Karnataka Election 2023: ಮತಭಿಕ್ಷೆಗೆ ಇಳಿದ ಕೋಟಿ ಕೋಟಿ ಕುಬೇರರು; ಬೊಮ್ಮಾಯಿ, ಶೆಟ್ಟರ್, ಸಿದ್ದರಾಮಯ್ಯ ಆಸ್ತಿ ಎಷ್ಟು?

ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್​ ಹಾಗೂ ಡಿಸಿಎಂ ಪರಮೇಶ್ವರ್​ ಸೇರಿದಂತೆ ಹಲವು ನಾಯಕರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

First published:

  • 17

    Karnataka Election 2023: ಮತಭಿಕ್ಷೆಗೆ ಇಳಿದ ಕೋಟಿ ಕೋಟಿ ಕುಬೇರರು; ಬೊಮ್ಮಾಯಿ, ಶೆಟ್ಟರ್, ಸಿದ್ದರಾಮಯ್ಯ ಆಸ್ತಿ ಎಷ್ಟು?

    ಬೆಂಗಳೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇನ್ನು ಒಂದು ದಿನ (ಏಪ್ರಿಲ್ 20) ಮಾತ್ರ ಬಾಕಿ ಇದೆ. ಈ ಹಿನ್ನೆಯಲ್ಲಿ ಇಂದು ಹಲವು ದಿಗ್ಗಜರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅದರಲ್ಲೂ ಕೆಲ ಕೋಟಿ ಕೋಟಿ ಕುಬೇರರು ಮತಭಿಕ್ಷೆಗೆ ಇಳಿದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್​ ಹಾಗೂ ಡಿಸಿಎಂ ಪರಮೇಶ್ವರ್​ ಸೇರಿದಂತೆ ಹಲವು ನಾಯಕರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಘಟಾನುಘಟಿ ನಾಯಕರ ಖಜಾನೆ ಲೆಕ್ಕಾ ಇಂತಿದೆ.

    MORE
    GALLERIES

  • 27

    Karnataka Election 2023: ಮತಭಿಕ್ಷೆಗೆ ಇಳಿದ ಕೋಟಿ ಕೋಟಿ ಕುಬೇರರು; ಬೊಮ್ಮಾಯಿ, ಶೆಟ್ಟರ್, ಸಿದ್ದರಾಮಯ್ಯ ಆಸ್ತಿ ಎಷ್ಟು?

    ಶಿಗ್ಗಾಂವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಟ್ಟು 28.93 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದು, 1.5 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ 1.42 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ.

    MORE
    GALLERIES

  • 37

    Karnataka Election 2023: ಮತಭಿಕ್ಷೆಗೆ ಇಳಿದ ಕೋಟಿ ಕೋಟಿ ಕುಬೇರರು; ಬೊಮ್ಮಾಯಿ, ಶೆಟ್ಟರ್, ಸಿದ್ದರಾಮಯ್ಯ ಆಸ್ತಿ ಎಷ್ಟು?

    ವರುಣಾದಲ್ಲಿ ನಾಮಪತ್ರ ಸಲ್ಲಿಕೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಟ್ಟು 50.77 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದು, 350 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿಯೂ ಅವರ ಬಳಿ ಇದೆ. ಉಳಿದತೆ ಮಾಜಿ ಸಿಎಂ ಒಟ್ಟು 23.7 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ.

    MORE
    GALLERIES

  • 47

    Karnataka Election 2023: ಮತಭಿಕ್ಷೆಗೆ ಇಳಿದ ಕೋಟಿ ಕೋಟಿ ಕುಬೇರರು; ಬೊಮ್ಮಾಯಿ, ಶೆಟ್ಟರ್, ಸಿದ್ದರಾಮಯ್ಯ ಆಸ್ತಿ ಎಷ್ಟು?

    ವಸತಿ ಸಚಿವ ವಿ ಸೋಮಣ್ಣ ಅವರು ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ. ಸೋಮಣ್ಣ ಅವರು 13.82 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, 654 ಗ್ರಾಂ ಚಿನ್ನ, 30.5 ಕೆಜಿ ಬೆಳ್ಳಿ ವಸ್ತುಗಳನ್ನು ಹೊಂದಿದ್ದಾರೆ. 2.90 ಕೋಟಿ ರೂಪಾಯಿ ಸಾಲವೂ ಸೋಮಣ್ಣ ಹೆಸರಿನಲ್ಲಿದೆ.

    MORE
    GALLERIES

  • 57

    Karnataka Election 2023: ಮತಭಿಕ್ಷೆಗೆ ಇಳಿದ ಕೋಟಿ ಕೋಟಿ ಕುಬೇರರು; ಬೊಮ್ಮಾಯಿ, ಶೆಟ್ಟರ್, ಸಿದ್ದರಾಮಯ್ಯ ಆಸ್ತಿ ಎಷ್ಟು?

    ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿಜಯೇಂದ್ರ ಅವರು ಒಟ್ಟು 103.39 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದು, ಅವರ 1.34 ಕೆಜಿ ಚಿನ್ನ, 16.25 ಕೆಜಿ ಬೆಳ್ಳಿ ಇದೆ. ಇನ್ನು, 18.24 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ.

    MORE
    GALLERIES

  • 67

    Karnataka Election 2023: ಮತಭಿಕ್ಷೆಗೆ ಇಳಿದ ಕೋಟಿ ಕೋಟಿ ಕುಬೇರರು; ಬೊಮ್ಮಾಯಿ, ಶೆಟ್ಟರ್, ಸಿದ್ದರಾಮಯ್ಯ ಆಸ್ತಿ ಎಷ್ಟು?

    ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶೆಟ್ಟರ್ ಅವರ ಬಳಿ ಒಟ್ಟು ಆಸ್ತಿ 12.36 ಕೋಟಿ ರೂಪಾಯಿ ಆಸ್ತಿ ಇದೆ. ಅಲ್ಲದೆ, 76.69 ಲಕ್ಷ ರೂಪಾಯಿ ಸಾಲವನ್ನು ಹೊಂದಿದ್ದಾರೆ.

    MORE
    GALLERIES

  • 77

    Karnataka Election 2023: ಮತಭಿಕ್ಷೆಗೆ ಇಳಿದ ಕೋಟಿ ಕೋಟಿ ಕುಬೇರರು; ಬೊಮ್ಮಾಯಿ, ಶೆಟ್ಟರ್, ಸಿದ್ದರಾಮಯ್ಯ ಆಸ್ತಿ ಎಷ್ಟು?

    ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಂತೋಷ ಲಾಡ್ ಒಟ್ಟು 129.9 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಅಲ್ಲದೆ, 17.31 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ. ಉಳಿದಂತೆ ಪತ್ನಿ ಕೀರ್ತಿ ಲಾಡ್ ಹೆಸರಿನಲ್ಲಿ 2.60 ಕೋಟಿ ಸಾಲ, ಪುತ್ರನ ಹೆಸರಿನಲ್ಲಿ 2.50 ಕೋಟಿ ಸಾಲವಿದೆ.

    MORE
    GALLERIES