Bengaluru Rains: ಜ್ಯುವೆಲ್ಲರಿ ಶಾಪ್​​​ಗೆ ನುಗ್ಗಿದ ಮಳೆ ನೀರು; ಕೊಚ್ಚಿ ಹೋಯ್ತು 2.5 ಕೋಟಿ ಮೌಲ್ಯದ ಚಿನ್ನದ ಆಭರಣ!

ನೀರು ಹರಿದು ಬಂದ ವೇಳೆ ನಮ್ಮ ಕಣ್ಣ ಎದುರೇ ಆಭರಣ ಕೊಚ್ಚಿಕೊಂಡು ಹೋಗುತ್ತಿದ್ದರು ನಮಗೆ ಏನು ಮಾಡಲು ಸಾಧ್ಯವಾಗಲಿಲ್ಲ ಎಂದು ಜ್ಯುವೆಲರಿ ಶಾಪ್ ಮಾಲೀಕರು ಕಣ್ಣೀರಿಟ್ಟಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Bengaluru Rains: ಜ್ಯುವೆಲ್ಲರಿ ಶಾಪ್​​​ಗೆ ನುಗ್ಗಿದ ಮಳೆ ನೀರು; ಕೊಚ್ಚಿ ಹೋಯ್ತು 2.5 ಕೋಟಿ ಮೌಲ್ಯದ ಚಿನ್ನದ ಆಭರಣ!

    ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಅವಾಂತರ ಸೃಷ್ಟಿ ಮಾಡಿದ್ದು, ನಿನ್ನೆ ಸಂಜೆ, ರಾತ್ರಿ ಮಳೆಗೆ ಸಾವುನೋವು, ಬೆಳೆನಾಶ ಸಂಭವಿಸಿದೆ. ಇದರ ನಡುವೆಯೇ ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್​ಗೆ ಮಳೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಆಭರಣಗಳು ಕೊಚ್ಚಿ ಹೋಗಿರುವ ಘಟನೆ ಮಲ್ಲೇಶ್ವರಂ 9ನೇ ಕ್ರಾಸ್ ನಲ್ಲಿ ನಡೆದಿದೆ.

    MORE
    GALLERIES

  • 27

    Bengaluru Rains: ಜ್ಯುವೆಲ್ಲರಿ ಶಾಪ್​​​ಗೆ ನುಗ್ಗಿದ ಮಳೆ ನೀರು; ಕೊಚ್ಚಿ ಹೋಯ್ತು 2.5 ಕೋಟಿ ಮೌಲ್ಯದ ಚಿನ್ನದ ಆಭರಣ!

    ಮಲ್ಲೇಶ್ವರಂನ ನಿಹಾನ್ ಜ್ಯುವೆಲ್ಲರಿ ಶಾಪ್​​ಗೆ ನಿನ್ನೆ ಸುರಿದ ಮಳೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಶಾಪ್​ನಲ್ಲಿದ್ದ ಆಭರಗಳಲ್ಲಿ ಅರ್ಧಕ್ಕೆಅರ್ಧ ಕೊಚ್ಚಿ ಕೊಂಡು ಹೋಗಿದೆ.

    MORE
    GALLERIES

  • 37

    Bengaluru Rains: ಜ್ಯುವೆಲ್ಲರಿ ಶಾಪ್​​​ಗೆ ನುಗ್ಗಿದ ಮಳೆ ನೀರು; ಕೊಚ್ಚಿ ಹೋಯ್ತು 2.5 ಕೋಟಿ ಮೌಲ್ಯದ ಚಿನ್ನದ ಆಭರಣ!

    ಅಂಗಡಿಯಲ್ಲಿದ್ದ ಫರ್ನಿಚರ್ಸ್, ಜ್ಯುವೆಲ್ಲರಿ, 50 ಸಾವಿರ ಹಣ ಜ್ಯುವೆಲ್ಲರಿ ಶಾಪ್​​ನ ಹಿಂಭಾಗದ ಬಾಗಿಲ ಮೂಲಕ ಕೊಚ್ಚಿಕೊಂಡು ಹೋಗಿವೆ. ನಿಹಾನ್​ ಜ್ಯುವೆಲ್ಲರಿ ಶಾಪ್​ ಆರಂಭವಾಗಿ ಇದೇ ಮೇ 27ಕ್ಕೆ ಒಂದು ವರ್ಷ ತುಂಬಲಿದೆ. ಇದರ ನಡುವಯೇ ಅವಾಂತರ ಸೃಷ್ಟಿಯಾಗಿದೆ.

    MORE
    GALLERIES

  • 47

    Bengaluru Rains: ಜ್ಯುವೆಲ್ಲರಿ ಶಾಪ್​​​ಗೆ ನುಗ್ಗಿದ ಮಳೆ ನೀರು; ಕೊಚ್ಚಿ ಹೋಯ್ತು 2.5 ಕೋಟಿ ಮೌಲ್ಯದ ಚಿನ್ನದ ಆಭರಣ!

