Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆ ಫಟ್ಟ ಪ್ರದೇಶದ ತಪ್ಪಲಿನಲ್ಲಿರುವ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು, ಬಾಳುಗೋಡು, ಹರಿಹರಪಳ್ಳತ್ತಡ್ಕ ಮೊದಲಾದ ಭಾಗದಲ್ಲಿ ಭಾರೀ ಅನಾಹುತವನ್ನು ಸೃಷ್ಟಿಸಿದೆ. ಕಲ್ಮಕಾರು, ಕಡಮಕಲ್ಲು ಮೊದಲಾದ ಬೆಟ್ಟಗಳಲ್ಲಿ ಉಂಟಾದ ಭಾರೀ‌ ಮೇಘಸ್ಪೋಟದಿಂದಾಗಿ ಈ ಭಾಗದ ಹಲವು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

First published:

  • 112

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಜರಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ದಕ್ಷಿಣ ಕನ್ನಡ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪಕ್ಕದಲ್ಲಿ ಹರಿಯುವ ದರ್ಪಣ ತೀರ್ಥ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ರೌದ್ರಾವತಾರದಲ್ಲಿ ಹರಿದ ಪರಿಣಾಮ ನದಿ ನೀರು ಆದಿ ಸುಬ್ರಹ್ಮಣ್ಯ ಕ್ಷೇತ್ರವನ್ನು ಭಾಗಶಃ ಮುಳುಗಿಸಿದೆ.

    MORE
    GALLERIES

  • 212

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ದರ್ಪಣ ತೀರ್ಥ ಹೊಳೆಯ ನೀರು ಆದಿ ಸುಬ್ರಹ್ಮಣ್ಯ ಕ್ಷೇತ್ರದ ಒಳಗೂ ಹರಿದ ಪರಿಣಾಮ ಲೋಡುಗಟ್ಟಲೆ ಮಣ್ಣಿನ ರಾಶಿ ಕ್ಷೇತ್ರದ ಒಳಗೆ ಸೇರಿಕೊಂಡಿದೆ. ಕ್ಷೇತ್ರದ ಸಿಬ್ಬಂದಿಗಳು ಹಾಗೂ ಸ್ಥಳೀಯರು ದೇವಸ್ಥಾನದ ಮಣ್ಣನ್ನು ಹೊರ ಹಾಕುವ ಮೂಲಕ ಕ್ಷೇತ್ರವನ್ನು ಶುಚಿಗೊಳಿಸಿದ್ದಾರೆ.

    MORE
    GALLERIES

  • 312

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ತಡರಾತ್ರಿ ಸುಮಾರು 1.30 ರ ವೇಳೆಗೆ ಕಲ್ಮಕಾರು,  ಕಡಮಕಲ್ಲು ಬೆಟ್ಟದಿಂದ ಹರಿದ ಭಾರೀ ಪ್ರಮಾಣದ ನೀರು ಹರಿಹರಪಳ್ಳತ್ತಡ್ಕ, ಕೊಲ್ಲಮೊಗರು,ಕಲ್ಮಕಾರು ಭಾಗದ ಹಲವು ಮನೆಗಳಿಗೆ ಹಾನಿ ಮಾಡಿದೆ. ಹತ್ತಕ್ಕೂ ಮಿಕ್ಕಿದ ಅಂಗಡಿಗಳು ಸಂಪೂರ್ಣ ನಾಶವಾಗಿದ್ದು, ನೀರಿನ ಈ ರೌದ್ರಾವತಾರದಿಂದ ಹಲವು ಕುಟುಂಬಗಳು ಬೀದಿ ಪಾಲಾಗಿದೆ.

    MORE
    GALLERIES

  • 412

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಹರಿಹರಪಳ್ಳತ್ತಡ್ಕ ಪೇಟೆಯಲ್ಲಿ ಹೋಟೆಲ್ ನಡೆಸಿಕೊಂಡಿದ್ದ ಪ್ರಕಾಶ್ ಎನ್ನುವವರಿಗೆ ಸೇರಿದ ಕಟ್ಟಡ ಸಂಪೂರ್ಣವಾಗಿ ನದಿ ಪಾಲಾಗಿದೆ. 12 ಗಂಟೆವರೆಗೆ ಇದ್ದ ಹೋಟೆಲ್ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ನಾಮಾವಶೇಷವಿಲ್ಲದಂತಾಗಿದೆ. ಹರಿಹರಪಳ್ಳತ್ತಡ್ಕ ಹೊಳೆಯ ಪಕ್ಕದಲ್ಲಿರುವ ಹಲವು ಮನೆ ಹಾಗು ಅಂಗಡಿಗೆ ನುಗ್ಗಿದ ಪ್ರವಾಹದ ನೀರು ಆ ಭಾಗದ ಎಲ್ಲಾ ಅಂಗಡಿಗಳಿಗೆ ಭಾರೀ ನಷ್ಟ ಉಂಟು ಮಾಡಿದೆ.

    MORE
    GALLERIES

  • 512

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಪ್ರವಾಹದ ನೀರಿನ ಜೊತೆಗೆ ಬೃಹತ್ ಗಾತ್ರದ ಮರಗಳೂ ಹರಿದು ಬಂದ ಕಾರಣ ಹಲವಾರು ಸೇತುವೆಗಳು ನಾಶವಾಗಿದೆ‌. ಹರಿಹರಪಳ್ಳತ್ತಡ್ಕ- ಬಾಳುಗೋಡು ಸಂಪರ್ಕಿಸುವ ಸೇರುವೆ ಹಾಗು ರಸ್ತೆ ಕುಸಿತಗೊಂಡಿದ್ದು, ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರಿಸಿದ್ದಲ್ಲಿ ರಸ್ತೆ ಮತ್ತಷ್ಟು ಕುಸಿತಗೊಳ್ಳುವ ಸ್ಥಿತಿಗೆ ತಲುಪಿದೆ.

