Karnataka Election 2023: ರಾಜ್ಯದಲ್ಲಿ ಪ್ರಧಾನಿ ಮೋದಿ 10 ದಿನ ಪ್ರಚಾರ; ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​​ಗೆ ಮುಂದಾದ ಹೈಕಮಾಂಡ್!

ಪ್ರಧಾನಿ ಮೋದಿ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

First published:

  • 17

    Karnataka Election 2023: ರಾಜ್ಯದಲ್ಲಿ ಪ್ರಧಾನಿ ಮೋದಿ 10 ದಿನ ಪ್ರಚಾರ; ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​​ಗೆ ಮುಂದಾದ ಹೈಕಮಾಂಡ್!

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಬಂಡಾಯವೇಳುವ ನಾಯಕರ ಸಂಖ್ಯೆ ಈ ಬಾರಿ ಹೆಚ್ಚಾಗಿದೆ. ಇದನ್ನ ಶಮನಗೊಳಿಸಲು ಅಂತಲೇ ಪ್ರಧಾನಿ ಮೋದಿಯೇ ಖುದ್ದು ಅಖಾಡಕ್ಕಿಳೀತಿದ್ದಾರೆ.

    MORE
    GALLERIES

  • 27

    Karnataka Election 2023: ರಾಜ್ಯದಲ್ಲಿ ಪ್ರಧಾನಿ ಮೋದಿ 10 ದಿನ ಪ್ರಚಾರ; ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​​ಗೆ ಮುಂದಾದ ಹೈಕಮಾಂಡ್!

    ಹೌದು, ಇದೇ ತಿಂಗಳ ಕೊನೆಯಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 10 ದಿನ ಪ್ರಚಾರ ಕೈಗೊಳ್ಳಲಿದ್ದಾರೆ. ಇದರಲ್ಲಿ ರೋಡ್​ಶೋ, ಬೃಹತ್ ಸಮಾವೇಶವೂ ಇರಲಿದೆ.

    MORE
    GALLERIES

  • 37

    Karnataka Election 2023: ರಾಜ್ಯದಲ್ಲಿ ಪ್ರಧಾನಿ ಮೋದಿ 10 ದಿನ ಪ್ರಚಾರ; ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​​ಗೆ ಮುಂದಾದ ಹೈಕಮಾಂಡ್!

    ಪ್ರಧಾನಿ ಮೋದಿ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

    MORE
    GALLERIES

  • 47

    Karnataka Election 2023: ರಾಜ್ಯದಲ್ಲಿ ಪ್ರಧಾನಿ ಮೋದಿ 10 ದಿನ ಪ್ರಚಾರ; ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​​ಗೆ ಮುಂದಾದ ಹೈಕಮಾಂಡ್!

    ಉಳಿದಂತೆ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಪ್ರಧಾನಿ ಮೋದಿಯವರು ಕರ್ನಾಟಕದ ಭೇಟಿ ವೇಳೆ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೋಲಾರ ಸೇರಿದಂತೆ ರಾಜ್ಯದ ಪ್ರಮುಖ 10 ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಪ್ರಚಾರದ ವೇಳಾಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ.

    MORE
    GALLERIES

  • 57

    Karnataka Election 2023: ರಾಜ್ಯದಲ್ಲಿ ಪ್ರಧಾನಿ ಮೋದಿ 10 ದಿನ ಪ್ರಚಾರ; ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​​ಗೆ ಮುಂದಾದ ಹೈಕಮಾಂಡ್!

    ಇನ್ನು, ಇಂದು ಶಿಗ್ಗಾವಿಯಲ್ಲಿ ಭರ್ಜರಿ ರೋಡ್​ ಶೋ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಳೆ ಗಡಿ ಜಿಲ್ಲೆ ಬೀದರ್​ಗೆ ಭೇಟಿ ನೀಡಲಿದ್ದಾರೆ. ಭಾಲ್ಕಿ‌, ಹುಮನಾಬಾದ್‌‌ನಲ್ಲಿ‌ ಸಾರ್ವಜನಿಕ ಸಮಾವೇಶ ಸಿಎಂ ಭಾಗಿಯಾಗಲಿದ್ದು, ಬೆಳಗ್ಗೆ 10:50ಕ್ಕೆ ಸಮಾವೇಶ ಮತ್ತು 12-30ಕ್ಕೆ ಹುಮಾನಾಬಾದ್​​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಿಎಂ ಕಲಬುರ್ಗಿಗೆ ಸಿಎಂ ತೆರಳಲಿದ್ದಾರೆ.

    MORE
    GALLERIES

  • 67

    Karnataka Election 2023: ರಾಜ್ಯದಲ್ಲಿ ಪ್ರಧಾನಿ ಮೋದಿ 10 ದಿನ ಪ್ರಚಾರ; ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​​ಗೆ ಮುಂದಾದ ಹೈಕಮಾಂಡ್!

    ಇಂದು ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ನನ್ನ ಜನರ ನಡುವೆ ಅತ್ಯಂತ ದೊಡ್ಡ ಅನ್ಯೋನ್ಯ ಸಂಬಂಧ ಇದೆ. ಪ್ರೀತಿ ವಿಶ್ವಾಸ ಕೊಟ್ಟೊದಾರೆ.‘ನಾನು ಸತ್ತರೆ ಶಿಗ್ಗಾಂವಿಯಲ್ಲಿ ಹೂಳಬೇಕು ಎಂದು ಹೇಳಿದ್ದಾರೆ.

    MORE
    GALLERIES

  • 77

    Karnataka Election 2023: ರಾಜ್ಯದಲ್ಲಿ ಪ್ರಧಾನಿ ಮೋದಿ 10 ದಿನ ಪ್ರಚಾರ; ಬಿಜೆಪಿ ಡ್ಯಾಮೇಜ್​ ಕಂಟ್ರೋಲ್​​ಗೆ ಮುಂದಾದ ಹೈಕಮಾಂಡ್!

    ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಾಥ್ ನೀಡಿದ್ದ ನಟ ಕಿಚ್ಚ ಸುದೀಪ್​​, ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲಿಸಲು ಬಂದಿದ್ದೇನೆ. ಬೊಮ್ಮಾಯಿ ಮಾಮ ಉತ್ತಮ ಕೆಲಸ ಮಾಡಿದ್ದಾರೆ. ಬೊಮ್ಮಾಯಿಗೆ ‘ಕಾಮ್ ಕೆ ವಾಸ್ತೆ’ ಮಾತು ಸರಿಯಾಗಿದೆ. ಅವರಿಗೆ ಮತ್ತೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ದರು.

    MORE
    GALLERIES