ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

First published:

  • 111

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಬಂದ್​ಗೆ ಬೀದರ್​ನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಬೇಡ್ಕರ್ ಸರ್ಕಲ್ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು ಬಿಟ್ಟರೆ ಬೀದರ್​ನ ಜನಜೀವನ ಸಹಜವಾಗಿತ್ತು.

    MORE
    GALLERIES

  • 211

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಮಡಿಕೇರಿಯಲ್ಲಿ ಮುಂಜಾನೆಯಿಂದಲೂ ವಾಹನಗಳಿಗೆ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ತಡೆ. ವಾಹನ ಸಂಚಾರ ಅಡ್ಡಿಪಡಿಸಿದ್ದನ್ನು ಪ್ರಶ್ನಿಸಿದ ಪೊಲೀಸರಿಗೆ ಬೋಪಯ್ಯ ಆವಾಜ್ ಹಾಕಿದರು. ವಾಹನಗಳ ತಡೆಯಿಂದ ಕಿರಿಕಿರಿ ಆಗುತ್ತಿದೆ ಎಂದು ಪ್ರಯಾಣಿಕರು ಅಲವತ್ತುಕೊಂಡರು.

    MORE
    GALLERIES

  • 311

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ನರಗುಂದ ಪಟ್ಟಣದ ಬಾಬಾಸಾಹೆಬ್ ವೃತ್ತದಿಂದ ಶಿವಾಜಿ ಸರ್ಕಲ್​ವರೆಗೆ ಬಿಜೆಪಿ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಗದಗ ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ, ರೋಣ, ಮುಂಡರಗಿ, ಶಿರಹಟ್ಟಿಯಲ್ಲೂ ಬಂದ್ ಆಚರಣೆ ಆಗಿದೆ.

    MORE
    GALLERIES

  • 411

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ರೈತರ ಸಾಲ ಮನ್ನಾ ಆಗ್ರಹಿಸಿ ಬಿಜೆಪಿ ಕರೆ ನೀಡಿರುವ ರಾಜ್ಯ ಬಂದ್​ಗೆ ಹಾವೇರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಬೆಳಗ್ಗೆಯಿಂದ ಎಂದಿನಂತೆ ಬಸ್, ಆಟೋ ಸಂಚಾರ ಆರಂಭವಾಗಿದೆ. ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದು , ಶಾಲಾ ಕಾಲೇಜುಗಳು ತೆರೆಯಲಿವೆ.

    MORE
    GALLERIES

  • 511

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಹಾವೇರಿ ಜಿಲ್ಲೆಯಲ್ಲಿ ಬಂದ್ಗೆ ಯಾವುದೇ ಸಂಘಟನೆ ಬೆಂಬಲ ಸೂಚಿಸಿಲ್ಲ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    MORE
    GALLERIES

  • 611

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಕರ್ನಾಟಕ ಬಂದ್ಗೆ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಕಾಲಿಗೆ ಬೆಂಕಿ ತಗುಲಿದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಜ್ಯುಬಿಲಿ ಸರ್ಕಲ್ನಲ್ಲಿ ಪ್ರತಿಭಟನೆ ಮಾಡಲು ಮುಂದಾದ ಬಿಜೆಪಿ ಕಾರ್ಯಕರ್ತರು ಟಯರ್ಗೆ ಪೆಟ್ರೊಲ್ ಹಾಕಿ ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಕಾರ್ಯಕರ್ತ ಬಸವರಾಜ ಇಂದೂರ ಅವರ ಬಲಗಾಲಿಗೆ ಬೆಂಕಿ ತಗುಲಿದೆ. ಅವರ ಚಪ್ಪಲಿಗೆ ಬೆಂಕಿ ಹತ್ತಿ ಉರಿಯುತ್ತಿದ್ದಂತೆಯೇ ಅವರು ಚಪ್ಪಲಿ ಕಳಚಿ ಹೆಚ್ಚಿನ ಅನಾಹುತದಿಂದ ಬಚಾವ್ ಆದರು. ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಟೈರ್ ತೆರವುಗೊಳಿಸಿದರು.

    MORE
    GALLERIES

  • 711

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಬಂದ್ ಹಿನ್ನೆಲೆಯಲ್ಲಿ ವಿ.ಪ. ಸದಸ್ಯ ಬಿ.ಜಿ. ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ನಗರದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಪಾಟೀಲ್ ಸೇರಿ ನೂರಕ್ಕೂ ಹೆಚ್ಚು ಕಾರ್ಯಕರ್ತರ ಬಂಧನವಾಯಿತು. ಇನ್ನೊಂದೆಡೆ, ಸರ್ದಾರ್ ವಲ್ಲಭಬಾಇ ಪಟೇಲ್ ಸರ್ಕಲ್ನಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

    MORE
    GALLERIES

  • 811

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಯಚೂರು ನಗರದ ಪಟೇಲ್ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿಸಲು ಪ್ರಯತ್ನಿಸಿದರು. ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಇಲ್ಲಿಯ ಪಟೇಲ್ ರಸ್ತೆ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರ ಸಮ್ಮುಖದಲ್ಲೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಕಾರ್ಯಕರ್ತರು ಪ್ರಯತ್ನಿಸಿದ್ದು ಕಂಡುಬಂತು.

    MORE
    GALLERIES

  • 911

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಶಿರಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

    MORE
    GALLERIES

  • 1011

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ನಿನ್ನೆಯಷ್ಟೇ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದ ಕೆಲ ಖಾಸಗಿ ಬಸ್ಸು ಮಾಲಕರು ಇವತ್ತು ತಮ್ಮ ನಿರ್ಧಾರವನ್ನ ಹಿಂಪಡೆದರು. ಬಸ್ಸುಗಳ ಸಂಚಾರ ಎಂದಿನಂತಿತ್ತು. ಅಂಗಡಿ ಮುಗ್ಗಟ್ಟುಗಳು, ಬಸ್ಸು, ಆಟೋ, ಟ್ಯಾಕ್ಸಿ ಸಂಚಾರ ಮುಂದುವರೆದಿದೆ. ವ್ಯಾಪಾರ ವಹಿವಾಟುಗಳೂ ಎಂದಿನಂತಿವೆ.

    MORE
    GALLERIES

  • 1111

    ಸಾಲ ಮನ್ನಾ ಮತ್ತು ಕರ್ನಾಟಕ ಬಂದ್: ಹೇಗಿದೆ ಪ್ರತಿಕ್ರಿಯೆ?

    ಬಿಜೆಪಿ ಕರೆ ಕೊಟ್ಟ ಬಂದ್​ಗೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕಪ್ಪು ಹಣ ವಾಪಸ್ ಆಗದಿರುವುದು, ಉದ್ಯೋಗ ಸೃಷ್ಟಿ ಮಾಡದಿರುವ ಹಿನ್ನೆಲೆ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    MORE
    GALLERIES