ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗಿದೆ. ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದೆ, ಹಲವೆಡೆ ಮರಗಳು ಧರೆಗೆ ಉರುಳಿವೆ. ಜಯನಗರದ ಬಳಿ ಕಾರೊಂದರ ಮೇಲೆ ಮರ ಬಿದ್ದಿದೆ. ಅದೃಷ್ಟಕ್ಕೆ ಕಾರಿನಲ್ಲಿದ್ದ 5 ಮಂದಿ ಅಪಾಯದಿಂದ ಸೇಫಾಗಿದ್ದಾರೆ. ಇನ್ನು ನೆಲಮಂಗಲದಲ್ಲಿ ಬೈಕ್ ಮೇಲೆ ಮರ ಬಿದ್ದಿದೆ. ಪೀಣ್ಯ ಬಳಿ ಒಂದು ಮರ, ಮಲ್ಲೇಶ್ವರಂ, ನವರಂಗ, ಎಮ್ ಇ ಎ ಲೇ ಔಟ್ ಬಗಲಗುಂಟೆ, ಕೆರೆ ರೋಡ್ ಜಕ್ಕಸಂದ್ರ ಡೈನಾಮಿಕ್ ಫ್ಯಾಕ್ಟರಿ ಬಳಿ, ಸಂಜಯನಗರ ಡಾಲರ್ಸ್ ಕಾಲೋನಿ, ಭದ್ರಪ್ಪ ಲೇ ಔಟ್, ಯಜ್ಞಳ್ಳಿ ಓಂ ಶಕ್ತಿ ಟೆಂಪಲ್, ಗಾಯಿತ್ರಿನಗರ ಚಿಕ್ಕರಾಮಯ್ಯ ಮಂದಿರ ಬಳಿ, ಜಯನಗರದ ಬಳಿ ಮರಗಳು ಧರೆಗುರುಳಿದಿವೆ. ಮಳೆ ಅನಾಹುತದ ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