Gift Politics: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹1.57 ಕೋಟಿ ಮೌಲ್ಯದ ಕುಕ್ಕರ್​​, ತವಾ ವಶಕ್ಕೆ

ದಾಳಿಯಲ್ಲಿ 4,533 ಕುಕ್ಕರ್, 10,964 ತವಾಗಳನ್ನು ಅಧಿಕಾರಿಗಳು ಸೀಜ್​​ ಮಾಡಿದ್ದಾರೆ. ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ ಬರೋಬ್ಬರಿ 1 ಕೋಟಿ 57 ಲಕ್ಷ ಮೌಲ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Gift Politics: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹1.57 ಕೋಟಿ ಮೌಲ್ಯದ ಕುಕ್ಕರ್​​, ತವಾ ವಶಕ್ಕೆ

    ಬೆಂಗಳೂರು: ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ ಭಾರೀ ಪ್ರಮಾಣದ ಕುಕ್ಕರ್​ ಹಾಗೂ ತವಾಗಳನ್ನು ಚುನಾವಣಾ ಅಧಿಕಾರಿಗಳ ದಾಳಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    MORE
    GALLERIES

  • 27

    Gift Politics: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹1.57 ಕೋಟಿ ಮೌಲ್ಯದ ಕುಕ್ಕರ್​​, ತವಾ ವಶಕ್ಕೆ

    ದಾಳಿಯಲ್ಲಿ 4,533 ಕುಕ್ಕರ್, 10,964 ತವಾಗಳನ್ನು ಅಧಿಕಾರಿಗಳು ಸೀಜ್​​ ಮಾಡಿದ್ದಾರೆ. ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ ಬರೋಬ್ಬರಿ 1 ಕೋಟಿ 57 ಲಕ್ಷ ಮೌಲ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

    MORE
    GALLERIES

  • 37

    Gift Politics: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹1.57 ಕೋಟಿ ಮೌಲ್ಯದ ಕುಕ್ಕರ್​​, ತವಾ ವಶಕ್ಕೆ

    ಕುಕ್ಕರ್ ಮತ್ತು ತವಾ ಯಾರಿಗೆ ಸೇರಿದ್ದು, ಎಲ್ಲಿಗೆ ಸಪ್ಲೈ ಆಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಎಲ್ಲಾ ವಸ್ತುಗಳನ್ನ ವಶಪಡಿಸಿಕೊಂಡು ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

    MORE
    GALLERIES

  • 47

    Gift Politics: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹1.57 ಕೋಟಿ ಮೌಲ್ಯದ ಕುಕ್ಕರ್​​, ತವಾ ವಶಕ್ಕೆ

    ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೇಷ್ಮೆ ಸೀರೆಗಳನ್ನು ಗದಗದ ಬಿಂಕದಕಟ್ಟಿ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. 8 ಲಕ್ಷ ರೂಪಾಯಿ ಮೌಲ್ಯದ 78 ರೇಷ್ಮೆ ಸೀರೆಗಳು ಜಪ್ತಿ ಮಾಡಿರುವುದಾಗಿ ಎಸ್​​ಪಿ ಬಿ.ಎಸ್ ನೇಮಗೌಡ ಅವರು ನ್ಯೂಸ್​​18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

    MORE
    GALLERIES

  • 57

    Gift Politics: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹1.57 ಕೋಟಿ ಮೌಲ್ಯದ ಕುಕ್ಕರ್​​, ತವಾ ವಶಕ್ಕೆ

    ಆಂಧ್ರ ಪ್ರದೇಶದ ಕಡಪದಿಂದ ಹುಬ್ಬಳ್ಳಿಗೆ ರೇಷ್ಮೆ ಸೀರೆಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

    MORE
    GALLERIES

  • 67

    Gift Politics: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹1.57 ಕೋಟಿ ಮೌಲ್ಯದ ಕುಕ್ಕರ್​​, ತವಾ ವಶಕ್ಕೆ

    ದಾಖಲೆ ಇಲ್ಲದೇ ಹಣ ಸಾಗಾಟ ಮಾಡುತ್ತಿದ್ದ 34 ಲಕ್ಷ ರೂಪಾಯಿ ಹಣವನ್ನು ಯಾದಗಿರಿ ನಗರದ ಹೊರವಲಯದ ಚೆಕ್ ಪೋಸ್ಟ್ ನಲ್ಲಿ ಸೀಜ್​ ಮಾಡಲಾಗಿದೆ. ಎಟಿಎಂ‌ಗೆ ಹಣ ತುಂಬುವ ವಾಹನದಲ್ಲಿ ಹಣ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಯಾವುದೇ ದಾಖಲೆಯಿಲ್ಲದೆ ಹಣ ಸಾಗಾಟ ಮಾಡುತ್ತಿರುವ ಹಿನ್ನಲೆ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ. ಸ್ಥಳಕ್ಕೆ ಯಾದಗಿರಿ ಎಸ್​ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

    MORE
    GALLERIES

  • 77

    Gift Politics: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ₹1.57 ಕೋಟಿ ಮೌಲ್ಯದ ಕುಕ್ಕರ್​​, ತವಾ ವಶಕ್ಕೆ

    ಗದಗ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿದ್ದ ಮನೆಯ ಮೇಲೆ ದಾಳಿ ಮಾಡಿ 34 ಸಾವಿರ ಮೌಲ್ಯದ 80.73 ಲೀಟರ್ ಮದ್ಯ, ಒಂದು ಸಾವಿರ ಮೌಲ್ಯದ ಬಿಯರ್ ಜಪ್ತಿ ಮಾಡಿದ್ದಾರೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶಿಂಗಟಾರಾಯಣಕೇರಿ ತಾಂಡಾದಲ್ಲಿ ಘಟನೆ ನಡೆದಿದ್ದು, ತಾಂಡಾದ ಭೀಮಪ್ಪ ಚವ್ಹಾಣ್ ಎಂಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ನ್ಯೂಸ್18 ಕನ್ನಡಕ್ಕೆ ಅಬಕಾರಿ ಡಿಸಿ ಭರತೇಶ್ ಮಾಹಿತಿ ನೀಡಿದ್ದಾರೆ.

    MORE
    GALLERIES