    ಏಕಾಏಕಿ ಮಳೆ ನೀರು ರಭಸವಾಗಿ ಹರಿದು ಬಂದು ಅಂಗಡಿಯಲ್ಲಿದ್ದ ವಸ್ತುಗಳನ್ನು ಕಳೆದುಕೊಂಡ ಸದ್ಯ ಏನೂ ತೋಚದೆ ಮಾಲೀಕರಾದ ಪ್ರಿಯಾ ಅವರು ಕಣ್ಣೀರಿಟ್ಟಿದ್ದಾರೆ.

    MORE
    GALLERIES

  • 57

    Bengaluru Rains: ಜ್ಯುವೆಲ್ಲರಿ ಶಾಪ್​​​ಗೆ ನುಗ್ಗಿದ ಮಳೆ ನೀರು; ಕೊಚ್ಚಿ ಹೋಯ್ತು 2.5 ಕೋಟಿ ಮೌಲ್ಯದ ಚಿನ್ನದ ಆಭರಣ!

    ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಲೀಕರಾದ ಪ್ರಿಯಾ ಅವರು, ನೀರು ತುಂಬಿದಾಗ ಕಾಲ್ ಮಾಡಿ ಬಿಬಿಎಂಪಿ ಅಧಿಕಾರಿಗಳಿಗೆ ಸಹಾಯ ಮಾಡಲು ಮನವಿ ಮಾಡಿದ್ದೆ. ಆದರೆ ಇದುವರೆಗೂ ಯಾವುದೇ ಅಧಿಕಾರಿಗಳು ಕೂಡ ಕ್ಯಾರೇ ಎಂದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

    MORE
    GALLERIES

  • 67

    Bengaluru Rains: ಜ್ಯುವೆಲ್ಲರಿ ಶಾಪ್​​​ಗೆ ನುಗ್ಗಿದ ಮಳೆ ನೀರು; ಕೊಚ್ಚಿ ಹೋಯ್ತು 2.5 ಕೋಟಿ ಮೌಲ್ಯದ ಚಿನ್ನದ ಆಭರಣ!

    ಸುಮಾರು ಎರಡು ಕೋಟಿ ವೆಚ್ಚದ ಆಭರಣ, ಫರ್ನಿಚರ್ಸ್ ಕಳೆದುಕೊಂಡು ಮಾಲೀಕರು ಕಣ್ಣೀರಿಟ್ಟಿದ್ದಾರೆ. ಏಕಾಏಕಿ ನೀರು, ಕಸ ಹರಿದು ಬಂದ ಪರಿಣಾಮ ಅಂಗಡಿಯ ಶೇಟರ್​ ಕೂಡ ಕ್ಲೋಸ್ ಮಾಡಲು ಆಗಲಿಲ್ಲ. ಇಲ್ಲಿ ನಡೆದಿರುವ ಕಾಮಗಾರಿಯೇ ಅವಾಂತರಕ್ಕೆ ಕಾರಣವಾಗಿದೆ. ಕಾಮಗಾರಿ ವೇಳೆ ಚರಂಡಿಗಳನ್ನು ಚಿಕ್ಕದಾಗಿ ಮಾಡಿದ್ದಾರೆ. ಇದುವೇ ಕಾರಣ ಎಂದು ಪ್ರಿಯಾ ಅವರು ಆರೋಪಿಸಿದ್ದಾರೆ.

    MORE
    GALLERIES

  • 77

    Bengaluru Rains: ಜ್ಯುವೆಲ್ಲರಿ ಶಾಪ್​​​ಗೆ ನುಗ್ಗಿದ ಮಳೆ ನೀರು; ಕೊಚ್ಚಿ ಹೋಯ್ತು 2.5 ಕೋಟಿ ಮೌಲ್ಯದ ಚಿನ್ನದ ಆಭರಣ!

    ಶೇಕಡಾ 80 ರಷ್ಟು ನಮಗೆ ನಷ್ಟ ಆಗಿದೆ. ಅಂಗಡಿಯನ್ನು ರಿನೋವೇಶನ್​ ಕೂಡ ಮಾಡಿದ್ದೇವು. ಪವರ್ ಕೂಡ ಕಟ್ ಆಗಿತ್ತು. ಈಗ ಮತ್ತೆ ವಾಪಸ್ ಬಂದಿದೆ. ನೀರು ಹರಿದು ಬಂದ ವೇಳೆ ನಮ್ಮ ಕಣ್ಣ ಎದುರೇ ಆಭರಣ ಕೊಚ್ಚಿಕೊಂಡು ಹೋಗುತ್ತಿದ್ದರು ನಮಗೆ ಏನು ಮಾಡಲು ಸಾಧ್ಯವಾಗಲಿಲ್ಲ. ಸ್ಟೋರ್ ರೂಮ್​​ನಲ್ಲಿದ್ದ ಆಭರಣಗಳು ಕೊಚ್ಚಿ ಹೋಗಿದೆ, ಸುಮಾರು ಎರಡೂವರೆ ಕೋಟಿಯಷ್ಟು ನಷ್ಟ ಎದುರಾಗಿದೆ. ಸಾಧನೆ ಮಾಡಿ ಮಾಧ್ಯಮದಲ್ಲಿ ಬರಬೇಕು ಎಂದು ಕೊಂಡು ಕೆಲಸ ಮಾಡುತ್ತಿದ್ದೇವು, ಆದರೆ ಈ ರೀತಿ ವರದಿ ಬರುತ್ತಿರುವುದು ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

    MORE
    GALLERIES