Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

ಬೆಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಬಿಜೆಪಿ ಪಾಲಿನ ಚಾಣಕ್ಯ ರಾಜ್ಯಕ್ಕೆ ಬಂದಿರೋದು ಕರ್ನಾಟಕ ಬಿಜೆಪಿಗೆ ಹೊಸ ಬೂಸ್ಟ್‌ ನೀಡಿದಂತಾಗಿದೆ. ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಇಂದು ಬೆಳಗ್ಗೆ ಉಪಹಾರ ಸೇವಿಸಲು ಮಾಜಿ ಸಿಎಂ, ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ ಅವರ ಮನೆಗೆ ಆಗಮಿಸಿದ್ದರು.

First published:

  • 18

    Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

    ವಿಶೇಷ ಅಂದ್ರೆ ಅಮಿತ್ ಶಾ ಅವರು ಮಾಜಿ ಸಿಎಂ ಬಿಸ್‌ ಯಡಿಯೂರಪ್ಪ ಅವರ ಮನೆಗೆ ಉಪಹಾರ ಸೇವಿಸಲು ಬಂದಾಗ ನೀಡಿದ ಒಂದು ಸೂಚನೆ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡ್ತಿದೆ. ವಿಶೇಷವಾಗಿ ರಾಜ್ಯ ಬಿಜೆಪಿಯಲ್ಲಿ ಅಮಿತ್ ಶಾ ಅವರ ಈ ನಡೆ ಕುತೂಹಲ ಮೂಡಿಸಿದೆ.

    MORE
    GALLERIES

  • 28

    Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

    ಅಮಿತ್ ಶಾ ಅವರು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಬಿಎಸ್‌ವೈ ನಿವಾಸದ ಮುಂದೆ ಕಾರ್‌ನಿಂದ ಇಳಿಯುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪ, ಅವರ ಪುತ್ರ ಬಿವೈ ವಿಜಯೇಂದ್ರ, ಸುದ್ದಿಗಾರರು ಸೇರಿದಂತೆ ಅನೇಕ ಕಾರ್ಯಕರ್ತರು ಜಮಾಯಿಸಿದ್ದರು.

    MORE
    GALLERIES

  • 38

    Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

    ಈ ವೇಳೆ ಯಡಿಯೂರಪ್ಪ ಅವರು ಅಮಿತ್ ಶಾ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲು ಮುಂದಾದರು. ಆಗ ಅಮಿತ್ ಶಾ, ಬಿಎಸ್‌ವೈಗೆ ‘ನಿಮ್ಮ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿ’ ಎಂದು ಕೈಸನ್ನೆ ಮಾಡಿದರು. ಅದೇನು ಎಂದು ಅರ್ಥವಾಗದ ಬಿಸ್‌ವೈಗೆ ಏನು ಮಾಡಬೇಕೆಂದು ತೋಚಲಿಲ್ಲ. ಪುನಃ ಅಮಿತ್ ಶಾ ಕೈಸನ್ನೆ ಮಾಡಿದಾಗ ಅರ್ಥ ಮಾಡಿಕೊಂಡ ಬಿಸ್‌ವೈ ಹೂಗುಚ್ಛವನ್ನು ವಿಜಯೇಂದ್ರಗೆ ನೀಡಿದರು.

    MORE
    GALLERIES

  • 48

    Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

    ಬಳಿಕ ವಿಜಯೇಂದ್ರ ಕೈಯಿಂದ ಹೂಗುಚ್ಛ ಸ್ವೀಕರಿಸಿದ ಅಮಿತ್ ಶಾ ಹೆಗಲಿಗೆ ಕೈ ಹಾಕಿ, ಬೆನ್ನು ತಟ್ಟಿ ಆಲಂಗಿಸಿ ನಗುಮೊಗದಿಂದ ಕ್ಯಾಮೆರಾಗೆ ಫೋಸ್‌ ನೀಡಿದರು. ಆಗ ನಗುತ್ತಾ ಸುಮ್ಮನಾದ ಬಿಎಸ್‌ ಯಡಿಯೂರಪ್ಪ, ಅಮಿತ್ ಶಾ ಅವರಿಗೆ ಹೊಸದೊಂದು ಹೂಗುಚ್ಛವನ್ನು ನೀಡಿದಾಗ ಶಾ ಅದನ್ನು ಸ್ವೀಕರಿಸಿದರು.

