Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!

ನಂದಿನಿ ಹಾಲು ಹಾಗೂ ಕೆಎಂಎಫ್​ ಹಾಲಿನ ಉತ್ಪನ್ನಗಳನ್ನೇ ಬಳಕೆ ಮಾಡುವಂತೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ಕರೆ ನೀಡಿದೆ.

  • News18 Kannada
  • |
  •   | Bangalore [Bangalore], India
First published:

  • 17

    Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!

    ಬೆಂಗಳೂರು: ರಾಜ್ಯದ ಲಕ್ಷಾಂತರ ರೈತರ ಜೀವನಾಡಿ. ಕೋಟ್ಯಾಂತರ ಜನರಿಗೆ ಕ್ಷೀರಧಾರೆ ಹರಿಸುತ್ತಿರುವ ಕಾಮಧೇನು. ಹಸಿದ ಮಕ್ಕಳ ಹೊಟ್ಟೆಗೆ ಕ್ಷೀರಭಾಗ್ಯ ನೀಡುತ್ತಿದೆ ನಂದಿನಿ. ದೇಶ ಕಾಯುವ ಸೈನಿಕರಿಗೂ ಗಡಿವರೆಗೂ ತಲುಪಿ ವೀರಯೋಧರಿಗೂ ನಂದಿನಿ ಶಕ್ತಿ ತುಂಬುತ್ತಿದೆ.

    MORE
    GALLERIES

  • 27

    Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!

    ನೂರಾರು ಸುಪ್ರಸಿದ್ಧ ದೇವಸ್ಥಾನಗಳ ಪವಿತ್ರ ಪ್ರಸಾದ ತಯಾರಿಕೆಗೂ ನಂದಿನಿ ತುಪ್ಪವೇ ಬೇಕು. ಇಂಥದ್ದೊಂದು ಕರ್ನಾಟಕದ ಕನ್ನಡಿಗರ ಹೆಮ್ಮೆಯ ಕೆಎಂಎಫ್​ ಒಕ್ಕೂಟ ವ್ಯವಸ್ಥೆ ಮೇಲೆ ಈಗ ಗುಜರಾತ್​​​​ ಮೂಲದ ಅಮುಲ್​ ಕಂಪನಿ ಲಗ್ಗೆ ಹಾಕುತ್ತಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ.

    MORE
    GALLERIES

  • 37

    Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!

    ಇದರ ಬೆನ್ನಲ್ಲೇ ನಂದಿನಿ ಹಾಲು ಹಾಗೂ ಕೆಎಂಎಫ್​ ಹಾಲಿನ ಉತ್ಪನ್ನಗಳನ್ನೇ ಬಳಕೆ ಮಾಡುವಂತೆ ಬೆಂಗಳೂರು ಹೋಟೆಲುಗಳ ಸಂಘ ಕರೆ ನೀಡಿದೆ.

    MORE
    GALLERIES

  • 47

    Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!

    ಹೌದು, ಈ ಕುರಿತು ಅಧಿಕೃತವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಬೃಹತ್​ ಬೆಂಗಳೂರು ಹೋಟೆಲುಗಳ ಸಂಘ (ರಿ.) , ನಮ್ಮ ರೈತರು ಉತ್ಪಾದಿಸುವ ಕರ್ನಾಟಕದ ಹೆಮ್ಮೆಯ ನಂದಿನಿ ಹಾಲನ್ನು ನಾವೆಲ್ಲರೂ ಸಂಪೂರ್ಣವಾಗಿ ಪ್ರೋತ್ಸಾಹಿಸಬೇಕು. ನಮ್ಮ ನಗರದಲ್ಲಿ ಶುಚಿ ರುಚಿಯಾದ ಕಾಫಿ ತಿಂಡಿಗಳು ಸಿಗಲು ಬೆನ್ನೆಲುಬಾಗಿ ನಿಂತಿದೆ ನಂದಿನಿ ಹಾಲು. ಹೋಟೆಲು ಮಾಲೀಕರು ಪ್ರಮುಖವಾಗಿ ನಂದಿನಿ ಉತ್ಪನ್ನಗಳನ್ನು ಉಪಯೋಗಿಸುತ್ತಾರೆ ಹಾಗೂ ಬಹಳಷ್ಟು ಹೆಮ್ಮೆಯಿಂದ ಇದನ್ನು ಪ್ರೋತ್ಸಾಹಿಸುತ್ತೇವೆ.

