Karnataka Election 2023: ಚುನಾವಣೆಯ ಹೊತ್ತಲ್ಲೇ ನಮಾಜ್​ ಮಾಡಿದ ಬಿಜೆಪಿ ಶಾಸಕ! ಎಲೆಕ್ಷನ್ ಗಿಮಿಕ್​​ ಅಂತ ಕಾಂಗ್ರೆಸ್​ ಲೇವಡಿ

ನಮಾಜ್​ ಮಾಡಿರುವ ಕುರಿತಂತೆ ಸ್ಪಷ್ಟನೆ ನೀಡಿರುವ ಶಾಸಕ ಉದಯ್ ಗರುಡಾಚಾರ್ ಅವರು, ಭಾರತ ದೇಶ ಒಂದು ಜ್ಯಾತ್ಯಾತೀತ ದೇಶ, ಇಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು ಎಲ್ಲರಿಗೂ ಅವಕಾಶ ಇದೆ. ಭಾರತ ಭವ್ಯ ಭಾರತ ಆಗಬೇಕು ಅಂದರೆ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ತಿರುಗೇಟು ನೀಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Election 2023: ಚುನಾವಣೆಯ ಹೊತ್ತಲ್ಲೇ ನಮಾಜ್​ ಮಾಡಿದ ಬಿಜೆಪಿ ಶಾಸಕ! ಎಲೆಕ್ಷನ್ ಗಿಮಿಕ್​​ ಅಂತ ಕಾಂಗ್ರೆಸ್​ ಲೇವಡಿ

    ಬೆಂಗಳೂರು: ಚುನಾವಣೆ ಹೊತ್ತಲ್ಲಿ ಬಿಜೆಪಿ ಪಕ್ಷದ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ನಮಾಜ್ ಮಾಡಿದ ವಿಚಾರದ ಕುರಿತಂತೆ ಕಾಂಗ್ರೆಸ್​​ ಮುಖಂಡರು ಬಿಜೆಪಿಯನ್ನು ಕಾಲೆಳೆದಿದ್ದಾರೆ.

    MORE
    GALLERIES

  • 27

    Karnataka Election 2023: ಚುನಾವಣೆಯ ಹೊತ್ತಲ್ಲೇ ನಮಾಜ್​ ಮಾಡಿದ ಬಿಜೆಪಿ ಶಾಸಕ! ಎಲೆಕ್ಷನ್ ಗಿಮಿಕ್​​ ಅಂತ ಕಾಂಗ್ರೆಸ್​ ಲೇವಡಿ

    ಸಾಮಾಜಿಕ ಜಾಲತಾಣದಲ್ಲಿ ಶಾಸಕ ಉದಯ್ ಗರುಡಾಚಾರ್ ನಮಾಜ್ ಮಾಡಿರುವ ಫೋಟೋಗಳನ್ನು ಹಂಚಿಕೊಂಡು ಪೋಸ್ಟ್ ಮಾಡಿ ಕಾಂಗ್ರೆಸ್ ಮುಖಂಡರು, ಇದು ಕೇವಲ ಎಲೆಕ್ಷನ್ ಗಿಮಿಕ್​​ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

    MORE
    GALLERIES

  • 37

    Karnataka Election 2023: ಚುನಾವಣೆಯ ಹೊತ್ತಲ್ಲೇ ನಮಾಜ್​ ಮಾಡಿದ ಬಿಜೆಪಿ ಶಾಸಕ! ಎಲೆಕ್ಷನ್ ಗಿಮಿಕ್​​ ಅಂತ ಕಾಂಗ್ರೆಸ್​ ಲೇವಡಿ

    ಬಿಜೆಪಿ ಸರ್ಕಾರದ ದ್ವಂದ್ವ ನೀತಿ ನೋಡಿ. ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡರು, ಅವರ ಪಕ್ಷದ ಶಾಸಕ ಉದಯ್ ಗರುಡಾಚಾರ್ ಮಾನಮರ್ಯಾದೆ ಬಿಟ್ಟು ಟೋಪಿ ಹಾಕಿಕೊಂಡು ಮತ ಬೇಟೆಯಾಡಲು ಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

    MORE
    GALLERIES

  • 47

    Karnataka Election 2023: ಚುನಾವಣೆಯ ಹೊತ್ತಲ್ಲೇ ನಮಾಜ್​ ಮಾಡಿದ ಬಿಜೆಪಿ ಶಾಸಕ! ಎಲೆಕ್ಷನ್ ಗಿಮಿಕ್​​ ಅಂತ ಕಾಂಗ್ರೆಸ್​ ಲೇವಡಿ

    ಇದರ ಬೆನ್ನಲ್ಲೇ ನಮಾಜ್​ ಮಾಡಿರುವ ಕುರಿತಂತೆ ಸ್ಪಷ್ಟನೆ ನೀಡಿರುವ ಶಾಸಕ ಉದಯ್ ಗರುಡಾಚಾರ್ ಅವರು, ಭಾರತ ದೇಶ ಒಂದು ಜ್ಯಾತ್ಯಾತೀತ ದೇಶ, ಇಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು ಎಲ್ಲರಿಗೂ ಅವಕಾಶ ಇದೆ. ಭಾರತ ಭವ್ಯ ಭಾರತ ಆಗಬೇಕು ಅಂದರೆ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ತಿರುಗೇಟು ನೀಡಿದ್ದಾರೆ.

