Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

ಶನಿವಾರ 11:45ಕ್ಕೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • News18 Kannada
  • |
  •   | Bangalore [Bangalore], India
First published:

  • 19

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಬೆಂಗಳೂರು: ವೋಟ್​ ಹಾಕಿದ್ದು ಕನ್ನಡಿಗರು. ಕಾಂಗ್ರೆಸ್​​ಗೆ ಅಧಿಕಾರ ಕೊಟ್ಟಿದ್ದು ಕನ್ನಡಿಗರು. ಅಧಿಕಾರ ಹಂಚಿಕೆ ಮಾತ್ರ ದೆಹಲಿ ನಾಯಕರದ್ದು. ಇದು ರಾಜ್ಯ ರಾಜಕಾರಣದಲ್ಲಿ ಪ್ರತಿಸಲವೂ ಇದು ಕಾಮನ್​​​. ಹಾಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ ದಿಲ್ಲಿ ದೊರೆಗಳ ಜೊತೆ ಕುರ್ಚಿ ಹಂಚಿಕೆ ಸಭೆ ನಡೆಸಿದ್ದಾರೆ.

    MORE
    GALLERIES

  • 29

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಇಂದಿನ ಸಭೆಯಲ್ಲಿ ಸಚಿವ ಪಟ್ಟಿ ಫೈನಲ್​ ಆಗಿದ್ದು, ಆದರೆ ಅಧಿಕೃತವಾಗಿ ರಿಲೀಸ್​ ಮಾಡಿಲ್ಲ. ಏಕೆಂದರೆ ಈಗಲೂ ಸಣ್ಣಪುಟ್ಟ ಹಗ್ಗಜಗ್ಗಾಟ ದೆಹಲಿಯಲ್ಲಿ ನಡೆದಿದೆಯಂತೆ. ಎಐಸಿಸಿ ವಾರ್ ರೂಮ್​ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಹಲವು ನಾಯಕರು ಭಾಗಿಯಾಗಿದ್ದರು.

    MORE
    GALLERIES

  • 39

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಸಭೆಯ ಬಳಿಕ ಎಐಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪಟ್ಟಿಗೆ ಅಂತಿಮ ಮುದ್ರೆ ಹಾಕಿದ್ದು, 24 ಸಚಿವರ ಪಟ್ಟಿ ಅಂತಿಮ ಗೊಳಿಸಲಾಗಿದೆಯಂತೆ.

    MORE
    GALLERIES

  • 49

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಶನಿವಾರ 11:45ಕ್ಕೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ದು ಸರ್ಕಾರ ಮನವಿ ಪುರಸ್ಕರಿಸಿದ ರಾಜ್ಯಪಾಲ ಗೆಹ್ಲೋಟ್​ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.

    MORE
    GALLERIES

  • 59

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಯಾರಿಗೆ ಮಂತ್ರಿಗಿರಿ?:
    ಲಿಂಗಾಯತ ಸಮುದಾಯದಲ್ಲಿ ಈಶ್ವರ ಖಂಡ್ರೆ (ಭಾಲ್ಕಿ), ಶಿವಾನಂದ ಪಾಟೀಲ್ (ಬಸವನಬಾಗೇವಾಡಿ), ರೆಡ್ಡಿ ಲಿಂಗಾಯತದಲ್ಲಿ ಶರಣಬಸಪ್ಪ ದರ್ಶನಾಪುರ (ಶಹಾಪುರ), ಪಂಚಮಸಾಲಿ ಸಮುದಾಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ), S.S.ಮಲ್ಲಿಕಾರ್ಜುನ (ದಾವಣಗೆರೆ ಉತ್ತರ) ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.

