Heavy Rains: ಕೇವಲ ಅರ್ಧ ಗಂಟೆ ಮಳೆಗೆ ಬೆಚ್ಚಿಬಿದ್ದ ಸಿಟಿ ಜನ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರೋ ನೀರು!

ರಾಮನಗರದಲ್ಲೂ ಸತತ ಒಂದು ಗಂಟೆ ಕಾಲ ಮಳೆಯಾಗಿದ್ದು, ಪರಿಣಾಮ ಬೆಂಗಳೂರು - ಮೈಸೂರು ಎಕ್ಸ್​​ಪ್ರೆಸ್​ ಹೈವೇಯಲ್ಲಿ ಮಳೆ ನೀರು ತುಂಬಿಕೊಂಡಿತ್ತು.

  • News18 Kannada
  • |
  •   | Bangalore [Bangalore], India
First published:

  • 17

    Heavy Rains: ಕೇವಲ ಅರ್ಧ ಗಂಟೆ ಮಳೆಗೆ ಬೆಚ್ಚಿಬಿದ್ದ ಸಿಟಿ ಜನ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರೋ ನೀರು!

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮಳೆ ಬಂದರೆ ಜನರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ನಗರದ ಬಹುತೇಕ ಅಂಡರ್‌ಪಾಸ್‌ಗಳು ನೀರಿನಿಂದ ತುಂಬಿ ಹೋಗುತ್ತೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಕಾಂಗ್ರೆಸ್​​ ಕಾರ್ಯಕರ್ತರ ಅಬ್ಬರ ಇತ್ತು. ಸಂಜೆ ಆಗುತ್ತಿದ್ದಂತೆ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿಯಿತು.

    MORE
    GALLERIES

  • 27

    Heavy Rains: ಕೇವಲ ಅರ್ಧ ಗಂಟೆ ಮಳೆಗೆ ಬೆಚ್ಚಿಬಿದ್ದ ಸಿಟಿ ಜನ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರೋ ನೀರು!

    ಇಂದು ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಅರ್ಧ ಗಂಟೆಗಳ ಕಾಲ ಅಬ್ಬರಿಸಿತ್ತು. ಅರ್ಧ ಗಂಟೆಯ ಮಳೆ ಅವ್ಯವಸ್ಥೆ ಸೃಷ್ಟಿಸಿತು. ನೂತನ ಸರ್ಕಾರ ರಚನೆಗೆ ಮಳೆಯ ಸಮಸ್ಯೆ ಕಾಡಬಹುದು ಅನ್ನುವ ಆತಂಕ ಎದುರಾಗಿತ್ತು. ಆದರೆ ಎಲ್ಲವೂ ಮುಗಿದ ಬಳಿಕ ಮಳೆ ಅಬ್ಬರಿಸಿದೆ.

    MORE
    GALLERIES

  • 37

    Heavy Rains: ಕೇವಲ ಅರ್ಧ ಗಂಟೆ ಮಳೆಗೆ ಬೆಚ್ಚಿಬಿದ್ದ ಸಿಟಿ ಜನ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರೋ ನೀರು!

    ಗಾಳಿ ಮಳೆಯಿಂದ ಹಲವಾರು ಕಡೆ ಮರಗಳು, ರೆಂಬೆ, ಕೊಂಬೆಗಳು ಉರುಳಿ ಬಿದ್ದು ಜನಸಾಮಾನ್ಯರಿಗೆ ಸಂಕಷ್ಟ ತಂದೊಡ್ಡಿತ್ತು. ಕಾರ್ಪೋರೇಶನ್ ಬಳಿ ಚಲಿಸುತ್ತಿದ್ದ ಬಸ್ ಮೇಲೆಯೇ ಮರ ಬಿದ್ದು ಆತಂಕಕ್ಕೆ ಕಾರಣವಾಗಿತ್ತು. ಅದೃಷ್ಟವಶಾತ್ ಪ್ರಯಾಣಿಕರು ಸೇಫ್ ಆಗಿ ಕೆಳಕ್ಕಿಳಿದರು.

    MORE
    GALLERIES

  • 47

    Heavy Rains: ಕೇವಲ ಅರ್ಧ ಗಂಟೆ ಮಳೆಗೆ ಬೆಚ್ಚಿಬಿದ್ದ ಸಿಟಿ ಜನ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರೋ ನೀರು!

