PM Modi: ಬೆಂಗಳೂರು ರೋಡ್​​ ಶೋ ವೇಳೆ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿಗೆ ಅವಕಾಶ; ಏನಿದು ಮೋದಿ ಲೆಕ್ಕಾಚಾರ?

ನಾಳೆಯೂ ಕರ್ನಾಟಕದಲ್ಲಿ ಮೋದಿ ಹವಾ ಮುಂದುವರೆಯಲಿದ್ದು, ಕೋಲಾರದಲ್ಲಿ ಬೆಳಗ್ಗೆ 11:30 - ಸಾರ್ವಜನಿಕ ಸಮಾವೇಶ, ಚನ್ನಪಟ್ಟಣ - ಮಧ್ಯಾಹ್ನ 1:30ಕ್ಕೆ ಸಾರ್ವಜನಿಕ ಸಮಾವೇಶ, ಬೇಲೂರಿನಲ್ಲಿ ಮಧ್ಯಾಹ್ನ 3:45ಕ್ಕೆ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿದೆ.

First published:

  • 17

    PM Modi: ಬೆಂಗಳೂರು ರೋಡ್​​ ಶೋ ವೇಳೆ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿಗೆ ಅವಕಾಶ; ಏನಿದು ಮೋದಿ ಲೆಕ್ಕಾಚಾರ?

    ಬೆಂಗಳೂರು: ಅಬ್ ಕೀ ಬಾರ್ ಮೋದಿ ಸರ್ಕಾರ್, ಹಿಂದಿನ ಚುನಾವಣೆಯಲ್ಲಿ ಈ ಸ್ಲೋಗನ್ ಮಾಡಿದ ಮ್ಯಾಜಿಕ್ ಮನಸ್ಸಿನಲ್ಲಿ ಇಟ್ಟುಕೊಂಡು ಈ ಬಾರಿಯ ರಾಜ್ಯ ಚುನಾವಣಾ ಅಖಾಡಕ್ಕೆ ಪ್ರಧಾನಿ ಮೋದಿ ಹೊಸದೊಂದು ಸ್ಲೋಗನ್ ಮೂಲಕ ಕಹಳೆ ಮೊಳಗಿಸಿದ್ದಾರೆ.

    MORE
    GALLERIES

  • 27

    PM Modi: ಬೆಂಗಳೂರು ರೋಡ್​​ ಶೋ ವೇಳೆ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿಗೆ ಅವಕಾಶ; ಏನಿದು ಮೋದಿ ಲೆಕ್ಕಾಚಾರ?

    ಹುಮ್ನಾಬಾದ್, ವಿಜಯಪುರ, ಕುಡಚಿಯಲ್ಲಿ ಇಂದು ಮೋದಿ ಪ್ರಚಾರ ನಡೆಸಿದ್ದು, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಭರ್ಜರಿ ರೋಡ್​ ಶೋ ನಡೆಸಿದ್ದಾರೆ.

    MORE
    GALLERIES

  • 37

    PM Modi: ಬೆಂಗಳೂರು ರೋಡ್​​ ಶೋ ವೇಳೆ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿಗೆ ಅವಕಾಶ; ಏನಿದು ಮೋದಿ ಲೆಕ್ಕಾಚಾರ?

    ಕುಡಚಿಯಿಂದ ಬೆಂಗಳೂರಿಗೆ ಬಂದ ಮೋದಿಗೆ ಅದ್ದೂರಿ ಸ್ವಾಗತ ಸಿಕ್ಕಿತು. ಗೊಲ್ಲರಹಟ್ಟಿ ನೈಸ್‌ ರೋಡ್‌ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್​ವರೆಗೆ ಮೋದಿ ರೋಡ್ ಶೋ ಮಾಡಿದರು. ರಸ್ತೆಯುದ್ದಕ್ಕೂ ಹೂಮಳೆಯೇ ಸುರಿಯಿತು. ರಸ್ತೆ ಪಕ್ಕದಲ್ಲಿ ಇದ್ದ ಕಾರ್ಯಕರ್ತರು ಮೋದಿ ಮೋದಿ ಅಂತಾ ಜೈಕಾರ ಹಾಕಿದರು.

    MORE
    GALLERIES

  • 47

    PM Modi: ಬೆಂಗಳೂರು ರೋಡ್​​ ಶೋ ವೇಳೆ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿಗೆ ಅವಕಾಶ; ಏನಿದು ಮೋದಿ ಲೆಕ್ಕಾಚಾರ?

    ಬೆಂಗಳೂರಿನ ರೋಡ್ ಶೊ ವೇಳೆ ಮೋದಿ ಪಕ್ಕದಲ್ಲಿ ಸದಾನಂದ ಗೌಡರು, ಆ ಭಾಗದ ಎಂಪಿ ಅನ್ನೋ ಕಾರಣಕ್ಕೆ, ಆದರೆ ಮತ್ತೊಂದು ಪಕ್ಕದಲ್ಲಿ ಛಲವಾದಿ ನಾರಾಯಣ ಸ್ವಾಮಿ ಕೂಡ ಇದ್ದದ್ದು ಗಮನ ಸೆಳೆದಿದೆ. ಇಲ್ಲಿರೋ ಲೆಕ್ಕಾಚಾರ ಇಷ್ಟೇ. ಯಲಹಂಕ, ಯಶವಂತಪುರ, ಆರ್ ಆರ್, ಮಹಾಲಕ್ಷ್ಮಿ ಲೇಔಟ್ ದಾಸರಹಳ್ಳಿ ಕ್ಷೇತ್ರದಲ್ಲಿ ದಲಿತ ವೋಟ್ ನಿರ್ಣಾಯಕ. ಆ ಸಮುದಾಯ ಪ್ರತಿನಿಧಿಸುವ ಛಲವಾದಿಯವರಿಗೆ, ರೋಡ್ ಶೊದಲ್ಲಿ ಮೋದಿ ಪಕ್ಕಕ್ಕೆ ನಿಲ್ಲಿಸಿ ಆ ಸಮುದಾಯದ ಮತ ಸೆಳೆಯುವ ಇರಾದೆಯಾಗಿದೆ.

