Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್​​; ಕಾಂಗ್ರೆಸ್​ನಲ್ಲಿ ಮುಂದುವರೆದ ಹೈಡ್ರಾಮಾ!

ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಯ್ಕೆ ಮಾಡುವ ಹೊಣೆ ನೀಡಿದ್ದೇವೆ ಎಂದು ದೆಹಲಿಯಲ್ಲಿ ರಣದೀಪ್ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ.

First published:

  • 17

    Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್​​; ಕಾಂಗ್ರೆಸ್​ನಲ್ಲಿ ಮುಂದುವರೆದ ಹೈಡ್ರಾಮಾ!

    ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡರೂ ಸಿಎಂ ಆಯ್ಕೆ ಮಾತ್ರ ಕಗ್ಗಂಟಾಗಿದೆ. ಮುಖ್ಯಮಂತ್ರಿ ಸ್ಥಾನದ ರೇಸ್​​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪಟ್ಟು ಸಡಿಲಿಸಿದ ಕಾರಣ ಸಿಎಂ ಆಯ್ಕೆ ಪ್ರಕ್ರಿಯೆ ಮತ್ತಷ್ಟು ತಡವಾಗುತ್ತಿದೆ.

    MORE
    GALLERIES

  • 27

    Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್​​; ಕಾಂಗ್ರೆಸ್​ನಲ್ಲಿ ಮುಂದುವರೆದ ಹೈಡ್ರಾಮಾ!

    ಈ ಕುರಿತಂತೆ ಇಂದು ಮಧ್ಯಾಹ್ನದ ವೇಳೆಗೆ ದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು, ಇಂದು ಅಥವಾ ನಾಳೆ ಸಿಎಂ ಆಯ್ಕೆ ಮಾಡಲಾಗುತ್ತದೆ. ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಕ್ಯಾಬಿನೆಟ್ ರಚನೆ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 37

    Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್​​; ಕಾಂಗ್ರೆಸ್​ನಲ್ಲಿ ಮುಂದುವರೆದ ಹೈಡ್ರಾಮಾ!

    ಅಲ್ಲದೆ, ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಯ್ಕೆ ಮಾಡುವ ಹೊಣೆ ನೀಡಿದ್ದೇವೆ ಎಂದು ದೆಹಲಿಯಲ್ಲಿ ರಣದೀಪ್ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ.

    MORE
    GALLERIES

  • 47

    Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್​​; ಕಾಂಗ್ರೆಸ್​ನಲ್ಲಿ ಮುಂದುವರೆದ ಹೈಡ್ರಾಮಾ!

    ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಗಿ ಪಟ್ಟು ಹಿಡಿದಿದ್ದಾರೆ, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಂಧಾನಕ್ಕೂ ಡಿಕೆ ಶಿವಕುಮಾರ್​ ಮಣಿದಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಆಯ್ಕೆಯನ್ನು ಹೈಕಮಾಂಡ್ ಮುಂದೂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 57

    Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್​​; ಕಾಂಗ್ರೆಸ್​ನಲ್ಲಿ ಮುಂದುವರೆದ ಹೈಡ್ರಾಮಾ!

    ಇನ್ನು, ಹೈಕಮಾಂಡ್ ಬಳಿ ಡಿಕೆ ಶಿವಕುಮಾರ್ ಅವರು ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ತಿಳಿಸಿರುವ ಡಿಕೆಶೀ, ನನಗೂ ಬೇಡ, ಸಿದ್ದರಾಮಯ್ಯ ಅವರಿಗೂ ಬೇಡ. ನೀವೇ ಸಿಎಂ ಆಗಿ. ದೇಶಕ್ಕೆ ದೊಡ್ಡ ಸಂದೇಶ ಕೊಟ್ಟಂತಾಗಲಿದೆ. ದಲಿರೊಬ್ಬರನ್ನ ರಾಜ್ಯದ ಸಿಎಂ ಮಾಡಿಸಿದ ಪುಣ್ಯ ನನಗೂ ಮತ್ತು ಪಕ್ಷಕ್ಕೂ ಬರಲಿದೆ. ಅಲ್ಲದೆ, ನೀವು ಸಿಎಂ ಆಗುತ್ತೀರಿ ಎಂದರೆ ಎಲ್ಲ ಶಾಸಕರು ಬೆನ್ನಿಗೆ ನಿಲ್ಲುತ್ತಾರೆ. ನಿಮ್ಮ 50 ವರ್ಷದ ನಿರಂತರ ಸೇವೆಗೆ ಗೌರವ ಬಂದಂತಾಗಲಿದೆ ಎಂದು ಡಿಕೆಶಿ ತಿಳಿಸಿದ್ದಾರಂತೆ.

    MORE
    GALLERIES

  • 67

    Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್​​; ಕಾಂಗ್ರೆಸ್​ನಲ್ಲಿ ಮುಂದುವರೆದ ಹೈಡ್ರಾಮಾ!

    ಇದೇ ವಿಚಾರವನ್ನು ರಾಹುಲ್ ಗಾಂಧಿ ಅವರ ಬಳಿಯೂ ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಡಿಕೆಶಿ ಅವರ ಹಠ ಸದ್ಯ ರಾಹುಲ್ ಗಾಂಧಿ ಅವರಿಗೆ ಹೊಸ ತಲೆನೋವು ತರಿಸಿದೆ ಎನ್ನಲಾಗಿದೆ.

    MORE
    GALLERIES

  • 77

    Karnataka CM Suspense: ಕರ್ನಾಟಕ ಸಿಎಂ ಆಯ್ಕೆಗೆ ಮತ್ತೆ ಟ್ವಿಸ್ಟ್​​; ಕಾಂಗ್ರೆಸ್​ನಲ್ಲಿ ಮುಂದುವರೆದ ಹೈಡ್ರಾಮಾ!

    ಇತ್ತ ಡಿಕೆ ಶಿವಕುಮಾರ್ ಅವರ ಸಹೋದರ, ಸಂಸದ ಡಿಕೆ ಸುರೇಶ್ ಅವರು ಕೂಡ ತಮ್ಮ ಸಹೋದರನ ಪರ ಬ್ಯಾಟ್​ ಮಾಡಿದ್ದಾರೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಡಿಕೆ ಶಿವಕುಮಾರ್ ಅವರ ಮಾತುಕತೆ ಮುಂದುವರೆದಿದ್ದು, ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ಬೇಕೇಬೇಕು ಎಂದು ಡಿಕೆಶಿ ಒತ್ತಾಯ ಮಾಡಿದ್ದಾರಂತೆ.

    MORE
    GALLERIES