    MORE
    GALLERIES

  • 58

    Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

    ಸದ್ಯ ಅಮಿತ್ ಶಾ ಅವರು ಬಿವೈ ವಿಜಯೇಂದ್ರ ಜೊತೆ ಆತ್ಮೀಯವಾಗಿ ನಡೆದುಕೊಂಡಿರುವ ರೀತಿ ಬಿಎಸ್‌ವೈ ಪುತ್ರನಿಗೆ ಹೊಸ ಆತ್ಮವಿಶ್ವಾಸ ತುಂಬಿದ್ರೆ, ಅತ್ತ ಬಿಜೆಪಿಯ ಒಳಗಿರುವ ವಿಜಯೇಂದ್ರ ವಿರೋಧಿಗಳಿಗೆ ನಡುಕ ಶುರುವಾಗಿದೆ. ಬಿಎಸ್‌ವೈ ನಂತರ ಅವರ ಪುತ್ರ ವಿಜಯೇಂದ್ರ ಮುನ್ನೆಲೆಗೆ ಬರುತ್ತಾರೆ ಎಂಬುದನ್ನು ಅರಿತಿರುವ ವಿರೋಧಿಗಳು ಈಗಾಗಲೇ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ.

    MORE
    GALLERIES

  • 68

    Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

    ಆದರೆ ಕೇಂದ್ರ ಗೃಹ ಸಚಿವರೇ ವಿಜಯೇಂದ್ರ ಜೊತೆ ಆತ್ಮೀಯವಾಗಿ ನಡೆದುಕೊಂಡಿರೋದು ಸಂಕಷ್ಟ ತಂದೊಡ್ಡಿದೆ. ಇದರಿಂದ ವಿಜಯೇಂದ್ರ ಕೈ ಮೇಲಾಗಲಿದ್ದು, ತಮಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ವಿರೋಧಿ ಬಣದ ಮುಖಂಡರಲ್ಲಿ ಆತಂಕ ಸೃಷ್ಟಿಸಿದೆ.

    MORE
    GALLERIES

  • 78

    Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

    ಇನ್ನೊಂದೆಡೆ ವಿಜಯೇಂದ್ರ ಅವರನ್ನು ರಾಜ್ಯ ರಾಜಕೀಯದಲ್ಲಿ ಮುನ್ನೆಲೆಗೆ ತರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈಗಾಗಲೇ ತನಗೆ ನೀಡಿರುವ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ವಿಜಯೇಂದ್ರ ತಾನೊಬ್ಬ ಉತ್ತಮ ಸಂಘಟಕ ಅನ್ನೋದನ್ನು ನಿರೂಪಿಸಿದ್ದಾರೆ. ಹೀಗಾಗಿ ವಿಜಯೇಂದ್ರ ಅವರನ್ನು ಮುನ್ನೆಲೆಗೆ ತಂದರೆ ಪಕ್ಷ ಸಂಘಟನೆಗೂ ಬಲ ಸಿಗುವ ಸಾಧ್ಯತೆ ಇದೆ. ಹೀಗಾಗಿಯೇ ಅಮಿತ್ ಶಾ ವಿಜಯೇಂದ್ರಗೆ ಮನ್ನಣೆ ನೀಡಿದ್ದಾರೆ ಎನ್ನಲಾಗ್ತಿದೆ.

    MORE
    GALLERIES

  • 88

    Amit Shah: ಬಿಎಸ್‌ವೈ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ! ಕುತೂಹಲ ಮೂಡಿಸಿದ ನಡೆ!

    ಈ ಮಧ್ಯೆ ಅಮಿತ್ ಶಾ ತನ್ನೊಂದಿಗೆ ಆತ್ಮೀಯವಾಗಿ ವರ್ತಿಸಿರುವ ಬಗ್ಗೆ ಫುಲ್ ಖುಷಿ ಆಗಿರುವ ಬಿವೈ ವಿಜಯೇಂದ್ರ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ವೇಳೆ, ‘ಅಮಿತ್ ಶಾ ಅವರು ನಮ್ಮ ಮನೆಗೆ ಬಂದಿರೋದು ತುಂಬಾ ಸಂತಸ ತಂದಿದೆ. ಅಲ್ಲದೇ ಅವರು ನನ್ನ ಜೊತೆ ಮಾತನಾಡಿರೋದು ನನಗೆ ಆನೆ ಬಲ ಬಂದಂತಾಗಿದೆ ಎಂದು ನಗುಮೊಗದಿಂದ ಸಂತಸ ವ್ಯಕ್ತಪಡಿಸಿದ್ದಾರೆ.

    MORE
    GALLERIES