Dasara Elephant: 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ! ಅನಾರೋಗ್ಯದಿಂದ ಕಣ್ಮುಚ್ಚಿದ ದಸರಾ ಮಾಜಿ ಕ್ಯಾಪ್ಟನ್

14 ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಅನಾರೋಗ್ಯದ ಕಾರಣದಿಂದ ಭಾನುವಾರ ಮೃತಪಟ್ಟಿದೆ.

First published:

  • 17

    Dasara Elephant: 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ! ಅನಾರೋಗ್ಯದಿಂದ ಕಣ್ಮುಚ್ಚಿದ ದಸರಾ ಮಾಜಿ ಕ್ಯಾಪ್ಟನ್

    14 ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ  ಅನಾರೋಗ್ಯದ ಕಾರಣದಿಂದ ಭಾನುವಾರ ಮೃತಪಟ್ಟಿದೆ.

    MORE
    GALLERIES

  • 27

    Dasara Elephant: 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ! ಅನಾರೋಗ್ಯದಿಂದ ಕಣ್ಮುಚ್ಚಿದ ದಸರಾ ಮಾಜಿ ಕ್ಯಾಪ್ಟನ್

    ದಸರಾ ಜಂಬೂಸವಾರಿಯಲ್ಲಿ ಬಲರಾಮ ಸತತವಾಗಿ 14 ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತು ಮೈಸೂರು ದಸರೆಗೆ ಕಳೆತಂದಿದ್ದ. ಅನಾರೋಗ್ಯಕ್ಕೆ ಒಳಗಾಗಿದ್ದ ಬಲರಾಮನಿಗೆ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು.

    MORE
    GALLERIES

  • 37

    Dasara Elephant: 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ! ಅನಾರೋಗ್ಯದಿಂದ ಕಣ್ಮುಚ್ಚಿದ ದಸರಾ ಮಾಜಿ ಕ್ಯಾಪ್ಟನ್

    ವರದಿಯ ಪ್ರಕಾರ ಬಲರಾಮನ ಬಾಯಿಯಲ್ಲಿ ಹುಣ್ಣುಗಳಾಗಿದ್ದು, ಆಹಾರ ಸೇವಿಸುತ್ತಿರಲಿಲ್ಲ, ನೀರನ್ನು ಸಹಾ ಕುಡಿಯಲು ಸಾಧ್ಯವಾಗದ ಕಾರಣ ಅಸ್ವಸ್ಥಗೊಂಡಿತ್ತು. ವೈದ್ಯರು ನೀಡುತ್ತಿದ್ಧ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಕೊನೆಯುಸಿರೆಳೆದಿದೆ.

    MORE
    GALLERIES

  • 47

    Dasara Elephant: 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ! ಅನಾರೋಗ್ಯದಿಂದ ಕಣ್ಮುಚ್ಚಿದ ದಸರಾ ಮಾಜಿ ಕ್ಯಾಪ್ಟನ್

    ಆನೆಗೆ ಗಟ್ಟಿ ಆಹಾರ ಸೇವಿಸಲಾಗುತ್ತಿರಲಿಲ್ಲ. ಬಲರಾಮನಿಗೆ ರಾಗಿ ಗಂಜಿ, ರಾಗಿ ಹಿಟ್ಟು, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣಿನಂತಹ ಮೆದು ಆಹಾರವನ್ನ ಮಾತ್ರ ನೀಡಲಾಗುತ್ತಿತ್ತು. ಎಂಡೋಸ್ಕೋಪಿ ಸಹ ಮಾಡಲಾಗಿತ್ತು.

    MORE
    GALLERIES

  • 57

    Dasara Elephant: 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ! ಅನಾರೋಗ್ಯದಿಂದ ಕಣ್ಮುಚ್ಚಿದ ದಸರಾ ಮಾಜಿ ಕ್ಯಾಪ್ಟನ್

    ತಿತಿಮತಿ ಬಳಿಯ ಮತ್ತಿಗೋಡು ಆನೆ ಶಿಬಿರದ ಬಲರಾಮ 20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು. ಬರೋಬ್ಬರಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ. ಸೌಮ್ಯ ಸ್ವಭಾವದ ಈತ 2.70ಮೀಟರ್ ಎತ್ತರ, 3.77ಮೀ. ಉದ್ದವಿತ್ತು. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

    MORE
    GALLERIES

  • 67

    Dasara Elephant: 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ! ಅನಾರೋಗ್ಯದಿಂದ ಕಣ್ಮುಚ್ಚಿದ ದಸರಾ ಮಾಜಿ ಕ್ಯಾಪ್ಟನ್

    ಬಲರಾಮ 1999 ರಿಂದ 2011 ರ ನಡುವೆ 13 ವರ್ಷಗಳ ಕಾಲ ದಸರಾ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನ ಹೊತ್ತಿತ್ತು.

    MORE
    GALLERIES

  • 77

    Dasara Elephant: 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ! ಅನಾರೋಗ್ಯದಿಂದ ಕಣ್ಮುಚ್ಚಿದ ದಸರಾ ಮಾಜಿ ಕ್ಯಾಪ್ಟನ್

    ಇನ್ನು ಇತ್ತೀಚೆಗೆ ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ನುಗ್ಗಿತೆಂದು, ಸಿಟ್ಟಿಗೆದ್ದ ಜಮೀನು ಮಾಲೀಕ ಸುರೇಶ್ ಎಂಬಾತ ಆನೆಗೆ ಗುಂಡು ಹಾರಿಸಿದ್ದ. ಈ ಗುಂಡು ಆನೆಯ ತೊಡೆ, ಕಾಲು ಸೇರಿದಂತೆ ದೇಹದ ಅರ್ಧ ಭಾಗಕ್ಕೆ ಹೊಕ್ಕಿತ್ತು. ಗುಂಡು ಹಾರಿಸಿ ಕೃತ್ಯ ಎಸಗಿದ್ದ ಆರೋಪದ ಮೇರೆಗೆ ಆರೋಪಿ ಸುರೇಶ್‌ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು.

    MORE
    GALLERIES