    ಇನ್ನು ಬಿಬಿಎಂಪಿ ಮುಖ್ಯ ಕಚೇರಿ ಬಳಿಯಲ್ಲೇ ಬೃಹತ್ ಪ್ರಮಾಣದಲ್ಲಿ ಮರದ ಕೊಂಬೆಗಳು ಧರೆಗೆ ಉರುಳಿದ ಪರಿಣಾಮ ಪಾದಚಾರಿಗಳ ಓಡಾಟಕ್ಕೂ ತೊಂದರೆ ಆಗಿತ್ತು.

    MORE
    GALLERIES

  • 57

    Heavy Rains: ಕೇವಲ ಅರ್ಧ ಗಂಟೆ ಮಳೆಗೆ ಬೆಚ್ಚಿಬಿದ್ದ ಸಿಟಿ ಜನ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರೋ ನೀರು!

    ಆಟೋ ಮೇಲೆ ಕೊಂಬೆ ಬಿದ್ದು ಟಾಪ್ ಸಂಪೂರ್ಣ ಹಾಳಾಗಿತ್ತು. ಗಿರಿನಗರದ ನೆಹರು ರಸ್ತೆಯಲ್ಲಿ ಸಹ ಗೂಡ್ಸ್ ವಾಹನದ ಮೇಲೆ ಮರ ಬಿದ್ದು ಅವಾಂತರ ಸೃಷ್ಟಿಯಾಗಿತ್ತು. ಕಬ್ಬನ್ ಪಾರ್ಕ್​ನಲ್ಲಿ ಮರಗಳು ಧರೆಗೆ ಉರುಳಿದ್ದು, ಪಾಲಿಕೆ ಸಿಬ್ಬಂದಿ ತೆರವು ಮಾಡುವ ಕೆಲಸ ಮಾಡಿದ್ದರು. ಕೇವಲ ಅರ್ಧ ಗಂಟೆ ಕಾಲ ಸುರಿದ ಮಳೆಗೆ ಜನರು ಹೈರಾಣಗಿದ್ದಾರೆ.

    MORE
    GALLERIES

  • 67

    Heavy Rains: ಕೇವಲ ಅರ್ಧ ಗಂಟೆ ಮಳೆಗೆ ಬೆಚ್ಚಿಬಿದ್ದ ಸಿಟಿ ಜನ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರೋ ನೀರು!

    ಬಿಬಿಎಂಪಿ ಈಗಲೇ ಎಚ್ಚೆತ್ತುಕೊಂಡು ಮಳೆಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಇದೇ ರೀತಿಯ ಮಳೆ ಮುಂದುವರಿದರೆ ಪ್ರವಾಹ ಪರಿಸ್ಥಿತಿ ಎದುರಾದರು ಅಚ್ಚರಿಯಿಲ್ಲ. ಮುಂದಿನ ನಾಲ್ಕು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಳೆ ಸುರಿಯುವ ಸಾಧ್ಯತೆ ಹೆಚ್ಚಾಗಿದೆ.

    MORE
    GALLERIES

  • 77

    Heavy Rains: ಕೇವಲ ಅರ್ಧ ಗಂಟೆ ಮಳೆಗೆ ಬೆಚ್ಚಿಬಿದ್ದ ಸಿಟಿ ಜನ; ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರೋ ನೀರು!

    ಇತ್ತ, ರಾಮನಗರದಲ್ಲೂ ಸತತ ಒಂದು ಗಂಟೆ ಕಾಲ ಮಳೆಯಾಗಿದ್ದು, ಪರಿಣಾಮ ಬೆಂಗಳೂರು - ಮೈಸೂರು ಎಕ್ಸ್​​ಪ್ರೆಸ್​ ಹೈವೇಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಹೆದ್ದಾರಿಯಿಂದ ಸರಾಗವಾಗಿ ನೀರು ಹೊರ ಹೋಗದ ಕಾರಣ ಮೊದಲ 20 ನಿಮಿಷ ವಾಹನ ಸವಾರರ ಪರದಾಟ ನಡೆಸಿದರು. ನಂತರ ನಿಧಾನವಾಗಿ ಮಳೆ ನೀರು ಹೊರ ಹೋಯಿತು. ರಾಮನಗರ ತಾಲೂಕಿನ ಮಾಯಾಗಾನಹಳ್ಳಿ ಗ್ರಾಮದ ಬಳಿ ಅವಾಂತರ ನಡೆದಿದೆ.

    MORE
    GALLERIES