Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?

21 ಆಟೋ ಚಾಲಕರ ಸಂಘಟನೆಗಳಿಂದ ಸುಮಾರು 2 ಲಕ್ಷದ 10 ಸಾವಿರ ಆಟೋಗಳ ಸಂಚಾರ ಬಂದ್ ಮಾಡಿ ಮುಷ್ಕರದಲ್ಲಿ ಭಾಗಿಯಾಗಲಿದೆ. ತಮ್ಮ ಬೇಡಿಕೆ ಈಡೇರಿಸುವಂತೆ ಮೆಜೆಸ್ಟಿಕ್​ ರೈಲ್ವೆ ನಿಲ್ದಾಣದಿಂದ ರ್ಯಾಲಿ ಮೂಲಕ ಹೊರಟು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರ ಸಂಘಟನೆಗಳು ನಿರ್ಧಾರ ಮಾಡಿದೆ.

  • News18 Kannada
  • |
  •   | Bangalore [Bangalore], India
First published:

  • 17

    Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ನೀವು ಏನಾದರೂ ಆಟೋದಲ್ಲಿ ಪ್ರಯಾಣಿಸಬೇಕು ಅಂತ ಎಂದುಕೊಂಡರೆ ಆಟೋ ಬಿಟ್ಟು ಬೇರೆ ವಾಹನದಲ್ಲಿ ಹೋಗಲು ಪ್ಲ್ಯಾನ್​ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಇಂದು ನಗರದಲ್ಲಿ ಆಟೋಗಳು ರಸ್ತೆಗೆ ಇಳಿಯುವುದಿಲ್ಲ.

    MORE
    GALLERIES

  • 27

    Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?

    ನೀವು ಏನಾದರೂ ಇಂದು ಅರ್ಜೇಂಟ್​​ ಆಗಿ ಹೊರ ಹೋಗಬೇಕು ಅಂತ ಆಟೋ ಮೊರೆ ಹೋದರೆ ನಿಮಗೆ ಆಟೋ ಸಿಗುವುದಿಲ್ಲ. ಮಧ್ಯರಾತ್ರಿ 12 ರಿಂದ ಇಂದು ರಾತ್ರಿ ಹನ್ನೆರಡು ಗಂಟೆಯವರೆಗೆ ರಾಜ್ಯ ರಾಜಧಾನಿಯಲ್ಲಿ ಆಟೋ ಸಂಚಾರ ಕಂಪ್ಲೀಟ್ ಆಗಿ ಬಂದ್ ಆಗಿದೆ.

    MORE
    GALLERIES

  • 37

    Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?

    ಮೂರು ದಿನಗಳ ಹಿಂದೆಯಿಂದ ಸರ್ಕಾರಕ್ಕೆ ಬೈಕ್ ಟ್ಯಾಕ್ಸಿ ಬ್ಯಾನ್ ಗೆ ಆಗ್ರಹಿಸಿ, ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಆಟೋ ಸೇವೆ ನೀಡದೆ ಹೋರಾಟಕ್ಕಿಳಿದಿದ್ದು ಯಾರಾದರೂ ಆಟೋ ಸೇವೆ ನೀಡಿದರೆ ಆಗುವ ಅನಾಹುತಕ್ಕೆ ನಾವು ಕಾರಣರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 47

    Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?

    ಬೈಕ್ ಟ್ಯಾಕ್ಸಿಗೆ ವಿರೋಧ
    ರ್ಯಾಪಿಡೋ ಬೈಕ್ ಟ್ಯಾಕ್ಸಿ ರಾಜ್ಯದಲ್ಲಿ ಬ್ಯಾನ್ ಮಾಡುವಂತೆ ಒತ್ತಾಯಿಸಿ ಕಳೆದ ಮೂರು ದಿನ ಗಡುವು ನೀಡಿದ್ರು ಸರ್ಕಾರ ಕ್ಯಾರೆ ಎಂದಿಲ್ಲ. ಇದರಿಂದ ಅಸಮಾಧಾನಗೊಂಡಿರೋ ಬೆಂಗಳೂರಿನ 21 ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ನಿರ್ಧಾರ ಮಾಡಿದೆ.