    MORE
    GALLERIES

  • 69

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಒಕ್ಕಲಿಗ ಸಮುದಾಯದಲ್ಲಿ ಡಾ.ಎಂ.ಸಿ ಸುಧಾಕರ್ (ಚಿಂತಾಮಣಿ), ಚೆಲುವರಾಯಸ್ವಾಮಿ (ನಾಗಮಂಗಲ), ಕೆ.ವೆಂಕಟೇಶ್ (ಪಿರಿಯಾಪಟ್ಟಣ) ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

    MORE
    GALLERIES

  • 79

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಎಸ್​ಟಿ ಸಮುದಾಯದಲ್ಲಿ ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಎಸ್​ಸಿ ಸಮುದಾಯದಲ್ಲಿ ಪಿ. ನರೇಂದ್ರ ಸ್ವಾಮಿ (ಮಳವಳ್ಳಿ), ಬೋವಿ ಸಮುದಾಯದಲ್ಲಿ ಶಿವರಾಜ್ ತಂಗಡಗಿ (ಕನಕಗಿರಿ), ಕುರುಬ ಸಮಾಜದಲ್ಲಿ ಬೈರತಿ ಸುರೇಶ್ (ಹೆಬ್ಬಾಳ) ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.

    MORE
    GALLERIES

  • 89

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಮುಸ್ಲಿಂ ಸಮುದಾಯದ ರಹೀಂ ಖಾನ್ (ಬೀದರ್), ಜೈನ ಸಮುದಾಯದಿಂದ ಡಿ.ಸುಧಾಕರ್ (ಹಿರಿಯೂರು), ರಜಪೂತ ಸಮುದಾಯದಿಂದ ಅಜಯ್ ಸಿಂಗ್ (ಜೇವರ್ಗಿ), ಉಪ್ಪಾರ ಸಮುದಾಯದಿಂದ ಸಿ. ಪುಟ್ಟರಂಗ ಶೆಟ್ಟಿ (ಚಾಮರಾಜನಗರ), ಮೊಗವೀರ ಸಮುದಾಯದಿಂದ ಮಂಕಾಳ ವೈದ್ಯ (ಭಟ್ಕಳ) ಅವರಿಗೆ ಸಚಿವ ಸ್ಥಾನ ಫೈನಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 99

    Karnataka Cabinet Expansion: ಶನಿವಾರವೇ ಸಚಿವರ ಪ್ರಮಾಣವಚನ, ಎಲ್ಲಾ ಖಾತೆ ಭರ್ತಿಗೆ ಗ್ರೀನ್‌ಸಿಗ್ನಲ್! ಯಾರಿಗೆಲ್ಲಾ ಸಿಗುತ್ತೆ ಮಂತ್ರಿಸ್ಥಾನ?

    ಉಳಿದಂತೆ ಕಾಂಗ್ರೆಸ್​ನ ಹಿರಿಯ ಶಾಸಕರಿಗಷ್ಟೇ ಅಲ್ಲ, ಪ್ರಭಾವಿ ಕಾಂಗ್ರೆಸ್​ ಶಾಸಕರನ್ನೂ ಈ ಸಲ ಮಂತ್ರಿ ಮಾಡಬೇಕಾ ಬೇಡ್ವಾ ಅನ್ನೋ ಚರ್ಚೆಗೆ ಬಂದಿದೆ. ಪ್ರಮುಖವಾಗಿ ಐವರನ್ನ 50-50 ಲಿಸ್ಟ್​​ನಲ್ಲಿಟ್ಟಿದೆ ಹೈಕಮಾಂಡ್​​​. ಕೃಷಿ, ಕಾನೂನು, ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೃಷ್ಣಬೈರೇಗೌಡ (ಬ್ಯಾಟರಾಯನಪುರ), ಜನತಾದಳದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಸಂತೋಷ್ ಲಾಡ್ (ಕಲಘಟಗಿ), ಎಂಎಲ್​​ಸಿ ಶ್ರೀನಿವಾಸ್ ಮಾನೆ (ಹಾನಗಲ್), ಸೊರಬ ಶಾಸಕರಾದ ಮಧು ಬಂಗಾರಪ್ಪ ಮತ್ತು ಉನ್ನತ ಶಿಕ್ಷಣರಾಗಿ ಕಾರ್ಯನಿರ್ವಹಿಸಿದ್ದ ಬಸವರಾಜ್ ರಾಯರೆಡ್ಡಿ (ಯಲಬರ್ಗಾ) ಅವರಿಗೆ ಸಚಿವ ಸ್ಥಾನ ಸಿಗುವ ಅವಕಾಶ 50-50 ರಷ್ಟಿದೆ.

    MORE
    GALLERIES