    MORE
    GALLERIES

  • 612

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಕಲ್ಮಕಾರು,ಕೊಪ್ಪ, ಶೆಟ್ಟಿಕಟ್ಟ ಮೊದಲಾದ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಯ ಒಂದು ಭಾಗ ನೀರಿಗೆ ಕೊಚ್ಚಿಹೋದ ಪರಿಣಾಮ ಮುನ್ನೂರಕ್ಕೂ ಮಿಕ್ಕಿದ ಮನೆಗಳ ಸಂಪರ್ಕವೇ ಕಡಿದಂತಾಗಿದೆ. ಕಲ್ಮಕಾರು ಪೇಟೆ ಸಂಪರ್ಕಿಸಲು ಹಾಗು ಇತರ ಭಾಗಗಳಿಗೆ ತೆರಳಲು ಯಾವುದೇ ಇತರ ಪರ್ಯಾಯ ಮಾರ್ಗ ಇಲ್ಲದೆ ಈ ಭಾಗದ ಜನ ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ.

    MORE
    GALLERIES

  • 712

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಈ ಭಾಗದ ಜನ ಇದೀಗ ತಮ್ಮ ಮನೆ ಸೇರುವ ಕಾರಣಕ್ಕಾಗಿ ಕೊಚ್ಚಿ ಹೋಗಿ ಉಳಿದಿರುವ ಸೇತುವೆಗೆ ಅಡಿಕೆಯ ಮರದಿಂದ ತಯಾರಿಸಿದ ಕಾಲ್ಸೇತುವೆಯನ್ನು ನಿರ್ಮಿಸಿ ತಮ್ಮ ಅನಿವಾರ್ಯತೆಗಾಗಿ ಇದನ್ನೇ ಉಪಯೋಗಿಸಲಾರಂಭಿಸಿದ್ದಾರೆ. ಪ್ರವಾಹದ ನೀರಿನಿಂದಾಗಿ ನೂರಾರು ಎಕರೆ ಕೃಷಿ ಭೂಮಿಯೂ ನಾಶವಾಗಿದ್ದು, ಅಡಿಕೆ ಹಾಗು ತೆಂಗಿನ ಕಾಯಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ.

    MORE
    GALLERIES

  • 812

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಪ್ರವಾಹದಿಂದ ಹೆಚ್ಚಿನ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಸುಳ್ಯ ಶಾಸಕ ಮತ್ತು ಸಚಿವರಾದ ಎಸ್.ಅಂಗಾರ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದಾಗಿ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ಒದಗಿಸಲು ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    MORE
    GALLERIES

  • 912

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ನಾಲ್ಕು ಗ್ರಾಮಗಳಲ್ಲಿ ಆದ ಈ ನಷ್ಟವನ್ನು ಅಂದಾಜಿಸಿ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು. ಅಧಿಕಾರಿಗಳ ವರದಿಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದ್ದಾರೆ.

    MORE
    GALLERIES

  • 1012

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಜನತೆ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸರಕಾರ ನಿಮ್ಮ ಜೊತೆಗಿದೆ. ಅನಿವಾರ್ಯ ಸಂದರ್ಭದಲ್ಲಿ ಅಪಾಯದಲ್ಲಿರುವ ಮನೆ ಮಂದಿಯನ್ನು ಜಿಲ್ಲಾಡಳಿತ ಬೇರೆ ಕಡೆಗಳಿಗೆ ಸ್ಥಳಾಂತರಿಸುವ ಕೆಲಸ ಮಾಡಲಿದ್ದು, ಜನತೆ ಅಧಿಕಾರಿಗಳ ಜೊತೆ ಸ್ಪಂದಿಸಬೇಕೆಂದು ಸಚಿವರು ಇದೇ ಸಂದರ್ಭದಲ್ಲಿ ಮನವಿಯನ್ನೂ ಮಾಡಿದ್ದಾರೆ‌.

    MORE
    GALLERIES

  • 1112

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾನಿಯ ಖುದ್ದು ಪರಿಶೀಲನೆಯನ್ನು ನಡೆಸಿದ್ದು, ಹಾನಿಗೊಳಗಾದ ವರದಿಯನ್ನು ತಕ್ಷಣ ತಯಾರಿಸಿ ತನ್ನ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವರದಿ ಬಂದ ತಕ್ಷಣವೇ ಸಂತ್ರಸ್ತರಿಗೆ ಪರಿಹಾರವನ್ನು ಯಾವುದೇ ತಡ ಮಾಡದೆ ವಿತರಿಸಲಾಗುವುದು ಎಂದರು.

    MORE
    GALLERIES

  • 1212

    Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

    ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡ ಜರಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೂ ಪರಿಹಾರವನ್ನು ತಕ್ಷಣ ನೀಡಲಾಗುವುದು ಎಂದು ಸಚಿವ ಅಂಗಾರ ತಿಳಿಸಿದ್ದಾರೆ. ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

    MORE
    GALLERIES