ಮಂಡಿ ನೋವಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗ್ತಾರೆ ಅಂದ್ರು, ಆದರೆ ನಾಟಿ ವೈದ್ಯರ ಮೊರೆ ಹೋದ CM Bommai
ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಮಂಡಿ ನೋವಿನಿಂದ ಬಳಲುತ್ತಿದ್ದಾರೆ, ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗ್ತಾರೆ. ಇದನ್ನೇ ನೆಪ ಮಾಡಿಕೊಂಡು ಬಿಜೆಪಿ ಹೈಕಮಾಂಡ್ ಬೊಮ್ಮಾಯಿ ಅವರಿಂದ ರಾಜೀನಾಮೆ ಪಡೆಯಲಿದೆ ಎಂದ ಸುದ್ದಿ ಕೇಳಿ ಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಇಂದು ಸಿಎಂ ಮಂಡಿ ನೋವಿಗೆ ಚಿಕಿತ್ಸೆ ಪಡೆದಿದ್ದಾರೆ.
ಮಂಡಿ ನೋವಿನಿಂದ ಬಳಲುತ್ತಿದ್ದ ಸಿಎಂ ಬೊಮ್ಮಾಯಿ ನಾಟಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ್ ಟೇಕಲ್ ಎಂಬುವರು ಚಿಕಿತ್ಸೆ ನೀಡಿದ್ದಾರೆ.
2/ 4
ಈ ಹಿಂದೆ ಚರ್ಮರೋಗದಿಂದ ಬಳಲುತ್ತಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೂ ಇದೇ ನಾಟಿ ವೈದ್ಯ ಲೋಕೇಶ್ ಚಿಕಿತ್ಸೆ ನೀಡಿದ್ದರು. ಲಕ್ಷ್ಮಣ ಸವದಿ ಚರ್ಮರೋಗದಿಂದ ಗುಣಮುಖರಾಗಿದ್ದರು.
3/ 4
ಅಧಿವೇಶನದ ವೇಳೆ ಲಕ್ಷ್ಮಣ ಸವದಿ ಅವರು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನಾಟಿ ವೈದ್ಯ ಲೋಕೇಶ್ ಟೇಕಲ್ ಬಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರಂತೆ. ಅದರಂತೆ ಇಂದು ಚಿಕಿತ್ಸೆ ಪಡೆದಿದ್ದಾರೆ.
4/ 4
ಇಂದು ಸಿಎಂ ವನಸ್ಪತಿ ಔಷಧಿ ಚಿಕಿತ್ಸೆ ಕೈಗೊಂಡಿದ್ದಾರೆ. ನಾಟಿ ವೈದ್ಯ ಲೋಕೇಶ್ ಸಿಎಂ ಬೊಮ್ಮಾಯಿಗೆ ಚಿಕಿತ್ಸೆ ಮುಂದುವರೆಸಲಿದ್ದಾರೆ.
First published:
14
ಮಂಡಿ ನೋವಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗ್ತಾರೆ ಅಂದ್ರು, ಆದರೆ ನಾಟಿ ವೈದ್ಯರ ಮೊರೆ ಹೋದ CM Bommai
ಮಂಡಿ ನೋವಿನಿಂದ ಬಳಲುತ್ತಿದ್ದ ಸಿಎಂ ಬೊಮ್ಮಾಯಿ ನಾಟಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ್ ಟೇಕಲ್ ಎಂಬುವರು ಚಿಕಿತ್ಸೆ ನೀಡಿದ್ದಾರೆ.
ಮಂಡಿ ನೋವಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗ್ತಾರೆ ಅಂದ್ರು, ಆದರೆ ನಾಟಿ ವೈದ್ಯರ ಮೊರೆ ಹೋದ CM Bommai
ಅಧಿವೇಶನದ ವೇಳೆ ಲಕ್ಷ್ಮಣ ಸವದಿ ಅವರು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನಾಟಿ ವೈದ್ಯ ಲೋಕೇಶ್ ಟೇಕಲ್ ಬಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರಂತೆ. ಅದರಂತೆ ಇಂದು ಚಿಕಿತ್ಸೆ ಪಡೆದಿದ್ದಾರೆ.