Karnataka Government Formation: ‘ನಾನು ಸ್ಪೀಕರ್ ಆಗಲ್ಲ!’ ಕಾಂಗ್ರೆಸ್​​ನಲ್ಲಿ ಯಾರಿಗೂ ಬೇಡವಾಯ್ತಾ ಹುದ್ದೆ?

ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಅವರು ಸ್ಪೀಕರ್ ಆಗಿ ಎಂದು ಹಿರಿಯ ನಾಯಕರಾದ ಆರ್.ವಿ ದೇಶಪಾಂಡೆ, ಟಿ.ಬಿ ಜಯಚಂದ್ರ ಹಾಗೂ ಬಸವರಾಜ ರಾಯರೆಡ್ಡಿ ಅವರಿಗೆ ಒತ್ತಾಯ ಮಾಡಿದ್ದರಂತೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Government Formation: ‘ನಾನು ಸ್ಪೀಕರ್ ಆಗಲ್ಲ!’ ಕಾಂಗ್ರೆಸ್​​ನಲ್ಲಿ ಯಾರಿಗೂ ಬೇಡವಾಯ್ತಾ ಹುದ್ದೆ?

    ಬೆಂಗಳೂರು: ನಾಳೆ ನೂತನ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಸಿದ್ಧತಾ ಕಾರ್ಯಗಳು ಅಂತಿಮ ಹಂತ ತಲುಪಿವೆ. ಈ ನಡುವೆ ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು ಆರಂಭವಾಗಿದ್ದು, ಸಂಪುಟ ಹಂಚಿಕೆಯ ಕಗ್ಗಂಟು ಎದುರಾಗಿದೆ.

    MORE
    GALLERIES

  • 27

    Karnataka Government Formation: ‘ನಾನು ಸ್ಪೀಕರ್ ಆಗಲ್ಲ!’ ಕಾಂಗ್ರೆಸ್​​ನಲ್ಲಿ ಯಾರಿಗೂ ಬೇಡವಾಯ್ತಾ ಹುದ್ದೆ?

    ರಾಜ್ಯ ಸಿಎಂ ಸ್ಥಾನಕ್ಕೆ ಎದುರಾಗಿದ್ದ ಪೈಪೋಟಿಯನ್ನು ಬಗೆ ಹರಿಸಿದ್ದ ಕಾಂಗ್ರೆಸ್ ಹೈಕಮಾಂಡ್​ಗೆ ಸದ್ಯ ಖಾತೆ ಹಂಚಿಕೆಯ ಜಂಜಾಟ ಶುರುವಾಗಿದ್ದು, ಹಲವು ಹಿರಿಯ ನಾಯಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

    MORE
    GALLERIES

  • 37

    Karnataka Government Formation: ‘ನಾನು ಸ್ಪೀಕರ್ ಆಗಲ್ಲ!’ ಕಾಂಗ್ರೆಸ್​​ನಲ್ಲಿ ಯಾರಿಗೂ ಬೇಡವಾಯ್ತಾ ಹುದ್ದೆ?

    ಕಾಂಗ್ರೆಸ್ ಪಕ್ಷದ ಕೆಲ ಹಿರಿಯ ನಾಯಕರು ಜಾತಿ, ಪಕ್ಷ ನಿಷ್ಠೆ, ಚುನಾವಣೆ ನೀಡಿದ ಕೊಡುಗೆ ಸೇರಿದಂತೆ ಹಿರಿತನ ಆಧಾರ ಮೇಲೆ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ಕೆಲ ನಾಯಕರು ದೆಹಲಿಗೂ ತೆರಳಿ ಲಾಬಿ ನಡೆಸಿದ್ದಾರೆ.

    MORE
    GALLERIES

  • 47

    Karnataka Government Formation: ‘ನಾನು ಸ್ಪೀಕರ್ ಆಗಲ್ಲ!’ ಕಾಂಗ್ರೆಸ್​​ನಲ್ಲಿ ಯಾರಿಗೂ ಬೇಡವಾಯ್ತಾ ಹುದ್ದೆ?

    ಇದರ ನಡುವೆ ಕೈ ಪಡೆಯ ಹಲವು ಹಿರಿಯ ನಾಯಕರು ಸ್ಪೀಕರ್ ಸ್ಥಾನವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಸ್ಪೀಕರ್ ಆಯ್ಕೆಯೂ ಬಹುದೊಡ್ಡ ತಲೆನೋವಾಗಿದೆ ಮಾರ್ಪಟ್ಟಿದೆ.

