ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

ACB Mega Raid: ಇಂದು ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ 18 ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದೆ. 18 ಅಧಿಕಾರಿಗಳಿಗೆ ಸೇರಿದ ರಾಜ್ಯದ ವಿವಿಧ 75 ಕಡೆ ದಾಳಿ ನಡೆಸಲಾಗಿದೆ. ಈ ಎಲ್ಲ ಅಧಿಕಾರಿಗಳ ಮೇಲೆ ಅಕ್ರಮ ಆಸ್ತಿ ಗಳಿಕೆಯ ಆರೋಪಗಳು ಕೇಳಿ ಬಂದ ಹಿನ್ನೆಲೆ ಈ ದಾಳಿ ನಡೆದಿದೆ.

First published:

  • 19

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ರಸ್ತೆ ಸುರಕ್ಷತೆಯ ಅಧಿಕಾರಿ ಸಿ.ಜೆ ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣಗಳು ಮತ್ತು ಆಸ್ತಿ ಪತ್ರಗಳು ಪತ್ತೆಯಾಗಿವೆ.

    MORE
    GALLERIES

  • 29

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    ಜ್ಞಾನೇಂದ್ರ ಕುಮಾರ್ ಗೆ ಸೇರಿದ ಬಸವೇಶ್ವರ ನಗರ ಮನೆ ಹಾಗೂ ಶಾಂತಿನಗರ ಕಚೇರಿ ಮೇಲೆ ದಾಳಿ ನಡೆದಿದೆ.

    MORE
    GALLERIES

  • 39

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    ಮನೆಯಲ್ಲಿ ಕಂತೆ ಕಂತೆ ನೋಟು, ಅಪಾರ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಬೆಲೆ ಬಾಳುವ ಸೀರೆ, ವಾಚ್​, ವಾಹನಗಳು ಸಿಕ್ಕಿದೆ. ಇದರ ಜೊತೆ ಆಸ್ತಿ ಪತ್ರ ಸಹ ಲಭ್ಯವಾಗಿದೆ. ಇವುಗಳ ಆಸ್ತಿಯ ಮೌಲ್ಯ ತಿಳಿದು ಬರಬೇಕಿದೆ.

    MORE
    GALLERIES

  • 49

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    ಬಾದಾಮಿಯ ಅರಣ್ಯಾಧಿಕಾರಿ ಶಿವಾನಂದ ಶರಣಪ್ಪ ಖೇಡಗಿ ಅವರ ಮನೆಯಲ್ಲಿ ಮೂರು ಕೆಜಿ ಶ್ರೀಗಂಧ ಪತ್ತೆಯಾಗಿದೆ. ಇದರ ಜೊತೆ ದೊಡ್ಡ ಗಾತ್ರದ ಬೆಳ್ಳಿಯ ಪೂಜಾ ಸಾಮಾಗ್ರಿ, ಮಿನಿ ಚಿನ್ನದ ಅಂಗಡಿಯೇ ಇವರ ಮನೆಯಲ್ಲಿದೆ.

    MORE
    GALLERIES

  • 59

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    ಶಿವಾನಂದ ಖೇಡಗಿ ಅವರಿಗೆ ಸಂಬಂಧಿಸಿದಂತೆ ಕಚೇರಿ ಮತ್ತು ಮನೆ, ಅಂಗಡಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಲೆಕ್ಕವಿಲ್ಲದಷ್ಟು ಚಿನ್ನ ಕಂಡು ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ.

    MORE
    GALLERIES

  • 69

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    ವಿವಿಧ ಡಿಸೈನ್ ನೆಕ್ಲೇಸ್ ಗಳು, ಬೆಳ್ಳಿಯ ಪೂಜಾ ಪರಿಕರಗಳ ಜತೆ ನಗದು ಸಹ ಪತ್ತೆಯಾಗಿದೆ. ಬಾಗಲಕೋಟೆಯ ನವಗರದ 15ನೇ ಸೆಕ್ಟರ್ ನಲ್ಲಿರುವ ನಿವಾಸದ ಮೇಲೆ ಎಸಿಬಿ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ. ಇದರ ಜೊತೆಗೆ ಶಿವಾನಂದ್ ಸೇವೆ ಸಲ್ಲಿಸುತ್ತಿರುವ ಅರಣ್ಯ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

    MORE
    GALLERIES

  • 79

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    ಶಿವಾನಂದ್ ಅವರ ಅಳಿಯಂದಿರ ಎರಡು ಮನೆಗಳ ಮೇಲೂ ದಾಳಿ ನಡೆಸಿದ್ದು, ಪ್ರಮುಖ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.

    MORE
    GALLERIES

  • 89

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    75 ಕಡೆ ದಾಳಿ ನಡೆದಿದ್ದು, ಕೇವಲ ಎರಡು ಮನೆಗಳಲ್ಲಿ ಪತ್ತೆಯಾಗಿರುವ ಚಿನ್ನಾಭರಣದ ಫೋಟೋಗಳು ಸಿಕ್ಕಿವೆ.

    MORE
    GALLERIES

  • 99

    ACB Raid: ಎಸಿಬಿ ಕೈ ಇರಿಸಿದ ಕಡೆಯಲ್ಲಾ ಚಿನ್ನ.. ಚಿನ್ನ: ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು ನೋಡಿ

    ಗದಗ ಉಪ ತಹಶೀಲ್ದಾರ್ ಬಿ.ಎಸ್ ಅಣ್ಣಿಗೇರಿ ಮನೆಯಲ್ಲಿ ಮನೆ ಮೇಲೆ ದಾಳಿ ನಡೆದಿದ್ದು, ಅಂದಾಜು ಅರ್ಧ ಕೆಜಿ ಚಿನ್ನ ಸೀಜ್ ವಶಕ್ಕೆ ಪಡೆಯಲಾಗಿದೆ. 1 ಲಕ್ಷ 50 ಸಾವಿರ ರೂಪಾಯಿ ವರೆಗೂ ನಗದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. (ಶ್ರೀಗಂಧ ಮರದ ತುಂಡುಗಳು)

    MORE
    GALLERIES