ ದಾಖಲು ಮಾಡಲಾಗಿದೆ.

    MORE
    GALLERIES

  • 78

    Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ದಾಖಲೆ ರಹಿತ 8.90 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾ ದಿಂದ ಉಡುಪಿಗೆ ಹಣ ತೆಗೆದುಕೊಂಡು ಹೋಗುತ್ತಿದ್ದರು. ಉಡುಪಿಯ ಉದ್ಯಮಿ ಅನುಪ್ ಎಂಬುವವರಿಗೆ ಸೇರಿದ ಹಣ ಎನ್ನಲಾಗಿದ್ದು, ಗೋವಾ- ಕಾರವಾರ ಗಡಿಯ ಮಾಜಾಳಿಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಚಿತ್ತಾಕುಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    MORE
    GALLERIES

  • 88

    Gift Politics: ಚುನಾವಣೆ ಕಣದಲ್ಲಿ ಝಣ ಝಣ ಕಾಂಚಾಣ; ದಾಖಲೆ ಇಲ್ಲದ ₹42 ಲಕ್ಷ, 480 ಗ್ರಾಂ ಚಿನ್ನ ಸೀಜ್​​!

    ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾವನ ಬಸ್ ನಿಲ್ದಾಣದ ಬಳಿ ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿಗೆ ಸೇರಿದ ಗಿಫ್ಟ್​​ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಆರ್.ಮಂಜುನಾಥ್‌ಗೆ ಸೇರಿದ ಸುಮಾರು 2 ಲಕ್ಷ ಬೆಲೆ ಬಾಳುವ 800 ಬಾಕ್ಸ್‌ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುಕ್ಕರ್, ತವ ಸೇರಿದಂತೆ ಐದು ಸಾಮಾಗ್ರಿಗಳ ಕುಕ್ ಸೆಟ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    MORE
    GALLERIES