Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ
ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಹೊಂದಿಕೊಂಡಿರುವ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡ ಕಾರಣ ಹೊಗೆ ವಾತಾವರಣ ನಿರ್ಮಾಣವಾಗಿತ್ತು.
ಸಂಜೆ ಐದು ಗಂಟೆಗೆ ಕಾಣಿಸಿಕೊಂಡಿದ್ದ ಬೆಂಕಿ ರಾತ್ರಿ 10ರವರೆಗೆ ಹೊತ್ತಿ ಉರಿದಿದೆ. ರಾತ್ರಿ 10 ಗಂಟೆ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿದೆ.
2/ 7
ಬೆಂಕಿ ಕಾಣಿಸಿಕೊಂಡಿದ್ದರಿಂದ ಸುಮಾರು 20 ಎಕರೆ ಪ್ರದೇಶದಲ್ಲಿದ್ದ ಮರಗಳು ಬೆಂಕಿಗೆ ಆಹುತಿಯಾಗಿವೆ. ಈ ಪ್ರದೇಶದಲ್ಲಿ ಕೆಲ ಪ್ರಾಣಿಗಳು ಸಹ ವಾಸವಾಗಿದ್ದವು.
3/ 7
ಸ್ಥಳೀಯರು/ ವಾಹನ ಸವಾರರು ಧೂಮಪಾನ ಮಾಡಿ ಅರಣ್ಯ ಪ್ರದೇಶದಲ್ಲಿ ಸಿಗರೇಟ್ ಎಸೆದಿರುವ ಕಾರಣ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಗಳಿವೆ. ಬೇಸಿಗೆ ಆಗಿರುವ ಕಾರಣ ಎಲೆಗಳು ಒಣಗಿರುತ್ತವೆ. ಸಣ್ಣ ಕಿಡಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆಗಳಿರುತ್ತವೆ.
4/ 7
ಪ್ರತಿ ಬೇಸಿಗೆಯಲ್ಲೂ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುತ್ತದೆ. ಬೆಂಕಿಯ ಕೆನ್ನಾಲಿಗೆ ತೀವ್ರತೆಗೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗೆ ತೆರಳಲು ಸಾಧ್ಯವಾಗಿರಲಿಲ್ಲ.
5/ 7
ಕೊನೆಗೆ ಕೌಂಟರ್ ಅಟ್ಯಾಕ್ ತಂತ್ರ ಬಳಸಿ ಬೆಂಕಿ ನಂದಿಸುವ ಕಾರ್ಯ ಮಾಡಲಾಯ್ತು. ಸುಮಾರು ನಾಲ್ಕು ಗಂಟೆಗಳ ಬಳಿಕ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
6/ 7
ಬೆಂಗಳೂರಿನಿಂದ 20 ಕಿಲೋಮೀಟರ್ ಸಮೀಪದಲ್ಲಿದೆ ತುರಹಳ್ಳಿ ಅರಣ್ಯ ಪ್ರದೇಶ. ಕನಕಪುರ ರಸ್ತೆ ಸಮೀಪ, ಮೆಟ್ರೋ ರೈಲಿಗೂ ಹತ್ತಿರದಲ್ಲಿರುವ ಏಕೈಕ ಅರಣ್ಯ ಪ್ರದೇಶವ ಇದಾಗಿದೆ
7/ 7
ಈಗಾಗಲೇ 37 ಎಕರೆ ಟ್ರೀ ಪಾರ್ಕ್ ಮಾಡಿರುವ ಸರ್ಕಾರ ಇದಕ್ಕೆ ಹೆಚ್ಚಿನ ಅಭಿವೃದ್ದಿ ಮಾಡುವುದರ ಬದಲು ಉಳಿದ ಅರಣ್ಯ ಪ್ರದೇಶದಲ್ಲಿ ಮರ ಉದ್ಯಾನ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
First published:
17
Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ
ಸಂಜೆ ಐದು ಗಂಟೆಗೆ ಕಾಣಿಸಿಕೊಂಡಿದ್ದ ಬೆಂಕಿ ರಾತ್ರಿ 10ರವರೆಗೆ ಹೊತ್ತಿ ಉರಿದಿದೆ. ರಾತ್ರಿ 10 ಗಂಟೆ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿದೆ.
Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ
ಸ್ಥಳೀಯರು/ ವಾಹನ ಸವಾರರು ಧೂಮಪಾನ ಮಾಡಿ ಅರಣ್ಯ ಪ್ರದೇಶದಲ್ಲಿ ಸಿಗರೇಟ್ ಎಸೆದಿರುವ ಕಾರಣ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಗಳಿವೆ. ಬೇಸಿಗೆ ಆಗಿರುವ ಕಾರಣ ಎಲೆಗಳು ಒಣಗಿರುತ್ತವೆ. ಸಣ್ಣ ಕಿಡಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆಗಳಿರುತ್ತವೆ.
Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ
ಪ್ರತಿ ಬೇಸಿಗೆಯಲ್ಲೂ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುತ್ತದೆ. ಬೆಂಕಿಯ ಕೆನ್ನಾಲಿಗೆ ತೀವ್ರತೆಗೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗೆ ತೆರಳಲು ಸಾಧ್ಯವಾಗಿರಲಿಲ್ಲ.
Forest Fire: ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ; 20 ಎಕರೆ ಅಗ್ನಿಗಾಹುತಿ
ಈಗಾಗಲೇ 37 ಎಕರೆ ಟ್ರೀ ಪಾರ್ಕ್ ಮಾಡಿರುವ ಸರ್ಕಾರ ಇದಕ್ಕೆ ಹೆಚ್ಚಿನ ಅಭಿವೃದ್ದಿ ಮಾಡುವುದರ ಬದಲು ಉಳಿದ ಅರಣ್ಯ ಪ್ರದೇಶದಲ್ಲಿ ಮರ ಉದ್ಯಾನ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.