4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

1985 ರಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟ ಬಿ.ಎಸ್ ಯಡಿಯೂರಪ್ಪ, ತನ್ನ ಕಾಲೇಜು ಜೀವನದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡವರು. ಆಗಿನಿಂದ ಬಿ.ಎಸ್.ವೈ ಸಂಘ ಚಟುವಟಿಕೆಯಲ್ಲಿ ನಿರಂತವಾಗಿ ಪಾಲ್ಗೊಂಡು ಕರ್ನಾಟಕ ಬಿಜೆಪಿ ಪಕ್ಷದ ಚುಕ್ಕಾಣಿ ಹಿಡಿದರು. 1988ರಲ್ಲಿ ಕರ್ನಾಟಕದ ಬಿಜೆಪಿ ರಾಜಾಧ್ಯಕ್ಷರಾಗಿ ನೇಮಕಗೊಂಡರು. 2007ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ನವೆಂಬರ್‌ 12 ರಿಂದ 19ರವರೆಗೆ ಕಾರ್ಯನಿರ್ವಹಿಸಿದರು. 2008ರ ಮೇ.30 ರಂದು ಶುಕ್ರವಾರ 2ನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದರು. 2018ರ ಮೇ. 17ರಂದು 3ನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಇದೀಗ ಮೈತ್ರಿ ಸರ್ಕಾರ ವಿಶ್ವಾಸ ಮಂಡನೆ ನಿರ್ಣಯದಲ್ಲಿ ಸೋತ ಬೆನ್ನಲ್ಲೇ ಬಿಎಸ್​ ಯಡಿಯೂರಪ್ಪ 4 ನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಂತೆಯೇ, 31ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಇಂದು ಸಂಜೆ 6 ರಿಂದ 6.15ರೊಳಗೆ ವಿಧಾನಸೌಧದ ಎದುರು ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. 1985ರಿಂದ ಬಿ.ಎಸ್​ಯಡಿಯೂರಪ್ಪನವರ ಕಾಲೇಜು ಜೀವನ, ವೈಯಕ್ತಿಕ ಬದುಕು ಮತ್ತು ರಾಜಕೀಯ ರಂಗದ ಪ್ರವೇಶ ಕುರಿತ ಮಾಹಿತಿ ಇಲ್ಲಿದೆ.

  • News18
  • |
First published:

  • 113

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    ಬಿ.ಎಸ್.ಯಡಿಯೂರಪ್ಪನವರು ಕಾಲೇಜು ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿ ಗುರುತಿಸಿಕೊಂಡಿದ್ದರು. 1970ರಲ್ಲಿ ಆರ್‍ಎಸ್‍ಎಸ್‍ನ ಶಿಕಾರಿಪುರ ಘಟಕದ ಕಾರ್ಯವಾಹಕರಾಗಿ ನೇಮಕಗೊಳ್ಳುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು.

    MORE
    GALLERIES

  • 213

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    1972ರಲ್ಲಿ ಶಿಕಾರಿಪುರ ನಗರ ಪಾಲಿಕೆಗೆ ಚುನಾಯಿತರಾದರು. ನಂತರ1985ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು.

    MORE
    GALLERIES

  • 313

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    1967ರಲ್ಲಿ ಬಿಎಸ್​ ಯಡಿಯೂರಪ್ಪ ಮೈತ್ರಾದೇವಿಯವರನ್ನು ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು

    MORE
    GALLERIES

  • 413

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    2004ರಲ್ಲಿ ಯಡಿಯೂರಪ್ಪನವರ ಮಡದಿ ಮೈತ್ರಾದೇವಿ ಮರಣಹೊಂದಿದರು.

    MORE
    GALLERIES

  • 513

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    1983ರಲ್ಲಿ ಶಿಕಾರಿಪುರದ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಆರು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕರಾದರು. 1999ರ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಅನುಭಸಿದ ಇವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಪುನಃ ವಿಧಾನಸಭೆಗೆ ಆಯ್ಕೆಯಾಗಿ ಪ್ರತಿಪಕ್ಷ ನಾಯಕರಾದರು.

    MORE
    GALLERIES

  • 613

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    2004ರ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ಪ್ರತಿಪಕ್ಷ ನಾಯಕರಾದರು. ನಂತರ 2008ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲದೊಂದಿಗೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರನ್ನು ಯಡಿಯೂರಪ್ಪನವರು 45,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಪರಿಣಾಮ ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರಕಾರ ಕರ್ನಾಟಕದಲ್ಲಿ ರಚನೆಗೊಂಡಿತು.

    MORE
    GALLERIES

  • 713

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    ಯಡಿಯೂರಪ್ಪನವರ ಕಾಲೇಜು ಜೀವನದ ಫೋಟೋ

    MORE
    GALLERIES

  • 813

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಕರ್ನಾಟಕದ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪನವರ ಹೆಸರಿತ್ತು. ನಂತರ  ಬಿಜೆಪಿ ಹೈಕಮಾಂಡ್​ ಯಡಿಯೂರಪ್ಪನವರಿಗೆ ರಾಜಜೀನಾಮೆ ನೀಡಬೇಕೆಂದು ಸೂಚಿಸಿತ್ತು. ಜುಲೈ 31, 2011ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದರು. ನಂತರ ನವೆಂಬರ್ 30, 2011ರಂದು ಶಾಸಕ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಯಡಿಯೂರಪ್ಪ ರಾಜೀನಾಮೆ ನೀಡಿದರು.

    MORE
    GALLERIES

  • 913

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    2011ರ ಏಪ್ರಿಲ್‍ನಲ್ಲಿ ಕರ್ನಾಟಕ ಜನತಾ ಪಕ್ಷ ಎಂಬ ನೂತನ ಪಕ್ಷವನ್ನು ಪ್ರಾರಂಬಿಸಿದರು. 2012ರಲ್ಲಿ ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

    MORE
    GALLERIES

  • 1013

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದ ಯಡಿಯೂರಪ್ಪ. ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಶಿಕಾರಿಪುರದಲ್ಲಿರುವ ವೀರಭದ್ರ ಶಾಸ್ತ್ರಿಯವರ ಶಂಕರ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು.

    MORE
    GALLERIES

  • 1113

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    ಮಾಜಿ ಪ್ರಧಾನ ಮಂತ್ರಿ ವಾಜಪೇಯಿ ಜೊತೆಯಲ್ಲಿ ಬಿ.ಎಸ್​ ಯಡಿಯೂರಪ್ಪನವರು.

    MORE
    GALLERIES

  • 1213

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    ಬಿಜೆಪಿ ರಾಷ್ಟ್ರಧ್ಯಕ್ಷರಾಗಿದ್ದ ದಿವಂಗತ ಖುಷ್ಬವ್​​ ಠಾಕ್ರೆಯವರ ಜೊತೆಗೆ ಬಿಎಸ್​ ಯಡಿಯೂರಪ್ಪ ಮತ್ತು ಅನಂತ್​ ಕುಮಾರ್​

    MORE
    GALLERIES

  • 1313

    4ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಬಿಎಸ್​ ಯಡಿಯೂರಪ್ಪ; ರಾಜಕೀಯ ರಂಗದ ಸಮಗ್ರ ಚಿತ್ರಣ ಇಲ್ಲಿದೆ

    ಬಿಎಸ್​ ಯಡಿಯೂರಪ್ಪನವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾಗಿ ಬಳ್ಳಾರಿ ಮತ್ತು ಶಿವಮೊಗ್ಗ ಜೈಲಿನಲ್ಲಿದ್ದರು.

    MORE
    GALLERIES