HD Kumaraswamy: ಪಂಚರತ್ನ ರಥಯಾತ್ರೆ ವೇಳೆ ಹೆಚ್‌ಡಿಕೆಗೆ ಸಿಕ್ತು 'ಮುತ್ತು'! ನಸುನಾಚುತ್ತಲೇ ಮಹಿಳೆ ಹೇಳಿದ್ದೇನು?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಅವರು ಕೈಗೊಂಡಿರುವ ಪಂಚರತ್ನ ಯಾತ್ರೆಗೆ ಹೋದ ಕಡೆಯಲೆಲ್ಲ ಅದ್ದೂರಿ ಸ್ವಾಗತ ಸಿಗುತ್ತಿದೆ. ವಿಭಿನ್ನ ರೀತಿಯ ಹಾರಗಳನ್ನು ಹಾಕುವ ಮೂಲಕ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರುತ್ತಿದ್ದರು. ಆದರೆ ಇಂದು ಮಹಿಳಾ ಅಭಿಮಾನಿಯೊಬ್ಬರು ಮಾಜಿ ಸಿಎಂಗೆ ಮುತ್ತು ಕೊಟ್ಟಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

  • News18 Kannada
  • |
  •   | Bangalore [Bangalore], India
First published:

  • 17

    HD Kumaraswamy: ಪಂಚರತ್ನ ರಥಯಾತ್ರೆ ವೇಳೆ ಹೆಚ್‌ಡಿಕೆಗೆ ಸಿಕ್ತು 'ಮುತ್ತು'! ನಸುನಾಚುತ್ತಲೇ ಮಹಿಳೆ ಹೇಳಿದ್ದೇನು?

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ವೇಳೆ ಯಾವುದೇ ಜಿಲ್ಲೆಗೆ ಹೋದರೂ ಭಾರೀ ಪ್ರಮಾಣದ ಬೆಂಬಲ ಲಭ್ಯವಾಗುತ್ತಿದೆ. ಇದರ ನಡುವೆ ಇಂದು ರ್ಯಾಲಿ ನಡೆಸುತ್ತಿದ್ದ ಹೆಚ್​ಡಿಕೆಗೆ ಮಹಿಳೆಯೊಬ್ಬರು ಕ್ಯಾಮೆರಾ ಎದುರೇ ಮುತ್ತು ಕೊಟ್ಟಿರುವ ಘಟನೆ ನಡೆದಿದೆ.

    MORE
    GALLERIES

  • 27

    HD Kumaraswamy: ಪಂಚರತ್ನ ರಥಯಾತ್ರೆ ವೇಳೆ ಹೆಚ್‌ಡಿಕೆಗೆ ಸಿಕ್ತು 'ಮುತ್ತು'! ನಸುನಾಚುತ್ತಲೇ ಮಹಿಳೆ ಹೇಳಿದ್ದೇನು?

    ಇಂದು ಕುಮಾರಸ್ವಾಮಿ ಅವರು ರಾಜಧಾನಿ ಬೆಂಗಳೂರಿನ ಯಶವಂತಪುರದಲ್ಲಿ ಪಂಚರತ್ನ ಯಾಥ್ರೆ ನಡೆಸಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ವಾಹನದ ಮೇಲೆ ಬಂತು ತಮ್ಮ ನೆಚ್ಚಿನ ನಾಯಕರನ್ನು ಮಾತನಾಡಿದ್ದಾರೆ. ಅಲ್ಲದೆ ವಾಪಸ್ ತೆರಳುವ ಸಂದರ್ಭದಲ್ಲಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.

    MORE
    GALLERIES

  • 37

    HD Kumaraswamy: ಪಂಚರತ್ನ ರಥಯಾತ್ರೆ ವೇಳೆ ಹೆಚ್‌ಡಿಕೆಗೆ ಸಿಕ್ತು 'ಮುತ್ತು'! ನಸುನಾಚುತ್ತಲೇ ಮಹಿಳೆ ಹೇಳಿದ್ದೇನು?

    ಮೊದಲು ಕುಮಾರಸ್ವಾಮಿ ಅವರಿಗೆ ಕೈಕುಲುಕಿ ಶುಭಕೋರಿದ್ದ ಮಹಿಳೆ ಏಕಾಏಕಿ ಮುತ್ತುಕೊಟ್ಟ ಕಾರಣ ಅವರು ಕ್ಷಣ ಕಾಲ ಶಾಕ್​ ಒಳಗಾದವರಂತೆ ಕಂಡು ಬಂದರು. ಆ ಬಳಿಕ ಜನರತ್ತ ಕೈಬೀಸಿ ಯಾತ್ರೆ ಮುನ್ನಡೆಸಿದರು.

    MORE
    GALLERIES

  • 47

    HD Kumaraswamy: ಪಂಚರತ್ನ ರಥಯಾತ್ರೆ ವೇಳೆ ಹೆಚ್‌ಡಿಕೆಗೆ ಸಿಕ್ತು 'ಮುತ್ತು'! ನಸುನಾಚುತ್ತಲೇ ಮಹಿಳೆ ಹೇಳಿದ್ದೇನು?

    ಘಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ಕುಮರಸ್ವಾಮಿ ಅವರೊಂದಿಗೆ ಏನು ಸಂಭಾಷಣೆ ಆಯ್ತು ಅಂತ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಟಿವಿಯಲ್ಲಿ ಮಾತ್ರ ನೋಡಿದ್ದೆ. ಮೊದಲು ಹೋದ ಕೂಡಲೇ ಥ್ಯಾಂಕ್ಸ್​ ಕೊಟ್ಟರು. ಬಳಿಕ ಎಲ್ಲಿಂದ ಬಂದಿದ್ದೀಯಾ ತಂಗಿ ಅಂತ ಮಾತನಾಡಿದರು. ಚೆನ್ನಾಗಿದ್ದೀರಾ ಅಂತ ಕೇಳಿದ್ದಕ್ಕೆ ಚೆನ್ನಾಗಿದ್ದೀನಿ ಅಂತ ಹೇಳಿದರು.

    MORE
    GALLERIES

  • 57

    HD Kumaraswamy: ಪಂಚರತ್ನ ರಥಯಾತ್ರೆ ವೇಳೆ ಹೆಚ್‌ಡಿಕೆಗೆ ಸಿಕ್ತು 'ಮುತ್ತು'! ನಸುನಾಚುತ್ತಲೇ ಮಹಿಳೆ ಹೇಳಿದ್ದೇನು?

    ಬಳಿಕ ಯಾವ ಊರವ್ವ, ಎಷ್ಟು ಜನ ಮಕ್ಕಳು ಅಂತ ಕೇಳಿದರು. ನಾನು ಭದ್ರಾವತಿ, ಮೂವರು ಮಕ್ಕಳೊಂದಿಗೆ ಇಲ್ಲೇ ನೆಲೆಸಿದ್ದೀನಿ ಅಂತ ಹೇಳಿದೆ. ಸರಿ ಆಯ್ತು ಮುಂದುವರಿಸುತ್ತೇನೆ ಬಿಡವ್ವ ಅಂತ ಹೇಳಿದರು ಎಂದು ಮಹಿಳೆ ತಿಳಿಸಿದ್ದಾರೆ.

    MORE
    GALLERIES

  • 67

    HD Kumaraswamy: ಪಂಚರತ್ನ ರಥಯಾತ್ರೆ ವೇಳೆ ಹೆಚ್‌ಡಿಕೆಗೆ ಸಿಕ್ತು 'ಮುತ್ತು'! ನಸುನಾಚುತ್ತಲೇ ಮಹಿಳೆ ಹೇಳಿದ್ದೇನು?

    ಕುಮಾರಸ್ವಾಮಿ ಅವರಿಗೆ ಮಹಿಳೆ ಮುತ್ತು ಕೊಟ್ಟ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ. ಅಭಿಮಾನಿಗಳು ಬಂದ ಸಂದರ್ಭದಲ್ಲಿ ನಾಯಕರು ಅವರೊಂದಿಗೆ ಮಾತನಾಡುವುದು, ಸೆಲ್ಫಿಗೆ ಪೋಸ್​ ಕೊಡುವುದು ಸಾಮಾನ್ಯ. ಇದರಿಂದ ಅವರು ಸಾಕಷ್ಟು ಆಗ್ತಾರೆ. ಆದರೆ ಮಹಿಳಾ ಅಭಿಮಾನಿಯೊಬ್ಬರು ಸದ್ಯ ಹೆಚ್​​ಡಿಕೆಗೆ ಮುತ್ತು ಕೊಟ್ಟಿರುವ ಘಟನೆ ನಡೆದಿದೆ.

    MORE
    GALLERIES

  • 77

    HD Kumaraswamy: ಪಂಚರತ್ನ ರಥಯಾತ್ರೆ ವೇಳೆ ಹೆಚ್‌ಡಿಕೆಗೆ ಸಿಕ್ತು 'ಮುತ್ತು'! ನಸುನಾಚುತ್ತಲೇ ಮಹಿಳೆ ಹೇಳಿದ್ದೇನು?

    2019ರಲ್ಲೂ ಮಂಡ್ಯ ಲೋಕಸಭಾ ಚುನಾವಣೆಯ ರೋಡ್​​ ಶೋ ವೇಳೆ ಅಭಿಮಾನಿಯೊಬ್ಬ ಕುಮಾರಸ್ವಾಮಿ ಅವರಿಗೆ ಮುತ್ತು ಕೊಟ್ಟಿದ್ದ. ಈ ವೇಳೆ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದುಕೊಂಡು ದೂರ ಕಳುಹಿಸಿದ್ದರು. ಆದರೆ ಕೆಲ ಕಾರ್ಯಕರ್ತರು ಆ ವೇಳೆ ಅಭಿಮಾನಿ ಮೇಲೆ ಹಲ್ಲೆ ಮಾಡಿದ್ದರು. ಇತ್ತ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ಮುತ್ತು ಕೊಟ್ಟಿದ್ದ ಪ್ರಸಂಗವೂ ನಡೆದಿತ್ತು. ಇಂದಿಗೂ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    MORE
    GALLERIES