Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಅನಾಹುತ ತಡೆಗೆ ಬಿಬಿಎಂಪಿ ಫೀಲ್ಡಿಗೆ ಇಳಿದಿದೆ.

First published:

  • 18

    Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಲ್ಲಿ ಸುರಿದ ನಿನ್ನೆ ಮತ್ತು ಇಂದು ಸುರಿದ ಮಳೆಗೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಅನಾಹುತ ತಡೆಗೆ ಬಿಬಿಎಂಪಿ ಫೀಲ್ಡಿಗೆ ಇಳಿದಿದೆ. 41 ಫಾರೆಸ್ಟ್ ಗ್ಯಾಂಗ್ ತಂಡವನ್ನು ನಗರದಾದ್ಯಂತ ಬಿಬಿಎಂಪಿ ನಿಯೋಜಿಸಿದೆ.  

    MORE
    GALLERIES

  • 28

    Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

    ನಗರದ ಕೆ.ಆರ್ ಸರ್ಕಲ್, ಕಬ್ಬನ್ ಪಾರ್ಕ್, ಕಾರ್ಪೊರೇಷನ್ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು, ಕೊಂಬೆಗಳು ಮುರಿದು ಬಿದ್ದಿದೆ. ಬಿದ್ದಿದ್ದ ಮರಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ. ಬೆಂಗಳೂರಿನ ಮಹಾಮಳೆಗೆ ಇಂದು 65 ಮರಗಳು ಧರೆಗೆ ಉರುಳಿದಿದೆ.

    MORE
    GALLERIES

  • 38

    Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

    ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ಮಳೆ ಹೊಡೆತಕ್ಕೆ ಕಟ್ಟಡವೊಂದು ಕುಸಿದು ಬಿದ್ದಿದ್ದು, ಕಟ್ಟಡ ಕುಸಿಯುತ್ತಿದ್ದಂತೆ ಕಟ್ಟಡದಿಂದ ಹೊರಗೋಡಿಬಂದ ಜನ ಪ್ರಾಣಾ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    MORE
    GALLERIES

  • 48

    Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

    ಇನ್ನು, ಇಂದು ಸಂಜೆ ಭಾರೀ ಮಳೆಯಿಂದ ಕೆಆರ್ ಸರ್ಕಲ್​ ಅಂಡರ್​ ಪಾಸ್​​ನಲ್ಲಿ ಯುವತಿ ಸಾವನ್ನಪ್ಪಿದ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ನಗರದಲ್ಲಿ ಭಾರೀ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು.

    MORE
    GALLERIES

  • 58

    Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

    ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಚೀಫ್ ಕಮಿಷನರ್​ ತುಷಾರ್ ಗಿರಿನಾಥ್, ಹೆಬ್ಬಾಳ, ಪುಲಕೇಶಿನಗರ ಸುತ್ತಮುತ್ತ ರೌಂಡ್ಸ್ ಹಾಕಿದ್ದಾರೆ. ಸಿಎಂಗೆ ಫೋನ್ ಮೂಲಕವೇ ಮಳೆ ಅವಾಂತರದ ಮಾಹಿತಿ ಕೊಟ್ಟರು. ಕೆ.ಆರ್ ಸರ್ಕಲ್ ಪ್ರಕರಣದ ಬಗ್ಗೆಯೂ ಸಿಎಂ ಮಾಹಿತಿ ಪಡೆದಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಭೇಟಿಯಾದ ತುಷಾರ್ ಗಿರಿನಾಥ್, ಸಂಪೂರ್ಣ ಮಾಹಿತಿ ನೀಡಿದ್ದರು.

    MORE
    GALLERIES

  • 68

    Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

    ಬೆಂಗಳೂರು ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    MORE
    GALLERIES

  • 78

    Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

    ಮೈಸೂರು ಜಿಲ್ಲೆಯ ಗೆಜ್ಜಗನಹಳ್ಳಿಯಲ್ಲಿ ಮಳೆಯಿಂದ 5ಕ್ಕೂ ಹೆಚ್ಚು ಮನೆಗಳ ಚಾವಣಿ ಗೋಡೆ ಕುಸಿದಿದೆ. ಆದ್ದರಿಂದ ದವಸ ದಾನ್ಯಗಳಿಗೆ ಹಾನಿಯಾಗಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ. ತುಮಕೂರಿನಲ್ಲಿ ಆಲಿಕಲ್ಲಿನ ಮಳೆಯಾಗಿದೆ. ಮಳೆಯ ಜೊತೆ ಬೃಹತ್ ಗಾತ್ರದ ಆಲಿ ಕಲ್ಲುಗಳು ಬಿದ್ದಿವೆ.

    MORE
    GALLERIES

  • 88

    Bengaluru Rains: ವರುಣನ ಹೊಡೆತಕ್ಕೆ ಕುಸಿದು ಬಿದ್ದ ಕಟ್ಟಡ; ಎದ್ನೋ ಬಿದ್ನೋ ಅಂತ ಓಡಿ ಬಂದ ನಿವಾಸಿಗಳು

    ಉಳಿದಂತೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯಿಂದ ಮಳೆಹಾನಿ ಪ್ರದೇಶಗಳ ವರದಿ ಸಲ್ಲಿಕೆ ಮಾಡಿದ್ದು, ಬೆಂಗಳೂರು ನಗರದಲ್ಲಿ 206 ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ಈ ಪೈಕಿ 183 ಪ್ರದೇಶಗಳಿಗೆ ಹೆಚ್ಚುವರಿ ನಿಗಾ ವಹಿಸಲು ಬಿಬಿಎಂಪಿ ಸೂಚನೆ ನೀಡಿದೆ. ಆದರೂ ನಿರೀಕ್ಷೆಗೂ ಮೀರಿದ ಮಳೆಯಾಗುವ ಸಂಭವವಿದ್ದು, ಹೀಗಾಗಿ ಅಗತ್ಯಕ್ರಮಗಳನ್ನು ತೆಗದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

    MORE
    GALLERIES