    MORE
    GALLERIES

  • 57

    PM Modi: ಬೆಂಗಳೂರು ರೋಡ್​​ ಶೋ ವೇಳೆ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿಗೆ ಅವಕಾಶ; ಏನಿದು ಮೋದಿ ಲೆಕ್ಕಾಚಾರ?

    ಇನ್ನು, ನಾಳೆಯೂ ಕರ್ನಾಟಕದಲ್ಲಿ ಮೋದಿ ಹವಾ ಮುಂದುವರೆಯಲಿದ್ದು, ಕೋಲಾರದಲ್ಲಿ ಬೆಳಗ್ಗೆ 11:30 - ಸಾರ್ವಜನಿಕ ಸಮಾವೇಶ, ಚನ್ನಪಟ್ಟಣ - ಮಧ್ಯಾಹ್ನ 1:30ಕ್ಕೆ ಸಾರ್ವಜನಿಕ ಸಮಾವೇಶ, ಬೇಲೂರಿನಲ್ಲಿ ಮಧ್ಯಾಹ್ನ 3:45ಕ್ಕೆ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿದೆ. ಆ ಬಳಿಕ ಸಂಜೆ 5:45ಕ್ಕೆ ಮೈಸೂರಿನಲ್ಲಿ ಬರೋಬ್ಬರಿ 11 ಕಿಲೋ ಮೀಟರ್​​ ರೋಡ್​ ಶೋ ನಡೆಯಲಿದೆ. ಸಂಜೆ 7 ಗಂಟೆ ಬಳಿಕ ದೆಹಲಿಯತ್ತ ಮೋದಿ ಪ್ರಯಾಣ ಬೆಳೆಸಲಿದ್ದಾರೆ.

    MORE
    GALLERIES

  • 67

    PM Modi: ಬೆಂಗಳೂರು ರೋಡ್​​ ಶೋ ವೇಳೆ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿಗೆ ಅವಕಾಶ; ಏನಿದು ಮೋದಿ ಲೆಕ್ಕಾಚಾರ?

    ಇನ್ನೂ ಇಂದು ಮೂರು ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು ಕಾಂಗ್ರೆಸ್ ವಿರುದ್ಧ ಪ್ರಮುಖವಾಗಿ ಮೂರು ಅಸ್ತ್ರಗಳನ್ನು ಪ್ರಯೋಗ ಮಾಡಿದ್ದರು. ಮೊದಲನೆಯದಾಗಿ, ಕೆಲಸ ಮಾಡುವವರನ್ನು ಅದರಲ್ಲೂ ಹಿಂದುಳಿದ ವರ್ಗದ ನಾಯಕರನ್ನ ಕಂಡರೆ ಕಾಂಗ್ರೆಸ್​ಗೆ ಆಗೋದಿಲ್ಲ. ನನ್ನಂತಹವರನ್ನ ಬೈಯೋದಕ್ಕೆ ಒಂದು ಡಿಕ್ಷನರಿ ಮಾಡಿಕೊಂಡಿದ್ದಾರೆ ಅಂತ ಕುಟುಕಿದ್ದರು. ಈ ಮೂಲಕ ಜಾಗತಿಕ ನಾಯಕ, ಶ್ರಮಜೀವಿ ಅನ್ನೋ ಇಮೇಜ್ ಇಟ್ಟುಕೊಂಡಿರುವ ಪ್ರಧಾನಿಯನ್ನ ಬೆಂಬಲಿಸಬಲ್ಲ ಯುವ ಮತದಾರರ ಮೇಲೆ, ತಟಸ್ಥರಾಗಿರುವ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು.

    MORE
    GALLERIES

  • 77

    PM Modi: ಬೆಂಗಳೂರು ರೋಡ್​​ ಶೋ ವೇಳೆ ಸದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿಗೆ ಅವಕಾಶ; ಏನಿದು ಮೋದಿ ಲೆಕ್ಕಾಚಾರ?

    ಇದೇ ವೇಳೆ ಅಂಬೇಡ್ಕರ್​ ವಿಚಾರ ಪ್ರಸ್ತಾಪ ಮಾಡಿದ್ದು, ಎಐಸಿಸಿ ಅಧ್ಯಕ್ಷ ಖರ್ಗೆ, ಕಲ್ಯಾಣ ಕರ್ನಾಟಕ ಮತ್ತು ಮೀಸಲಾತಿ ಮರ್ಮಕ್ಕೆ ಕೌಂಟರ್ ಕೊಟ್ಟಂತೆ ಕಂಡು ಬಂತು. ಸಮುದಾಯದ ನಾಯಕರಾದ ಖರ್ಗೆ ಈಗ ಕಾಂಗ್ರೆಸ್ ಅಧ್ಯಕ್ಷರು ಎನ್ನುವ ಲೋಕಲ್ ಅಸ್ಮಿತೆ ಕರ್ನಾಟಕದಲ್ಲಿ ಪ್ರಭಾವ ಬೀರದಂತೆ ತಡೆಯುವ ಚಾಣಾಕ್ಷತೆಯ ನಡೆಯೂ ಕಂಡು ಬಂತು.

    MORE
    GALLERIES