BJP Rebels: ಬಿಜೆಪಿ ಸೋಲಿನ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಅಣ್ಣಾಮಲೈ ಕರೆ; ಬಂಡಾಯ ಅಭ್ಯರ್ಥಿ ಹೇಳಿದ್ದೇನು?

ಪಕ್ಷ ಮತ್ತು ಸಂಘ ಬಯಸಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲೂ ಸಿದ್ಧ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

First published:

  • 17

    BJP Rebels: ಬಿಜೆಪಿ ಸೋಲಿನ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಅಣ್ಣಾಮಲೈ ಕರೆ; ಬಂಡಾಯ ಅಭ್ಯರ್ಥಿ ಹೇಳಿದ್ದೇನು?

    ಪುತ್ತೂರು: ಚುನಾವಣೆ ಬಳಿಕ ರಾಜ್ಯ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹಾಗೂ ಸಂಘದ ಸಂಘಟನಾ ಸಹಕಾರ್ಯದರ್ಶಿ ರಾಜೇಶ್, ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿಕೆ ನೀಡಿದ್ದಾರೆ.

    MORE
    GALLERIES

  • 27

    BJP Rebels: ಬಿಜೆಪಿ ಸೋಲಿನ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಅಣ್ಣಾಮಲೈ ಕರೆ; ಬಂಡಾಯ ಅಭ್ಯರ್ಥಿ ಹೇಳಿದ್ದೇನು?

    ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅರುಣ್​ ಪುತ್ತಿಲ ಅವರು, ಕ್ಷೇತ್ರದಲ್ಲಿ ಗೊಂದಲಗಳನ್ನು ಸರಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ನಾನು ಹಿಂದೆಯೂ ಬಿಜೆಪಿ, ಇಂದೂ ಬಿಜೆಪಿ ಮತ್ತು ಮುಂದೆಯೂ ಮೋದಿ ಆದರ್ಶವನ್ನು ಪಾಲಿಸುವಾತ ಎಂದು ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 37

    BJP Rebels: ಬಿಜೆಪಿ ಸೋಲಿನ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಅಣ್ಣಾಮಲೈ ಕರೆ; ಬಂಡಾಯ ಅಭ್ಯರ್ಥಿ ಹೇಳಿದ್ದೇನು?

    ಇದೇ ವೇಳೆ ತಮ್ಮ ವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದ ಅರುಣ್ ಪುತ್ತಿಲ ಅವರು, ಜಿಲ್ಲೆಯಲ್ಲಿ ಈ ಗೊಂದಲಗಳಾಗಲು ಯಾರು ಕಾರಣ ಅನ್ನೋದು ಜನರಿಗೆ ಗೊತ್ತಿದೆ. ನನ್ನನ್ನು ಪೂರ್ವಾಗ್ರಹ ಪೀಡಿತರಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.

    MORE
    GALLERIES

  • 47

    BJP Rebels: ಬಿಜೆಪಿ ಸೋಲಿನ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಅಣ್ಣಾಮಲೈ ಕರೆ; ಬಂಡಾಯ ಅಭ್ಯರ್ಥಿ ಹೇಳಿದ್ದೇನು?

    ಚುನಾವಣೆ ಬಳಿಕ ಇದೀಗ ಜಿಲ್ಲೆಯಾದ್ಯಂತ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಹೆಸರಿನಲ್ಲಿ ವಾಟ್ಸಾಪ್​​ ಗ್ರೂಪ್​​ನಲ್ಲಿ 1.50 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ ಎಂದು ಹೇಳಿದರು.

    MORE
    GALLERIES

  • 57

    BJP Rebels: ಬಿಜೆಪಿ ಸೋಲಿನ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಅಣ್ಣಾಮಲೈ ಕರೆ; ಬಂಡಾಯ ಅಭ್ಯರ್ಥಿ ಹೇಳಿದ್ದೇನು?

    ಅಲ್ಲದೆ, ಪಕ್ಷದ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿರುವ ಆರೋಪಗಳ ಕುರಿತಂತೆ ಸ್ಪಷ್ಟನೆ ನೀಡಿ, ಇದೆಲ್ಲಾ ಅರಿವಿಗೆ ಬಾರದೆ ಆಗುತ್ತಿದೆ. ಪಕ್ಷದ ಹಿರಿಯರನ್ನು ಸಂಘದ ಹಿರಿಯರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವ ಕೆಲಸವೂ‌ ಆಗುತ್ತಿದೆ. ಆದರೆ ಇದ್ಯಾವುದರ ಹಿಂದೆಯೂ ನಾನಿಲ್ಲ ಎಂದು ಸ್ಪಷ್ಟನೆ ನೀಡಿದರು.

    MORE
    GALLERIES

  • 67

    BJP Rebels: ಬಿಜೆಪಿ ಸೋಲಿನ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಅಣ್ಣಾಮಲೈ ಕರೆ; ಬಂಡಾಯ ಅಭ್ಯರ್ಥಿ ಹೇಳಿದ್ದೇನು?

    ಅಭಿಮಾನಿಗಳಲ್ಲಿ ಮನವಿ ಮಾಡಿದ ಅರುಣ್​ ಪುತ್ತಿಲ ಅವರು, ನಾನು ಈ ಮೂಲಕ ನನ್ನ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ, ಆ ರೀತಿ ಮಾಡದಂತೆ ಕೇಳುತ್ತಿದ್ದೇನೆ. ಗೊಂದಲಗಳೆಲ್ಲಾ ಸರಿ ಆಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    MORE
    GALLERIES

  • 77

    BJP Rebels: ಬಿಜೆಪಿ ಸೋಲಿನ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲಗೆ ಅಣ್ಣಾಮಲೈ ಕರೆ; ಬಂಡಾಯ ಅಭ್ಯರ್ಥಿ ಹೇಳಿದ್ದೇನು?

    ಪಕ್ಷದ ಹೈಕಮಾಂಡ್ ಚುನಾವಣೆಯ ಸಂದರ್ಭದಲ್ಲಿ ಆದ ವಿಚಾರಗಳನ್ನು ಗಮನಿಸಿದೆ. ಪಕ್ಷ ಮತ್ತು ಸಂಘ ಬಯಸಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲೂ ಸಿದ್ಧ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

    MORE
    GALLERIES