IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?

Vyshak Vijay Kumar: ಡೆಲ್ಲಿ ವಿರುದ್ಧದ ಆರ್​ಸಿಬಿ ಗೆಲುವಿನಲ್ಲಿ ಐಪಿಎಲ್‌ನ ಮೊದಲ ಪಂದ್ಯ ಆಡುತ್ತಿರುವ ವೇಗದ ಬೌಲರ್ ವೈಶಾಕ್​ ವಿಜಯ್​ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.

First published:

  • 17

    IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?

    ಐಪಿಎಲ್ 2023 ರ 20ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್​ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಆರ್​ಸಿಬಿ ತಂಡ ತವರಿನಲ್ಲಿ ಮತ್ತೊಂದು ಗೆಲುವು ಸಾಧಿಸಿತು. ಜೊತೆಗೆ ಆರ್​ಸಿಬಿ ತಂಡ ಅಂಕಪಟ್ಟಿಯಲ್ಲಿ 2 ಗೆಲುವಿನೊಂದಿಗೆ 4 ಅಂಕ ಗಳಿಸಿ 7ನೇ ಸ್ಥಾನಕ್ಕೇರಿದೆ.

    MORE
    GALLERIES

  • 27

    IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?

    ಐಪಿಎಲ್‌ನ ಮೊದಲ ಪಂದ್ಯ ಆಡಿದ ವೇಗದ ಬೌಲರ್ ವೈಶಾಕ್ ​ ವಿಜಯ್​ಕುಮಾರ್ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಬೌಲರ್ ಈಗಾಗಲೇ ಮೊದಲ ಪಂದ್ಯದಲ್ಲೇ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದರು.

    MORE
    GALLERIES

  • 37

    IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?

    ಡೆಲ್ಲಿ ಪಂದ್ಯದ ಮೂಲಕ ವೈಶಾಕ್ ​ ವಿಜಯ್​ಕುಮಾರ್  RCBಗೆ ಪದಾರ್ಪಣೆ ಮಾಡಿದರು. ವಾಸ್ತವವಾಗಿ ವೈಶಾಕ್  ​ RCB ನೆಟ್ ಬೌಲರ್ ಆಗಿದ್ದರು. ಆದರೆ ಗಾಯದ ಸಮಸ್ಯೆಯಿಂದ ರಜತ್ ಪಾಟಿದಾರ್ ಟೂರ್ನಿಯಿಂದ ಹಿಂದೆ ಸರಿದ ಕಾರಣ ಅವರ ಸ್ಥಾನಕ್ಕೆ ವೈಶಾಕ್ ​ ಅವರನ್ನು ಆಯ್ಕೆ ಮಾಡಲಾಯಿತು.

    MORE
    GALLERIES

  • 47

    IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ 26 ವರ್ಷದ ವೈಶಾಕ್ ತಮ್ಮ ವಿಭಿನ್ನ ಬಾಲ್‌ನೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಅಕ್ಷರ್ ಪಟೇಲ್ ಅವರ ವಿಕೆಟ್‌ಗಳ ಜೊತೆಗೆ ಲಲಿತ್ ಯಾದವ್ ಅವರ ವಿಕೆಟ್ ಸಹ ಪಡೆದರು.

    MORE
    GALLERIES

  • 57

    IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?

    ನಾಲ್ಕು ಓವರ್ ಗಳ ಸ್ಪೆಲ್ ನಲ್ಲಿ ಕೇವಲ 20 ರನ್ ನೀಡಿದ ವೈಶಾಕ್ ಮೂರು ವಿಕೆಟ್ ಪಡೆದು ಮಿಂಚಿದರು. ಇದು ಆರ್‌ಸಿಬಿಗೆ ಚೊಚ್ಚಲ ಆಟಗಾರನ ಅತ್ಯುತ್ತಮ ಅಂಕಿಅಂಶಗಳಲ್ಲಿ ಒಂದು ಎಂಬುದು ಗಮನಾರ್ಹ.

    MORE
    GALLERIES

  • 67

    IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?

    ಈ ಪಂದ್ಯಕ್ಕೂ ಮುನ್ನ ಟಿ20 ಮಾದರಿಯಲ್ಲಿ 14 ಪಂದ್ಯಗಳನ್ನು ಆಡಿರುವ ವೈಶಾಕ್  23 ವಿಕೆಟ್ ಕಬಳಿಸಿದ್ದರು. ಎಕಾನಮಿ 6.92 ಆಗಿರುವುದು ಗಮನಾರ್ಹ. ಹಿಂದಿನ ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ್ದರೂ ಕಳಪೆ ಬೌಲಿಂಗ್ ನಿಂದಾಗಿ ಆರ್ ಸಿಬಿ ಸೋಲನುಭವಿಸಿತ್ತು. ಆದರೆ, ವೈಶಾಕ್  ಸೇರ್ಪಡೆಯಿಂದ ಆರ್‌ಸಿಬಿ ಬೌಲಿಂಗ್ ಕೊಂಚ ಬಲಿಷ್ಠವಾಗಿದೆ ಎಂದೇ ಹೇಳಬೇಕು.

    MORE
    GALLERIES

  • 77

    IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?

    ಸತತ 2 ಸೋಲಿನ ಬಳಿಕ ಗೆದ್ದಿರುವ ಆರ್​ಸಿಬಿ ತಂಡ ಒಂದು ದಿನ ಅಂತರದಲ್ಲಿ ಚೆನ್ನೈ ವಿರುದ್ಧ ಸೆಣಸಾಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಏಪ್ರಿಲ್​ 17ರಂದು ಮುಖಾಮುಖಿ ಆಗಲಿದೆ.

    MORE
    GALLERIES