Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

ತುಳುನಾಡು ದೈವಗಳ ನೆಲೆವೀಡು. ಇಲ್ಲಿ ದೈವಗಳೆಂದರೆ ಎಷ್ಟು ಭಯ ಭಕ್ತಿ ಇದೆಯೋ ಅಷ್ಟೇ ಪ್ರೀತಿಯೂ ತುಳುನಾಡಿನ ಜನರಿಗಿದೆ. ಕರಾವಳಿ ಭಾಗದ ಜನರು ಒಂದು ಕ್ಷಣ ದೇವರನ್ನು ಬೇಕಾದರೂ ಮರೆತು ಬಿಟ್ಟಾರು, ಆದರೆ ದೈವಗಳನ್ನು ಮಾತ್ರ ಎಂದಿಗೂ ಮರೆಯೋದಿಲ್ಲ. ಯಾವುದೇ ಕೆಲಸ ಕಾರ್ಯಕ್ಕೆ ಇಳಿಯುವ ಮುನ್ನ ದೈವಗಳನ್ನು ನೆನೆಯೋದು ಬಹುತೇಕ ತುಳು ಜನರ ವಾಡಿಕೆ. ಇತ್ತೀಚಿನ ದಿನಗಳಲ್ಲಿ ಕೊರಗಜ್ಜ ದೈವದ ಬಗ್ಗೆ ಸಾಕಷ್ಟು ಜನರು ಅಲ್ಲಿಲ್ಲಿ ಕೇಳಿ ತಿಳಿದುಕೊಂಡಿರುತ್ತಾರೆ. ಆದರೆ ಕೊರಗಜ್ಜ ದೈವ ಮಾತ್ರವಲ್ಲ ತುಳುನಾಡಿನಲ್ಲಿ ಸಾವಿರಕ್ಕೂ ಹೆಚ್ಚು ದೈವಗಳು ಇಂದಿಗೂ ತನ್ನ ಶಕ್ತಿ, ಕಲೆ ಕಾರಣಿಕವನ್ನು ಭಕ್ತರಿಗೆ ತೋರಿಸುತ್ತಲೇ ಬಂದಿವೆ.

First published:

  • 18

    Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

    ಕಾಂತಾರ ಸಿನಿಮಾ ಬಂದ ಮೇಲಂತೂ ಪಂಜುರ್ಲಿ ದೈವ ಕರಾವಳಿ ಹೊರತಾದ ಜನರಿಗೂ ಸಾಕಷ್ಟು ಪರಿಚಯವಾಗಿದೆ. ಅದರ ಜೊತೆ ಜೊತೆಗೆನೇ ತನ್ನ ಪವಾಡದ ಕಾರಣಕ್ಕೆನ ಕೊರಗಜ್ಜ ದೈವವೂ ಸಾಕಷ್ಟು ಭಕ್ತರನ್ನು ತನ್ನಡೆಗೆ ಸೆಳೆಯುತ್ತಿದೆ. ಆದರೆ ಅಷ್ಟೇ ಶಕ್ತಿ ಮತ್ತು ಪವಾಡದ ಕಾರಣಕ್ಕೆ ಕಲ್ಲುರ್ಟಿ ದೈವವೂ ಪ್ರಸಿದ್ಧಿಯನ್ನು ಪಡೆದಿದೆ.

    MORE
    GALLERIES

  • 28

    Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

    ಕಲ್ಲುರ್ಟಿ ದೈವವೆಂದರೆ ತುಳುನಾಡಿನ ಪ್ರತಿಯೊಬ್ಬರ ಮನೆಯಲ್ಲಿ ಇರುವ ಕುಟುಂಬದ ದೈವವಾಗಿ ಆರಾಧಿಸಲ್ಪಡುತ್ತದೆ. ಕಲ್ಲುರ್ಟಿ ದೈವಕ್ಕೆ ತುಳುವರು ತಾಯಿಯ ಸ್ಥಾನವನ್ನು ನೀಡುತ್ತಾರೆ.

    MORE
    GALLERIES

  • 38

    Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

    ಮನೆ, ಕುಟುಂಬದಲ್ಲಿ ಏನೇ ಸಮಸ್ಯೆ, ಕಲಹ ಉಂಟಾದರೆ ಅದರ ದೂರು ಹೋಗುವುದು ಮೊದಲು ಕಲ್ಲುರ್ಟಿಯ ಬಳಿಗೆ. ಅದೆಂತಹದೇ ಕಠಿಣ ಸಮಸ್ಯೆಗಳಿದ್ದರೂ ಕಲ್ಲುರ್ಟಿ ದೈವ ಪ್ರೀತಿಯಿಂದಲೋ, ಗದರಿಸಿಯೋ, ಬುದ್ಧಿವಾದ ಹೇಳಿಯೋ ಪರಿಹಾರ ಮಾಡುತ್ತದೆ.