    MORE
    GALLERIES

  • 57

    Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?

    21 ಆಟೋ ಚಾಲಕರ ಸಂಘಟನೆಗಳಿಂದ ಸುಮಾರು 2 ಲಕ್ಷದ 10 ಸಾವಿರ ಆಟೋಗಳ ಸಂಚಾರ ಬಂದ್ ಮಾಡಿ ಮುಷ್ಕರದಲ್ಲಿ ಭಾಗಿಯಾಗಲಿದೆ. ತಮ್ಮ ಬೇಡಿಕೆ ಈಡೇರಿಸುವಂತೆ ಮೆಜೆಸ್ಟಿಕ್​ ರೈಲ್ವೆ ನಿಲ್ದಾಣದಿಂದ ರ್ಯಾಲಿ ಮೂಲಕ ಹೊರಟು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರ ಸಂಘಟನೆಗಳು ನಿರ್ಧಾರ ಮಾಡಿದೆ.

    MORE
    GALLERIES

  • 67

    Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?

    ಆಟೋ ಚಾಲಕರ ಆಕ್ರೋಶ!
    ಈ ಕುರಿತಂತೆ ನ್ಯೂಸ್​​18 ಕನ್ನಡದೊಂದಿಗೆ ಮಾತನಾಡಿರುವ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಆಟೋ ಸೇವೆ ನೀಡಿದವರಿಗೆ ತೊಂದರೆ ಆದರೆ ನಾವು ಕಾರಣರಲ್ಲ. ಏನಾದರೂ ಅನಾಹುತ ಆದರೆ ಅದಕ್ಕೆ ನಾವು ಹೊಣೆ ಅಲ್ಲ. ದುಡಿದು ತಿನ್ನೋ ಆಟೋ ಪ್ರತಿಯೊಬ್ಬ ಸವಾರರು ಇಂದು ಬೆಂಬಲಿಸುತ್ತಾರೆ. ಬಂದ್​ಗೆ 21 ವಿವಿಧ ಆಟೋ ಚಾಲಕರ‌ ಸಂಘಟನೆ ಬೆಂಬಲ ನೀಡಿದ್ದು, ಸುಮಾರು ಎರಡು ಲಕ್ಷ‌ ಆಟೋಗಳು ರಸ್ತೆಗೆ ಇಳಿಯುವುದಿಲ್ಲ. ಪ್ರತಿಭಟನೆಗೆ ಎಲ್ಲಾ ಆಟೋ ಚಾಲಕರ ಬೆಂಬಲವಿದೆ. ನಮ್ಮ ಅನ್ನ ಕಸಿಯುತ್ತಿರುವ ಬೈಕ್ ಟ್ಯಾಕ್ಸಿಗಳನ್ನು ನಿಷೇಧ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.

    MORE
    GALLERIES

  • 77

    Autorickshaw Drivers Strike: ಬೆಂಗಳೂರಿಗರೇ ಇಂದು ಆಟೋ ಸಿಗಲ್ಲ ಎಚ್ಚರ ಎಚ್ಚರ! ಚಾಲಕರ ಮುಷ್ಕರಕ್ಕೆ ಮಣಿಯುತ್ತಾ ಸರ್ಕಾರ?

    ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ಬ್ರೇಕ್​ ಹಾಕುತ್ತಾ ಸರ್ಕಾರ?
    ಇನ್ನು, ಆಟೋ ಚಾಲಕರ ಮುಷ್ಕರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು ಅವರು, ಚುನಾವಣೆಯ ಒಳಗೆ ಚಾಲಕರಿಗೆ ಸಿಹಿ ಸುದ್ದಿ ಕೊಡುವ ಭರವಸೆ ನೀಡಿದ್ದಾರೆ. ಆರ್​ಟಿಒ ಅಧಿಕಾರಿಗಳಿಂದ ರ್ಯಾಪಿಡೋ ಬ್ಯಾನ್ ಮಾಡಲು ವರದಿ ಕೇಳಿದ್ದೀನಿ. ವರದಿ ನನ್ನ ಕೈ ಸೇರಿದ್ದೆ ಚಾಲಕರಿಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದಾರೆ.

    MORE
    GALLERIES