Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

ಲೋಕಸಭೆ ಚುನಾವಣಾ ಹಿತದೃಷ್ಟಿಯಿಂದ ಲಿಂಗಾಯತ ಮತಬ್ಯಾಂಕ್ ಸೆಳೆಯುವ ಸಲುವಾಗಿ ಹಾಗೂ ಬಿಜೆಪಿಗೆ ತಿರುಗೇಟು ನೀಡಲು ಶೆಟ್ಟರ್​ಗೆ ಮಂತ್ರಿ ಮಾಡುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಶುರುವಾಗಿದೆಯಂತೆ.

  • News18 Kannada
  • |
  •   | Bangalore [Bangalore], India
First published:

  • 17

    Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಶಾಕ್​​ ನೀಡಿ ಸ್ವಾಭಿಮಾನದ ಮೇರೆಗೆ ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​​ ಅವರಿಗೆ ಚುನಾವಣೆಯಲ್ಲಿ ಸೋಲಾಗಿದೆ. ಈ ನಡುವೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್​ ಶೆಟ್ಟರ್ ಅವರಿಗೆ ಕಾಂಗ್ರೆಸ್​ ಹೊಸ ಜವಾಬ್ದಾರಿ ನೀಡಿರುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

    ಹೌದು, ಕರ್ನಾಟಕ ಸಿಎಂ ಆಗಿ ಕಾರ್ಯನಿರ್ವಹಿಸಿದ್ದ ಜಗದೀಶ್ ಶೆಟ್ಟರ್​ ಅವರು ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದು, ಚುನಾವಣೆಗೂ ಮುನ್ನ ಅವರು ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದು ಹಲವು ಕ್ಷೇತ್ರಗಳಲ್ಲಿ ಭರ್ಜರಿ ಪರೋಕ್ಷವಾಗಿ ಪ್ಲಸ್​ ಆಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

    ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಜಗದೀಶ್ ಶೆಟ್ಟರ್​ ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್​ ಚಿಂತನೆ ನಡೆಸಿದೆ ಎಂಬ ಮಾತು ಕೇಳಿ ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

    ಲೋಕಸಭೆ ಚುನಾವಣಾ ಹಿತದೃಷ್ಟಿಯಿಂದ ಲಿಂಗಾಯತ ಮತಬ್ಯಾಂಕ್ ಸೆಳೆಯುವ ಸಲುವಾಗಿ ಹಾಗೂ ಬಿಜೆಪಿಗೆ ತಿರುಗೇಟು ನೀಡಲು ಶೆಟ್ಟರ್​ಗೆ ಮಂತ್ರಿ ಮಾಡುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ಶುರುವಾಗಿದೆಯಂತೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

    ಶೆಟ್ಟರ್ ಅವರನ್ನು ಎಂಎಲ್​ಸಿ ಮಾಡಿ, ಲೋಕಸಭೆ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸಾಧ್ಯವಾದರೆ ಅವರನ್ನೇ ನಿಲ್ಲಿಸುವುದು ಎಂಬ ಯೋಜನೆ ಕಾಂಗ್ರೆಸ್​ ಮುಂದಿದೆಯಂತೆ. ಶೆಟ್ಟರ್​ ಅವರು ಪ್ರಹ್ಲಾದ್ ಜೋಶಿ ಅವರಿಗೆ ಪ್ರಬಲ ಎದುರಾಳಿಯಾಗುವ ಲೆಕ್ಕಾಚಾರವೂ ಕೈ ನಾಯಕರ ಮುಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

    ಈ ನಡುವೆ ತಮ್ಮ ಸೋಲಿನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಗದೀಶ್​ ಶೆಟ್ಟರ್ ಅವರು, ನಾನು ಆರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಆದರೆ ಯಾವತ್ತೂ ಹಣ ಹಂಚಿಕೆ ಮಾಡಲಿಲ್ಲ. ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡೋದನ್ನು ನೋಡಿದೆ. ಕಾಂಗ್ರೆಸ್​ಗೆ 130 ರಿಂದ 140 ಸೀಟು ಬರುತ್ತೆ ಅಂತ, ಒಂದು ವಾರದ ಹಿಂದೆಯೇ ಹೇಳಿದ್ದೆ ಎಂದು ಶೆಟ್ಟರ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಲಕ್ಷ್ಮಣ್​ ಸವದಿ ಅವರು, ಬಿಜೆಪಿ ನಾವು ನಡೆದಿದ್ದೆಲ್ಲ ಸರಿ ಎನ್ನುವ ಭಾವನೆ ಇಟ್ಟುಕೊಂಡಿತ್ತು. ರಾಜ್ಯದ ಜನ ಅದಕ್ಕೆ ಮನ್ನಣೆ ನೀಡಿಲ್ಲ. ಶೆಟ್ಟರ್ ಅವರು ಸೋತಿದ್ದಾರೆ ಅವರಿಗೆ ಸ್ಥಾನಮಾನ ನೀಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದೆ. ನಾನು ಹೊಸದಾಗಿ ಪಕ್ಷಕ್ಕೆ ಬಂದಿದ್ದೇನೆ ಕೊಡಿ ಅಂತ ನಾನು ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES