Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು

KGF Babu: ಕಾಂಗ್ರೆಸ್​ನಿಂದ ಉಚ್ಛಾಟನೆಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಅಲಿಯಾಸ್ ಯೂಸೂಪ್ ಷರೀಫ್ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ.

First published:

  • 17

    Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು

    ಚುನಾವಣೆಯಲ್ಲಿ ಸೋತ ಬಳಿಕ ಉರ್ದು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿರುವ ಕೆಜಿಎಫ್​ ಬಾಬು ತಮ್ಮಿಂದ ಪಡೆದ ಚೆಕ್​ಗಳನ್ನು ಹಿಂದಿರುಗಿಸಬೇಕು ಎಂದು ಹೇಳಿದ್ದಾರೆ.

    MORE
    GALLERIES

  • 27

    Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು

    ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಪ್ರಕಾರ, ಚುನಾವಣೆ ಸಂದರ್ಭದಲ್ಲಿ ಚಿಕ್ಕಪೇಟೆ ಕ್ಷೇತ್ರದ 64 ಮಸೀದಿಗಳ ಸಮಿತಿಗಳಿಗೆ 17.30 ಕೋಟಿ ರೂಪಾಯಿ ಮೌಲ್ಯದ ಚೆಕ್ ವಿತರಣೆ ಮಾಡಿದ್ದರು.

    MORE
    GALLERIES

  • 37

    Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು

    ಜಾಹೀರಾತಿನಲ್ಲಿ ದಾರೂಲ್ ಉಲೂಮ್ ಫತ್ವಾ ಉಲ್ಲೇಖಿಸಿರುವ ಕೆಜಿಎಫ್​ ಬಾಬು ಚುನಾವಣೆ ಸಮಯದಲ್ಲಿ ರಾಜಕಾರಣಿಗಳಿಂದ ಪಡೆದ ಹಣ ಹರಾಮ್ ಆಗಿರುತ್ತದೆ ಎಂದು ಹೇಳಿದ್ದಾರೆ.

    MORE
    GALLERIES

  • 47

    Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು

    ಹಲವು ಮಸೀದಿಗಳ ಹೆಸರು ಉಲ್ಲೇಖ

    ಹರಾಮ್ ಹಣವನ್ನು ಬಳಸದೇ ಆದಷ್ಟು ಬೇಗ ತಮಗೆ ಹಿಂದಿರುಗಿಸಿ. ಕೃಷ್ಣಪ್ಪ ಗಾರ್ಡನ್ ಮಸೀದಿ-ಇ-ಹುಸ್ನಾ, ಸಿದ್ದಾಪುರ ಟ್ಯಾಂಕ್ ಗಾರ್ಡನ್​ನಲ್ಲಿರುವ ಮಸೀದಿ-ಇ-ಅತಿಕ್ ಸೇರಿದಂತೆ ಹಲವು ಮಸೀದಿಗಳ ಹೆಸರನ್ನು ಕೆಜಿಎಫ್ ಬಾಬು ಉಲ್ಲೇಖಿಸಿದ್ದಾರೆ.

    MORE
    GALLERIES

  • 57

    Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು

    ಭರಪೂರ ಘೋಷಣೆಗಳು

    ಚುನಾವಣೆ ವೇಳೆ ಚಿಕ್ಕಪೇಟೆ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಹೊರಡಿಸಿದ್ದ ಕೆಜಿಎಫ್ ಬಾಬು, APL, BPL ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳಿದ್ದರು.

    MORE
    GALLERIES

  • 67

    Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು

    ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ, SSLC, PUC, ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಪ್ರತಿ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ ನೀಡೋದಾಗಿ ಘೋಷಣೆ ಮಾಡಿದ್ದರು.

    MORE
    GALLERIES

  • 77

    Karnataka Election: ಸೋತ ಬಳಿಕ ನನ್ನ ಹಣ ನನಗೆ ಕೊಡಿ ಎಂದ ಕೆಜಿಎಫ್ ಬಾಬು

    ಐಟಿ ದಾಳಿ

    ಚುನಾವಣೆ ಸಂದರ್ಭದಲ್ಲಿ ಕೆಜಿಎಫ್​ ಬಾಬು ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ 2,000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್ (ಡಿ.ಡಿ)5,000 ರೇಷ್ಮೆ‌ ಸೀರೆಗಳು (Saree) ವಶಕ್ಕೆ ಪಡೆದುಕೊಂಡಿದ್ದಾರೆ. ಉಮ್ರಾ ಫೌಂಡೇಷನ್ ಹೆಸರಿನಲ್ಲಿದ್ದ ₹1,105 ಮೌಲ್ಯದ ಡಿಡಿಗಳನ್ನು ವಶಕ್ಕೆ ಪಡೆಯಲಾಗಿತ್ತು.

    MORE
    GALLERIES