Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

ರಾಜಕೀಯ ಎಂಬುವುದು ಹತ್ತಿರದ ಸಂಬಂಧಿಗಳನ್ನು ದೂರ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

First published:

  • 18

    Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

    ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ದೊಡ್ಡ ದೊಡ್ಡ ನಾಯಕರೇ ಪಕ್ಷದ ವಿರುದ್ಧ ಅಸಮಾಧಾನಗೊಂಡು ಪಕ್ಷಾಂತರ ಪರ್ವವನ್ನೇ ಶುರು ಮಾಡಿದ್ದಾರೆ. ಚುನಾವಣಾ ರಾಜಕೀಯ ಪಟ್ಟಣ, ಹಳ್ಳಿ ಮಾತ್ರವಲ್ಲದೇ ಕುಟುಂಬದಲ್ಲೂ ಎಂಟ್ರಿ ಕೊಟ್ಟಿದೆ.

    MORE
    GALLERIES

  • 28

    Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

    ಹೌದು, ರಾಜಕೀಯ ಎಂಬುವುದು ಹತ್ತಿರದ ಸಂಬಂಧಿಗಳನ್ನು ದೂರ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದ ವ್ಯಕ್ತಿ ತನ್ನ ಅಳಿಯ ಬಿಜೆಪಿ ಪಕ್ಷಕ್ಕೆ ಬಂದರೆ ಮಾತ್ರ, ತನ್ನ ಮಗಳನ್ನು ಗಂಡನ ಮನೆಗೆ ಕಳುಹಿಸುವುದಾಗಿ ಷರತ್ತು ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸೊನ್ನಾಪುರ ತಾಂಡಾದಲ್ಲಿ ನಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

    ಸೊನ್ನಾಪುರ ತಾಂಡಾದ ನಿವಾಸಿಗಳಾಗಿರುವ ಅಳಿಯ ಪರಶುರಾಮ ಚವ್ಹಾಣ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೆ ಚವ್ಹಾಣ ಮಾವ ಚಂದ್ರು ಬಿಜೆಪಿಗೆ ಪಕ್ಷದಲ್ಲಿದ್ದಾರೆ. ಸದ್ಯ ರಾಜ ವಿಧಾನಸಭಾ ಚುನಾವಣೆಯ ರಾಜಕೀಯ ಮಾವ, ಅಳಿಯನನ್ನು ದೂರ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

    ಪರಶುರಾಮ ಚವ್ಹಾಣ ಪತ್ನಿ ಹೆರಿಗೆಗೆ ಅಂತ ತಂದೆಯ ಮನೆಗೆ ಬಂದಿದ್ದಾರೆ. ಹೆರಿಗೆಯಾಗಿ ಒಂದೂವರೆ ತಿಂಗಳಾಗಿದ್ದು, ಮನೆಗೆ ಕಳುಹಿಸುವಂತೆ ಅಳಿಯ ಮಾವನಿಗೆ ಕೇಳಿದ್ದನಂತೆ. ಆದರೆ ಈ ವೇಳೆ ಮಗಳನ್ನು ಕಳುಹಿಸಬೇಕಾದರೆ ಕಾಂಗ್ರೆಸ್​ ಬಿಟ್ಟು ಬಿಜೆಪಿಗೆ ಬರುವಂತೆ ಅಳಿಯನಿಗೆ ಮಾವ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

    ಮಾವನ ಷರತ್ತು ಕೇಳಿದ ಅಳಿಯ ಕಾಂಗ್ರೆಸ್​​ ಪಕ್ಷ ಬಿಟ್ಟು ಬರೋದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಅಳಿಯನ ಮನೆಗೆ ಬಾಣಂತಿ ಪುತ್ರಿಯನ್ನು ಕಳುಹಿಸಲು ಮಾವ ಹಿಂದೇಟು ಹಾಕಿದ್ದಾರಂತೆ. ಇದರಿಂದ ಅಸಮಾಧಾನಗೊಂಡಿರುವ ಅಳಿಯ ಚವ್ಹಾಣ, ಮಾವನೇ ಕಾಂಗ್ರೆಸ್​ಗೆ ಬರಲಿ ಎಂದು ಸವಾಲು ಹಾಕಿದ್ದನಂತೆ. (ಮಾವ ಚಂದ್ರು/ ಅಳಿಯ ಪರಶುರಾಮ ಚವ್ಹಾಣ)