    MORE
    GALLERIES

  • 48

    Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

    ‘ನೀನು ಎಷ್ಟೇ ದೂರ ಹೋದರೂ, ತಾಯಿಯಾಗಿ, ತಂದೆಯಾಗಿ, ಮಾವನಾಗಿ ನಿನ್ನ ಬೆಂಗಾವಲಾಗಿ ನಾನು ಇರುತ್ತೇನೆ’ ಎಂದು ಕಲ್ಲುರ್ಟಿ ತಾಯಿ ತನ್ನ ಭಕ್ತ ಸಂಸಾರಕ್ಕೆ ಅಭಯ ನೀಡುತ್ತಾಳೆ.

    MORE
    GALLERIES

  • 58

    Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

    ಕಲ್ಲುರ್ಟಿ ದೈವ ತನ್ನ ಭಕ್ತರನ್ನು ‘ತನ್ನ ಸಂಸಾರ’ ಎಂದೇ ಹೇಳಿಕೊಂಡು ಬರುತ್ತಾಳೆ. ಕಷ್ಟದಿಂದ ಕಣ್ಣೀರು ಹಾಕುವ ತನ್ನ ‘ಮಕ್ಕಳ’ ನೋವಿಗೆ ಕಾರಣನಾದ ಯಾರನ್ನೂ ಕಲ್ಲುರ್ಟಿ ದೈವ ಸುಮ್ಮನೆ ಬಿಟ್ಟ ಉದಾಹರಣೆ ಇಲ್ಲ.

    MORE
    GALLERIES

  • 68

    Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

    ಕಲ್ಲುರ್ಟಿ ದೈವಸ್ಥಾನಕ್ಕೆ ಬಂಟ್ವಾಳ ತಾಲೂಕಿನ ಪಣೋಲಿಬೈಲು ಕ್ಷೇತ್ರ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ದಿನನಿತ್ಯ ಸಾವಿರಾರು ಭಕ್ತರು ಹರಕೆ ಸಲ್ಲಿಸಲೆಂದೇ ಬರುತ್ತಾರೆ.

    MORE
    GALLERIES

  • 78

    Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

    ಕಲ್ಲುರ್ಟಿ ದೈವಕ್ಕೆ ‘ಅಗೇಲು ಸೇವೆ’ ಬಲುಪ್ರಿಯ. ಒಂದು ಮೊಟ್ಟೆ ಇಡದ ಹೆಣ್ಣು ಕೋಳಿ, 1 ಕೆಜಿ ಕುಚ್ಚಲಕ್ಕಿ, 3 ಬಾಲೆ ಎಳೆ, 2 ತೆಂಗಿನ ಕಾಯಿ, ಕಾಡ ಗುಡ್ಡೆಯಲ್ಲಿ ಸಿಗುವ ಕೆಂಪು (ಕೇಪುಳ ಹೂ) ಇದು ಕಲ್ಲುರ್ಟಿ ದೈವದ ಅಗೇಲು ಸಾಮಾನಿನ ಪಟ್ಟಿ. ಯಾವುದೇ ಬೆಲೆ ಬಾಳುವ, ಹೆಚ್ಚು ಹಣ ಖರ್ಚಾಗುವ ವಸ್ತುವನ್ನು ಕಲ್ಲುರ್ಟಿ ಬಯಸಲ್ಲ.

    MORE
    GALLERIES

  • 88

    Kallurti Daiva: ಕೊರಗಜ್ಜನಷ್ಟೇ ಕಾರಣಿಕದ ದೈವ ಕಲ್ಲುರ್ಟಿಯ ಬಗ್ಗೆ ನಿಮಗೆಷ್ಟು ಗೊತ್ತು? ತುಳುವರು ಭಯಪಡುವ ತಾಯಿ ಇವಳು!

    ಪಣೋಲಿಬೈಲು ಕಲ್ಲುರ್ಟಿ ದೈವದ ಕಾರ್ಣಿಕದ ಕ್ಷೇತ್ರ. ಇಲ್ಲಿ ವಾರದಲ್ಲಿ 3 ದಿನ (ಭಾನುವಾರ, ಮಂಗಳವಾರ ಮತ್ತು ಶುಕ್ರವಾರ) ಅಗೇಲು ಸೇವೆ ನಡೆಯುತ್ತದೆ. ಪ್ರತಿನಿತ್ಯ 3ರಿಂದ 5 ಸಾವಿರ ತನಕ ಅಗೇಲು ಸೇವೆ ಭಕ್ತರಿಂದ ಹರಕೆ ರೂಪದಲ್ಲಿ ಬರುತ್ತದೆ.

    MORE
    GALLERIES