"ದೀಪದಿಂದ ದೀಪವ ಹಚ್ಚಬೇಕು ಮಾನವ... ಪ್ರೀತಿಯಿಂದ ಪ್ರೀತಿ ಹಂಚಲೂ..." ನಂಜುಂಡಿ ಚಿತ್ರದ ಈ ಸಾಲುಗಳನ್ನು ಕೇಳುವುದೇ ಚಂದ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲರ ಬಾಯಲ್ಲೂ ಈ ಹಾಡಿನದ್ದೇ ಕಾರುಬಾರು. ದೀಪ ಹಚ್ಚಿ ಬೆಳಕ ಬೆಳಗುವುದು ಮಾತ್ರವಲ್ಲ. ಮನಸ್ಸಿನ ಅಂಧಕಾರವನ್ನು ಅಳಿಸಿ ಹಾಕಬೇಕು. ಮನಸ್ಸಿನಿಂದ ಮನಸ್ಸನ್ನು ಬೆಳಗಬೇಕು.