    MORE
    GALLERIES

  • 68

    Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

    ಈ ಬಗ್ಗೆ ಮಾತನಾಡಿರುವ ಅಳಿಯ ಪರಶುರಾಮ ಚವ್ಹಾಣ, ನಾನು ಕಾಂಗ್ರೆಸ್ ಕಾರ್ಯಕರ್ತ. ಬಿಜೆಪಿಗೆ ಸೇರ್ಪಡೆಯಾಗು, ಮಗಳನ್ನು ಕಳುಹಿಸುತ್ತೇನೆ ಅಂತ ಮಾವ ಹೇಳಿದ್ದಾನೆ. ರಾಜಕೀಯ ಬಿಟ್ಟು ಹೆಂಡತಿ, ಮಕ್ಕಳನ್ನು ಕಳುಹಿಸಿ ನನ್ನ ಪಾಡಿಗೆ ನಾನು ಚೆನ್ನಾಗಿ ಇರುತ್ತೆನೆಂದು ಹೇಳಿದೆ. ಆದರೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಮಾವ ಹೇಳ್ತಿದ್ದಾರೆ. ಬೇಡಪ್ಪಾ ಭಿನ್ನಾಭಿಪ್ರಾಯ ಬಿಟ್ಟು, ಬಿಜೆಪಿ ಬಿಟ್ಟು, ಕಾಂಗ್ರೆಸ್ ಬಂದು ಬಿಡು. ಅಳಿಯ- ಮಾವ ಅಂತ ಚೆನ್ನಾಗಿ ಇರೋಣ ಅಂತ ಹೇಳಿದ್ದೀನಿ. ನಾನು ಮಾತ್ರ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 78

    Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

    ಇನ್ನು, ಅಳಿಯನ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಮಾವ ಚಂದ್ರು, ನಾನು ಅಳಿಯನಿಗೆ ಯಾವುದೇ ಷರತ್ತು ಹಾಕಿಲ್ಲ ಎಂದಿದ್ದಾರೆ. ಅಲ್ಲದೆ, ನಾನು ಬಿಜೆಪಿಯಲ್ಲಿದ್ದೇನೆ, ಅಳಿಯ ಕಾಂಗ್ರೆಸ್ ನಲ್ಲಿದ್ದಾನೆ. ಆದರೆ ನಾನು ಆ ರೀತಿ ಹೇಳಿಯೇ ಇಲ್ಲ. ಮುಂದಿನ ದಿನಗಳಲ್ಲಿ ಮಗಳನ್ನು ಅಳಿಯನ ಮನೆಗೆ ಕಳುಹಿಸುತ್ತೇನೆ ಎಂದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Karnataka Elections 2023: ಬಿಜೆಪಿಗೆ ಬಂದ್ರೆ ಮಾತ್ರ ಮಗಳನ್ನು ಕಳಿಸ್ತೀನಿ ಅಂತ ಅಳಿಯನಿಗೆ ಮಾವನ ಷರತ್ತು; ಸಂಬಂಧಗಳನ್ನೇ ದೂರ ಮಾಡಿದ ರಾಜಕೀಯ!

    ರಾಜಕೀಯ ನಾಯಕರು ಪಕ್ಷ ಮರೆತು ಸ್ನೇಹಿತರಾಗಿದ್ದಾರೆ, ದೊಡ್ಡವರ ರಾಜಕೀಯ ಹಾಗೂ ಗೆಳೆತನ ಬೇರೆಯಾಗಿರುತ್ತದ್ದೆ. ಇದನ್ನು ನಾವು ಹಲವು ಸಂದರ್ಭದಲ್ಲಿ ನೋಡಿರುತ್ತೇವೆ. ಆದರೆ ರಾಜಕೀಯ ಜಿದ್ದಿಗೆ ಬಿದ್ದಿರುವ ಅಳಿಯ, ಮಾವ ಇಲ್ಲಿ ದೂರವಾಗಿದ್ದಾರೆ. ಇದಕ್ಕೆ ಏನೆನ್ನಬೇಕು ನೀವೇ ಹೇಳಿ!

    MORE
    GALLERIES