    MORE
    GALLERIES

  • 57

    Karnataka Election 2023: ಚುನಾವಣೆಯ ಹೊತ್ತಲ್ಲೇ ನಮಾಜ್​ ಮಾಡಿದ ಬಿಜೆಪಿ ಶಾಸಕ! ಎಲೆಕ್ಷನ್ ಗಿಮಿಕ್​​ ಅಂತ ಕಾಂಗ್ರೆಸ್​ ಲೇವಡಿ

    ಇದೇ ವೇಳೆ ನಾನು ಹುಟ್ಟುತ್ತಾ ಒಬ್ಬ ಬ್ರಾಹ್ಮಣ, ಬೆಳಗ್ಗೆ ಸ್ನಾನ ಮುಗಿಸಿ ಸಂಧ್ಯಾವಂದನೆ ಮಾಡುತ್ತೇನೆ. ಒಮ್ಮೆ ಮನೆಯಿಂದ ಹೊರಗಡೆ ಬಂದರೆ ನನ್ನ ಕಣ್ಣಿಗೆ ಎಲ್ಲರೂ ಒಂದೇ. ಹೀಗಾಗಿ ನಾನು ಜಾಮೀಯ ಮಸೀದಿಗೆ ಹೋಗಿದ್ದಕ್ಕೆ ಬೇರೆ ಅರ್ಥ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 67

    Karnataka Election 2023: ಚುನಾವಣೆಯ ಹೊತ್ತಲ್ಲೇ ನಮಾಜ್​ ಮಾಡಿದ ಬಿಜೆಪಿ ಶಾಸಕ! ಎಲೆಕ್ಷನ್ ಗಿಮಿಕ್​​ ಅಂತ ಕಾಂಗ್ರೆಸ್​ ಲೇವಡಿ

    ಶ್ರೀರಾಮ ನವಮಿಯೊಂದು ನಾನು, ಪತ್ನಿಯೊಂದಿಗೆ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದೆ. ಕ್ರಿಸ್ಮಸ್ ಸಮಯದಲ್ಲಿ ನಾನು ಚರ್ಚ್​​ಗೆ ಹೋಗುತ್ತೇನೆ, ಮೊನ್ನೆಯಷ್ಟೇ ಶ್ರೀರಾಮನವಮಿ ಆಚರಿಸಿದ್ದೇನೆ. ರಂಜಾನ್ ಪವಿತ್ರಾ ಮಾಸ ಆದ ಕಾರಣ ನಾನು ಮಸೀದಿಗೆ ಹೋಗಿ ನಮಾಜ್​ ಓದಿಕೊಂಡು ಬಂದಿದ್ದೇನೆ. ನಮ್ಮ ಸಂವಿಧಾನ, ನಮ್ಮ ದೇಶ ಜ್ಯಾತ್ಯಾತೀತ ದೇಶ ಅಂತ ಹೇಳುತ್ತೆ. ಅದ್ದರಂತೆ ದೇಶದ ಅಭಿವೃದ್ಧಿಯೇ ಮುಖ್ಯ ಎಂದು ಗರುಡಾಚಾರ್ ಹೇಳಿದ್ದಾರೆ.

    MORE
    GALLERIES

  • 77

    Karnataka Election 2023: ಚುನಾವಣೆಯ ಹೊತ್ತಲ್ಲೇ ನಮಾಜ್​ ಮಾಡಿದ ಬಿಜೆಪಿ ಶಾಸಕ! ಎಲೆಕ್ಷನ್ ಗಿಮಿಕ್​​ ಅಂತ ಕಾಂಗ್ರೆಸ್​ ಲೇವಡಿ

    ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ನಮ್ಮ ಸಂಘದ ಮೋಹನ್ ಭಾಗವತ್ ಎಲ್ಲರೂ ಇದನ್ನೇ ಹೇಳಿದ್ದಾರೆ. ಭವ್ಯ ಭಾರತ ನಿರ್ಮಾಣ ಆಗಬೇಕು ಎಂದರೆ ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು ಅಂತ ಹೇಳಿದ್ದಾರೆ. ಅಭಿವೃದ್ಧಿ, ವಿಕಾಸ ಕಡೆ ನಾವು ನಡೆಯಬೇಕಿದೆ. ಎಲ್ಲರಿಗೂ ಒಳ್ಳೆಯದು ಆಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಬಿಜೆಪಿ ಶಾಸಕರು ತಿಳಿಸಿದ್ದಾರೆ.

    MORE
    GALLERIES