ಸಚಿವರ ಜೊತೆ ನೀರಾ ಕುಡಿದು ಎಂಜಾಯ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಬೇಸಿಗೆಯ ಸುಡು ಬಿಸಿಲು ಸಾರ್ವಜನಿಕರು ತಂಪು ಪಾನೀಯಗಳತ್ತ ಮುಖ ಮಾಡುವಂತೆ ಮಾಡಿದೆ. ವಿಧಾನಸೌಧದಲ್ಲಿ ನೀರಾಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಹಾಪ್ ಕಾಮ್ಸ್ನ ಮಳಿಗೆಯನ್ನು ಸದನ ಹಿನ್ನೆಲೆಯಲ್ಲಿ ನೂತನವಾಗಿ ಓಪನ್ ಮಾಡಲಾಗಿತು. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಜಗದೀಶ್ ಶೆಟ್ಟರ್, ಡಾ. ಕೆ ಸುಧಾಕರ್ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ನೀರಾ ಕುಡಿದರು. ತೆಂಗು ಅಭಿವೃದ್ದಿ ಮಂಡಳಿಯು ಉಚಿತವಾಗಿ ನೀರಾ ವಿತರಣೆ ಮಾಡಿತ್ತು