    MORE
    GALLERIES

  • 57

    Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!

    ಬೇರೆ ರಾಜ್ಯದ ಹಾಲು ಇತ್ತೀಚೆಗೆ ಕರ್ನಾಟಕಕ್ಕೆ ಲಗ್ಗೆ ಇಡುತ್ತಿರುವುದು ಕೇಳಿ ಬರುತ್ತಿದೆ. ನಾವೆಲ್ಲರೂ ನಂದಿನಿ ಹಾಲನ್ನೇ ಉಪಯೋಗಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದೆ. ಈ ಮೂಲಕ ಎಲ್ಲಾ ಹೋಟೆಲ್​​ಗಳಲ್ಲಿ ನಂದಿನಿ ಹಾಲನ್ನೇ ಬಳಕೆ ಮಾಡಲು ಕರೆ ನೀಡಿದೆ.

    MORE
    GALLERIES

  • 67

    Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!

    ಕೆಎಂಎಫ್​ ಸಂಸ್ಥೆ ಲಾಭದಾಯಕ ಸಂಸ್ಥೆ ಆಗಿತ್ತು. ಇತ್ತೀಚೆಗೆ ಕೆಎಂಎಫ್​ ಉತ್ಪನ್ನಗಳ ಕೊರತೆ ಹೆಚ್ಚಾಗಿದೆ. ಹಾಲು, ಪೇಡ, ತುಪ್ಪ ಉತ್ಪಾದನೆ ಪ್ರಮಾಣ ಕುಸಿಯುತ್ತಿದೆ. ನಂದಿನಿ ಉತ್ಪನ್ನಗಳ ಜಾಗದಲ್ಲಿ ಅಮುಲ್​​ ಮಾರಾಟ ಆಗುತ್ತಿದೆ. ಕೆಎಂಎಫ್ ಹೆಸರಲ್ಲಿ ಅಮುಲ್​​​ ಉತ್ಪನ್ನ ಹೇರಿಕೆ​​​ ಆಗುತ್ತಿದೆ. ಕೆಲವೇ ದಿನಗಳಲ್ಲಿ ನಂದಿನಿ ಬ್ರ್ಯಾಂಡ್​​ಗಳನ್ನ ಅಮುಲ್​ಗೆ ಮಾರುವ ಹುನ್ನಾರ ಅಂತ ಕಾಂಗ್ರೆಸ್​ ನೇರ ಆರೋಪ ಮಾಡಿತ್ತು.

    MORE
    GALLERIES

  • 77

    Amul vs Nandini: ನಂದಿನಿ ಹಾಲನ್ನೇ ಬಳಸಿ; ಬೆಂಗಳೂರು ಹೋಟೆಲುಗಳ ಸಂಘದಿಂದ ಕರೆ!

    ಕೆಎಂಎಫ್​ ಸಂಸ್ಥೆ ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಸ್ಥಾಪಿಸಿದ ಸಂಸ್ಥೆ. ಆದರೆ ಈಗ ಅದೇ ಕೆಎಂಎಫ್​​ ರಾಜಕಾರಣಿಗಳಿಂದ, ರಾಜಕಾರಣಿಗಳಿಗಾಗಿ, ರಾಜಕೀಯಕೋಸ್ಕರ ಬಳಕೆ ಆಗುತ್ತಿರುವುದು ದುರಂತ. ಈ ಬಗ್ಗೆ ಅಭಿಯಾನವನ್ನೇ ನಡೆಸಿರುವ ಕನ್ನಡಿಗರು, ನಮ್ಮ ಅಭಿಯಾನ ಇಷ್ಟೇ ನಂದಿನಿ ಉಳಿಸಿ. ಕರ್ನಾಟಕ ಬೆಳೆಸಿ ಎಂದು ಕರೆ ನೀಡಿದ್ದಾರೆ.

    MORE
    GALLERIES