    MORE
    GALLERIES

  • 57

    Karnataka Government Formation: ‘ನಾನು ಸ್ಪೀಕರ್ ಆಗಲ್ಲ!’ ಕಾಂಗ್ರೆಸ್​​ನಲ್ಲಿ ಯಾರಿಗೂ ಬೇಡವಾಯ್ತಾ ಹುದ್ದೆ?

    ಇದು ನನಗೆ ಕೊನೆಯ ರಾಜಕೀಯ ಅವಕಾಶ, ಆದ್ದರಿಂದ ನನಗೆ ಸ್ಪೀಕರ್ ಸ್ಥಾನ ಬೇಡ. ನಾನು ಮಂತ್ರಿನೇ ಆಗಬೇಕು ಎಂದು ಹಿರಿಯ ನಾಯಕರು ಸ್ಪೀಕರ್ ಆಗಲು ನಿರಾಕರಿಸಿದ್ದಾರಂತೆ. ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಅವರು ಸ್ಪೀಕರ್ ಆಗಿ ಎಂದು ಹಿರಿಯ ನಾಯಕರಾದ ಆರ್.ವಿ ದೇಶಪಾಂಡೆ, ಟಿ.ಬಿ ಜಯಚಂದ್ರ ಹಾಗೂ ಬಸವರಾಜ ರಾಯರೆಡ್ಡಿ ಅವರಿಗೆ ಒತ್ತಾಯ ಮಾಡಿದ್ದರಂತೆ.

    MORE
    GALLERIES

  • 67

    Karnataka Government Formation: ‘ನಾನು ಸ್ಪೀಕರ್ ಆಗಲ್ಲ!’ ಕಾಂಗ್ರೆಸ್​​ನಲ್ಲಿ ಯಾರಿಗೂ ಬೇಡವಾಯ್ತಾ ಹುದ್ದೆ?

    ಈ ಮೂವರಿಗೂ ಯಾರಾದರೊಬ್ಬರು ಸ್ಪೀಕರ್ ಆಗಿ ಎಂದು ಹೈಕಮಾಂಡ್ ಒತ್ತಾಯ ಹಾಕಿದ್ದು, ಆದರೆ ಮೂವರಿಗೂ ಮಂತ್ರಿ ಆಗುವ ಆಸೆ ಇದೆಯಂತೆ. ಆದ್ದರಿಂದ ಯಾರೂ ಕೂಡ ಸ್ಪೀಕರ್ ಹುದ್ದೆ ಅಲಂಕರಿಸಲು ತಯಾರಿಲ್ಲ ಎನ್ನಲಾಗಿದೆ.

    MORE
    GALLERIES

  • 77

    Karnataka Government Formation: ‘ನಾನು ಸ್ಪೀಕರ್ ಆಗಲ್ಲ!’ ಕಾಂಗ್ರೆಸ್​​ನಲ್ಲಿ ಯಾರಿಗೂ ಬೇಡವಾಯ್ತಾ ಹುದ್ದೆ?

    ನನ್ನದು ಕೊನೆ ಚುನಾವಣೆ, ತುಮಕೂರು ಜಿಲ್ಲೆಗೆ ನೀರಾವರಿ ಕೆಲಸ ಮಾಡಬೇಕು. ಇದೇ ನಂದು ಕೊನೆ ಎಲೆಕ್ಷನ್ ಮಂತ್ರಿ ಆಗಬೇಕು ಅಂತ ಟಿ.ಬಿ ಜಯಚಂದ್ರ ಹೇಳುತ್ತಿದ್ದರೆ, ನಾನು ಒಂಭನೇ ಬಾರಿಗೆ ಶಾಸಕನಾಗಿದ್ದೇನೆ, 10 ಸಿಎಂಗಳ ಜತೆ ಕೆಲಸ ಮಾಡಿದ್ದೇನೆ. ಕೊನೆ ಭಾರಿ ಮಂತ್ರಿ ಆಗಿ ಒಳ್ಳೆ ಕೆಲಸ ಮಾಡಬೇಕೆಂದಿದ್ದೇನೆ . ನಾನು ಸ್ಪೀಕರ್ ಆಗಲ್ಲ ಅಂತಿದ್ದಾರಂತೆ ಆರ್.ವಿ ದೇಶಪಾಂಡೆ. ಇನ್ನು, ರಾಯರೆಡ್ಡಿ ಅವರಿಗೆ ಕೇಳಿದರೂ ನಾನು ಆಗಲ್ಲ ಅಂತಿದ್ದಾರೆ ಎನ್ನಲಾಗಿದೆ. ಮೂವರು ನಾಯಕರು ಮನವಿಗೂ, ಮನವೊಲಿಕೆಗೂ ಬಗ್ಗುತ್ತಿಲ್ಲ ಎನ್ನಲಾಗಿದೆ.

    MORE
    GALLERIES