Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 31 ನೇ ತಾರೀಖು  ವಾಟಾಳ್ ನಾಗರಾಜ್ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿದ್ದಾರೆ. ಅದರ ಹಿಂದಿನ ದಿನ ನಾವು ಪ್ರತಿಭಟನೆ ಮಾಡಲಿದ್ದೇವೆ ಎಂದರು.

First published:

  • 18

    Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಬೆಂಗಳೂರು(ಡಿ.24): ಎಂಇಎಸ್​ ದಬ್ಬಾಳಿಕೆ ಹಾಗೂ ಪುಂಡಾಟಿಕೆ ವಿರೋಧಿಸಿ, ಸಂಘಟನೆಯನ್ನು ಕರ್ನಾಟಕಲ್ಲಿ ನಿಷೇಧಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್​ಗೆ ಕರೆ ಕೊಟ್ಟಿವೆ.

    MORE
    GALLERIES

  • 28

    Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ಧಾರೆ. ಅದರಂತೆ ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಬಂದ್ ಆಗಲಿದೆ. ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿವೆ ಎಂದು ವಾಟಾಳ್​ ನಾಗರಾಜ್​ ಹೇಳಿದ್ದಾರೆ. 

    MORE
    GALLERIES

  • 38

    Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಆದರೆ ಈ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 31ರ ಬಂದ್​ಗೆ ಕರವೇ ನಾರಾಯಣ್​ಗೌಡ ಬಣ ಬೆಂಬಲ ವ್ಯಕ್ತಪಡಿಸಿಲ್ಲ. ಹೌದು, ಬಂದ್​​ಗೆ ಬೆಂಬಲ ವ್ಯಕ್ತಪಡಿಸದ ಕರವೇ ನಾರಾಯಣ್​​ಗೌಡ ಬಣದಿಂದ ಮುಂದಿನ ಹೋರಾಟದ ಬಗ್ಗೆ ಮಹತ್ವದ ಸಭೆ ನಡೆದಿದೆ. 

    MORE
    GALLERIES

  • 48

    Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಎಂಇಎಸ್ ವಿರುದ್ಧ ಮುಂದಿನ ಹೋರಾಟದ‌ ರೂಪು-ರೇಷೆ ಕುರಿತು ಸಭೆ ನಡೆಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಇದೇ ತಿಂಗಳ 28 ರಂದು ಕರವೇ ಕಾರ್ಯಕರ್ತರು ಜಿಲ್ಲಾಕೇಂದ್ರಗಳ‌ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಬಳಿಕ ಡಿ. 30 ರಂದು ರಾಜಭವನ‌ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದಾರೆ.

    MORE
    GALLERIES

  • 58

    Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 31 ನೇ ತಾರೀಖು  ವಾಟಾಳ್ ನಾಗರಾಜ್ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿದ್ದಾರೆ. ಅದರ ಹಿಂದಿನ ದಿನ ನಾವು ಪ್ರತಿಭಟನೆ ಮಾಡಲಿದ್ದೇವೆ.  ಬೆಳಗಾವಿ ವಿಚಾರದಲ್ಲಿ ಕರ್ನಾಟಕ‌ ರಕ್ಷಣಾ ವೇದಿಕೆ ಇವತ್ತು ಹೋರಾಟ ಮಾಡ್ತಾ ಇಲ್ಲ.  ಬೆಳಗಾವಿಯ ರಕ್ಷಣೆಗಾಗಿ ಬಹಳ ಬಲಿಷ್ಟವಾಗಿ ನಾವು ನಿಂತಿದ್ದೇವೆ ಎಂದು ಹೇಳಿದರು.

    MORE
    GALLERIES

  • 68

    Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    28 ನೇ ತಾರೀಖಿನಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಿದ್ದೇವೆ.  ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ನಾವು ಮುತ್ತಿಗೆ ಹಾಕುತ್ತೇವೆ 30 ನೇ ತಾರೀಖು ಬಿಬಿಎಂಪಿ ಕಚೇರಿ ಮುಂಭಾಗದಿಂದ ಪ್ರತಿಭಟನೆ ನಡೆಸುತ್ತೇವೆ.  ರ್ಯಾಲಿ ಮೂಲಕವಾಗಿ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದೇವೆ.  ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ‌ ಕೆಲಸ ಮಾಡುತ್ತೇವೆ ಎಂದರು.

    MORE
    GALLERIES

  • 78

    Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಡಿ.30ರ‌ ನಂತರ ಮತ್ತೊಮ್ಮೆ ಸಭೆಯನ್ನು ಮಾಡಲಿದ್ದೇವೆ.  ಸರ್ಕಾರ ಮಂತ್ರಿಗಳ ವಿರುದ್ದ ಕಪ್ಪು ಬಾವುಟ ಹಾರಿಸುವ ಕೆಲಸ ಮಾಡುತ್ತೇವೆ. ಬಹಳ ದೊಡ್ಡ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ರಾಜಭವನ ಮುತ್ತಿಗೆ ಹಾಕಲು ಬರ್ತಾರೆ.

    MORE
    GALLERIES

  • 88

    Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಡಿ. 31 ರ ಬಂದ್ ದಿನ ನಮ್ಮ ಯಾವ ಕಾರ್ಯಕರ್ತರು ಭಾಗಿಯಾಗಲ್ಲ.  ನಾವು ಡಿ.30 ರಂದು ಪ್ರತ್ಯೇಕವಾಗಿ ಪ್ರತಿಭಟನೆ ಮಾಡುತ್ತೇವೆ. ಸುಮಾರು 10 ಸಾವಿರ ಜನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ನಾರಾಯಣಗೌಡ ಹೇಳಿದರು.

    MORE
    GALLERIES