Karnataka Cabinet Expansion: ಇದೇ ನಮ್ಮ ಕೊನೆ ಚುನಾವಣೆ ಎಂದಿದ್ದೇ ತಪ್ಪಾಯ್ತು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಕೈ ಹಿರಿಯ ನಾಯಕರಿಗೆ ಶಾಕ್!

Karnataka Cabinet Expansion: ಡಿಕೆ ಶಿವಕುಮಾರ್ ಅವರ ಪ್ರಸ್ತಾಪಕ್ಕೆ ಹೈಕಮಾಂಡ್ ನಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಈ‌ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿಯಂತೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Cabinet Expansion: ಇದೇ ನಮ್ಮ ಕೊನೆ ಚುನಾವಣೆ ಎಂದಿದ್ದೇ ತಪ್ಪಾಯ್ತು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಕೈ ಹಿರಿಯ ನಾಯಕರಿಗೆ ಶಾಕ್!

    ಬೆಂಗಳೂರು: ಸಂಪುಟ ರಚನೆಗಾಗಿ ದೆಹಲಿಯಲ್ಲಿ ಅಂತಿಮ ಹಂತದ ಕಸರತ್ತು ನಡೆಯುತ್ತಿದೆ. ನಿನ್ನೆಯೇ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ತಮ್ಮ ಪಟ್ಟಿ ಹಿಡಿದು ಸಭೆ ಮೇಲೆ ಸಭೆಯಲ್ಲಿ ಭಾಗಿಯಾದ್ದರು.

    MORE
    GALLERIES

  • 27

    Karnataka Cabinet Expansion: ಇದೇ ನಮ್ಮ ಕೊನೆ ಚುನಾವಣೆ ಎಂದಿದ್ದೇ ತಪ್ಪಾಯ್ತು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಕೈ ಹಿರಿಯ ನಾಯಕರಿಗೆ ಶಾಕ್!

    ನಿನ್ನೆ ವೇಣುಗೋಪಾಲ್ ಮನೆಯಲ್ಲಿ ಸಭೆ ನಡೆದಿದ್ದು, ಇಂದು ಕೂಡ ಮುಂದುವರಿದಿದೆ. ವೇಣುಗೋಪಾಲ್​ ನಿವಾಸದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲೂ ಸಭೆ ನಡೆದಿದೆ.

    MORE
    GALLERIES

  • 37

    Karnataka Cabinet Expansion: ಇದೇ ನಮ್ಮ ಕೊನೆ ಚುನಾವಣೆ ಎಂದಿದ್ದೇ ತಪ್ಪಾಯ್ತು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಕೈ ಹಿರಿಯ ನಾಯಕರಿಗೆ ಶಾಕ್!

    ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿ ತಮ್ಮ ತಮ್ಮವರ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಆದರೆ ಇನ್ನು ಮೂರ್ನಾಲ್ಕು ಬಾರಿ ಮಂತ್ರಿ ಆದವರಿಗೆ ಮತ್ತೆ ಮಂತ್ರಿ ಸ್ಥಾನ ನೀಡದಂತೆ ಡಿಕೆ ಶಿವಕುಮಾರ್ ಹೇಳಿದ್ದಾರಂತೆ.

    MORE
    GALLERIES

  • 47

    Karnataka Cabinet Expansion: ಇದೇ ನಮ್ಮ ಕೊನೆ ಚುನಾವಣೆ ಎಂದಿದ್ದೇ ತಪ್ಪಾಯ್ತು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಕೈ ಹಿರಿಯ ನಾಯಕರಿಗೆ ಶಾಕ್!

    ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡೋಣಾ ಅಂತ ಸಿದ್ದರಾಮಯ್ಯ ಲಿಸ್ಟ್​ನಲ್ಲಿದ್ದ, ಹೆಚ್.ಸಿ ಮಹದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಕೆ.ಎನ್ ರಾಜಣ್ಣ, ಆರ್.ವಿ ದೇಶಪಾಂಡೆ ಹಾಗೂ ರಾಯರೆಡ್ಡಿಗೆ ಮಂತ್ರಿಗಿರಿ ನೀಡಲು ಡಿಕೆ ಶಿವಕುಮಾರ್ ವಿರೋಧ ವ್ಯಕ್ತಿಪಡಿಸಿದ್ದಾರಂತೆ.

    MORE
    GALLERIES

  • 57

    Karnataka Cabinet Expansion: ಇದೇ ನಮ್ಮ ಕೊನೆ ಚುನಾವಣೆ ಎಂದಿದ್ದೇ ತಪ್ಪಾಯ್ತು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಕೈ ಹಿರಿಯ ನಾಯಕರಿಗೆ ಶಾಕ್!

    ಮೂರ್ನಾಲ್ಕು ಬಾರಿ ಮಂತ್ರಿ ಆದವರಿಗೆ ಮತ್ತೆ ಸ್ಥಾನ ಬೇಡ, ಹೊಸ ಮುಖಗಳಿಗೆ ಅವಕಾಶ ಕೊಡುವಂತೆ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದು, ಮುಂದಿನ‌ ಬಾರಿ ಚುನಾವಣೆ ಎದುರಿಸದ ಶಾಸಕರಿಗೆ ಯಾಕೆ ಮಂತ್ರಿಗಿರಿ ಎಂಬ ಬಗ್ಗೆ ಚರ್ಚೆ ಜೋರಾಗಿದೆಯಂತೆ.

    MORE
    GALLERIES

  • 67

    Karnataka Cabinet Expansion: ಇದೇ ನಮ್ಮ ಕೊನೆ ಚುನಾವಣೆ ಎಂದಿದ್ದೇ ತಪ್ಪಾಯ್ತು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಕೈ ಹಿರಿಯ ನಾಯಕರಿಗೆ ಶಾಕ್!

    ಇದರಿಂದ ಕೊನೆಯ ಚುನಾವಣೆ ಅಂತ ಹೇಳಿ ಗೆದ್ದು ಬಂದಿರುವ ಕೆಲ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ಸಚಿವರಾಗಿ ಅವಧಿ ಮುಗಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಇಂತಹವರಿಗೆ ಸಚಿವಗಿರಿ ಕೊಟ್ಟು ಪ್ರಯೋಜನವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟಿರುವ ಡಿಕೆ ಶಿವಕುಮಾರ್, ಹಿರಿಯರ ಬದಲು ಯುವಕರಿಗೆ ಅವಕಾಶ ಕೊಡಿ. ಹಿರಿಯ ನಾಯಕರಿಗೆ ತಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಅವಕಾಶ ನೀಡಿದಂತೆ ಆಗುತ್ತದೆ ಎಂದು ಹೈಕಮಾಂಡ್​ಗೆ ಮನವಿ ಮಾಡಿದ್ದಾರಂತೆ.

    MORE
    GALLERIES

  • 77

    Karnataka Cabinet Expansion: ಇದೇ ನಮ್ಮ ಕೊನೆ ಚುನಾವಣೆ ಎಂದಿದ್ದೇ ತಪ್ಪಾಯ್ತು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿರುವ ಕೈ ಹಿರಿಯ ನಾಯಕರಿಗೆ ಶಾಕ್!

    ಡಿಕೆ ಶಿವಕುಮಾರ್ ಅವರ ಪ್ರಸ್ತಾಪಕ್ಕೆ ಹೈಕಮಾಂಡ್ ನಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಈ‌ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿಯಂತೆ. ಈ ಎಲ್ಲದರ ನಡುವೆ ಮೇ 27ನೇ ತಾರೀಖು ಸಚಿವ ಸಂಪುಟ ವಿಸ್ತರಣೆ ದಿನಾಂಕ ನಿಗದಿ ಸಾಧ್ಯತೆ ಇದೆ.

    MORE
    GALLERIES