BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಅರೆಬರೆ ಕಾಮಗಾರಿ ಎರಡೂವರೆ ವರ್ಷದ ಕಂದಮ್ಮನನ್ನು ಬಲಿ ಪಡೆದುಕೊಂಡಿದೆ.
1/ 7
ಎರಡೂವರೆ ವರ್ಷದ ಕಾರ್ತಿಕ್ BWSSB ಕಾಮಗಾರಿಯ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಪೈಪ್ಲೈನ್ನಲ್ಲಿ ಘಟನೆ ನಡೆದಿದೆ.
2/ 7
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪೈಪ್ಲೈನ್ ಕಾಮಗಾರಿಗಾಗಿ ಹೊಂಡ ತೆಗೆದಿತ್ತು. ಆಟವಾಡುತ್ತಾ ಹೋದ ಮಗು ಹೊಂಡಕ್ಕೆ ಬಿದ್ದು ಸಾವನ್ನಪ್ಪಿದೆ.
3/ 7
ಮೃತ ಕಾರ್ತಿಕ್ ಉತ್ತರ ಪ್ರದೇಶ ಮೂಲದ ಹನುಮಾನ್ ದಂಪತಿಯ ಪುತ್ರ. ಹನುಮಾನ್ ದಂಪತಿ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದೆ.
4/ 7
ಬೆಳಗ್ಗೆ 10.30ಕ್ಕೆ ಪತ್ನಿ ಕರೆ ಮಾಡಿ ಮಗು ಗುಂಡಿಯಲ್ಲಿ ಬಿದ್ದಿದೆ ಅಂತ ಫೋನ್ ಮಾಡಿದರು. ಹೋಗಿ ಗುಂಡಿಯಿಂದ ಮಗು ಹೊರಗೆ ತಗೆದಾಗ ಸಾವನ್ನಪ್ಪಿತ್ತು ಎಂದು ಹನುಮಾನ್ ಹೇಳಿದ್ದಾರೆ.
5/ 7
ಘಟನೆ ಸಂಬಂಧ ಹನುಮಾನ್ ಅವರು BWSSB ಇಂಜಿನೀಯರ್ ಮತ್ತು ಕಾಮಗಾರಿ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಿದ್ದಾರೆ.
6/ 7
ಘಟನೆ ಸಂಬಂಧ BWSSB ಇಂಜಿನೀಯರ್ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
7/ 7
ಮೃತ ಮಗುವಿನ ಪೋಷಕರಿಗೆ ಗುತ್ತಿಗೆದಾರರು ಪರಿಹಾರ ನೀಡಲಿದ್ದಾರೆ ಎಂಬುದನ್ನು BWSSB ಖಚಿತಪಡಿಸಿದೆ.
First published: