Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ

ಭರ್ಜರಿ ಪ್ರಚಾರ ನಡುವೆ ಜನಾರ್ದನ ರೆಡ್ಡಿ ಅವರು ತಂದೆ-ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೂಡ ದತ್ತು ಪಡೆದುಕೊಂಡು ಮಾನವೀಯತೆ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ವೀರುಪಾಪುರ ತಾಂಡದ ಮಕ್ಕಳಾದ ಜ್ಯೂತಿ ಸ್ವರೂಪ್, ವೇಣು ಎಂಬವರನ್ನು ಅಧಿಕೃತವಾಗಿ ದತ್ತು ಪಡೆದುಕೊಂಡಿದ್ದಾರೆ.

First published:

  • 17

    Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ

    ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅರುಣಾ ಲಕ್ಷ್ಮಿ ಭರ್ಜರಿಯಾಗಿ ಪ್ರಚಾರ ನಡೆಸಿದ್ದಾರೆ. ಬಂಜಾರ ಸಮುದಾಯದ ಉಡುಗೆ ತೊಟ್ಟು ಜನಾರ್ದನರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಪ್ರಚಾರ ಮಾಡಿದ್ದು, ಲಂಬಾಣಿ ಸಮುದಾಯ ಮುಖಂಡರು ಜನಾರ್ದನ ರೆಡ್ಡಿಗೆ ಬೆಳ್ಳಿ ಕಿರೀಟ ತೊಡಿಸಿದರು.

    MORE
    GALLERIES

  • 27

    Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ

    ಈಗಾಗಲೇ ಜನಾದರ್ಶನ ರೆಡ್ಡಿ ಅವರ ಕೆಆರ್​ಪಿಪಿ ಪಕ್ಷದಿಂದ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇದೇ ತಿಂಗಳ 30ರ ಒಳಗಾಗಿ 30ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

    MORE
    GALLERIES

  • 37

    Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ

    ಇಬ್ಬರು ಮಕ್ಕಳನ್ನು ದತ್ತು ಪಡೆದ ರೆಡ್ಡಿ: ಭರ್ಜರಿ ಪ್ರಚಾರ ನಡುವೆ ಜನಾರ್ದನ ರೆಡ್ಡಿ ಅವರು ತಂದೆ-ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೂಡ ದತ್ತು ಪಡೆದುಕೊಂಡು ಮಾನವೀಯತೆ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ವೀರುಪಾಪುರ ತಾಂಡದ ಮಕ್ಕಳಾದ ಜ್ಯೂತಿ ಸ್ವರೂಪ್, ವೇಣು ಎಂಬವರನ್ನು ಅಧಿಕೃತವಾಗಿ ದತ್ತು ಪಡೆದುಕೊಂಡಿದ್ದಾರೆ. ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿ ಅವರು ವಹಿಸಿಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿ ದತ್ತು ಸ್ವೀಕಾರ ಮಾಡಿದ್ದಾರೆ.

    MORE
    GALLERIES

  • 47

    Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ

    ಗಂಗಾವತಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಈಗಾಗಲೇ‌ ರಾಜ್ಯಾದ್ಯಂತ 12 ಅಭ್ಯರ್ಥಿ ಘೋಷಣೆ ಮಾಡಿದ್ದೀನಿ. ಇದೇ ತಿಂಗಳ 30ರ ಒಳಗಾಗಿ 30ಕ್ಕೂ ಹೆಚ್ಚು ಅಭ್ಯರ್ಥಿಗಳ ಘೋಷಣೆ ಆಗಲಿದೆ. ಬಿಜೆಪಿಯ ಸಾಲು- ಸಾಲು ನಾಯಕರು ಗಂಗಾವತಿಗೆ ಬಂದು ಅಬ್ಬರದ ಪ್ರಚಾರ ಮಾಡಿದ್ದಾರೆ. ಬಿಜೆಪಿ ನಾಯಕರು ಈಗಲಾದರೂ ಗಂಗಾವತಿ ಕಡೆಗೆ ಬರುತ್ತಿದ್ದಾರೆ. ನನ್ನಿಂದ ಗಂಗಾವತಿಗೆ ಬಂದಿದ್ದು ಖುಷಿ ಆಗಿದೆ. ಐದು ವರ್ಷ ಒಮ್ಮೆಯೂ ಬಂದಿರಲಿಲ್ಲ ಎಂದು ಮಾತಿನಲ್ಲೇ ಬಿಜೆಪಿ ನಾಯಕರಿಗೆ ತಿವಿದರು.

    MORE
    GALLERIES

  • 57

    Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ

    ಅಲ್ಲದೆ, ಮೂರು ತಿಂಗಳಲ್ಲಿ ಗಂಗಾವತಿ, ಕೊಪ್ಪಳದಲ್ಲಿ ಬಟ್ಟೆ ತಯಾರಿಕ ಘಟಕ ಆರಂಭ ಮಾಡಲಾಗುತ್ತದೆ. ತಲಾ 5 ಕೋಟಿ ರೂಪಾಯಿಯಲ್ಲಿ ಬಟ್ಟೆ ತಯಾರಿಕ ಘಟಕಗಳ ಆರಂಭ ಮಾಡುತ್ತೇನೆ. ಬಟ್ಟೆ ತಯಾರಕ ಘಟಕದ ಹೊಲಿಗೆ ತರಬೇತಿ, ಹೊಲಿಗೆ ಯಂತ್ರ ನೀಡಲಾಗುವುದು. ಬಟ್ಟೆ ತಯಾರಕರು ಪ್ರತಿ ತಿಂಗಳು 40 ಸಾವಿರ ರೂಪಾಯಿಯವರೆಗೂ ದುಡಿಯುವ ಅವಕಾಶವಿದೆ ಎಂದು ಹೇಳಿದರು.

    MORE
    GALLERIES

  • 67

    Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ

    ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ, ಈ ವಿಚಾರದಲ್ಲಿ ತುಂಬಾ ಕ್ಲಿಯರ್ ಇದ್ದೇನೆ. ನಾನು ಕೆಆರ್​​ಪಿಪಿಯಿಂದಲೇ ಚುನಾವಣೆ ಎದುರಿಸುತ್ತೇನೆ‌ ಎಂದರು. ಉರಿಗೌಡ, ನಂಜೇಗೌಡ ಕುರಿತಂತೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

    MORE
    GALLERIES

  • 77

    Janardhana Reddy: ಲಂಬಾಣಿ ಡ್ರೆಸ್​​ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ

    ಇದೇ ವೇಳೆ ಸಿದ್ದರಾಮಯ್ಯರ ಕ್ಷೇತ್ರ ಗೊಂದಲ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಅವರವರ ಪಕ್ಷದವರಿಗೆ ಬಿಟ್ಟಿದ್ದು ಎಂದರು. ಅಲ್ಲದೆ, ತಮ್ಮ ಕೆಆರ್​​ಪಿಪಿ ಪಕ್ಷಯನ್ನು ಯುಗಾದಿ ಒಳಗಾಗಿ ಕ್ಲಿಯರ್​​ ಆಗಲಿದೆ.

    MORE
    GALLERIES