KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

KKR vs RCB: ಇಂದು ಆರ್‌ಸಿಬಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಹ್ಯಾಝಲ್​ವುಡ್​ ತಂಡದಿಂದ ಹೊರಗುಳಿಯಬಹುದು. ಇವರ ಸ್ಥಾನಕ್ಕೆ ಕನ್ನಡಿಗ ಆಯ್ಕೆ ಆಗಬಹುದು.

First published:

  • 18

    KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

    ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 16ರಲ್ಲಿ ಇಂದು ಆರ್​ಸಿಬಿ ಎದುರು ಕೋಲ್ಕತ್ತಾ ತಂಡ ಸೆಣಸಾಡಲಿದೆ. ಈ ಪಂದ್ಯ ವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

    MORE
    GALLERIES

  • 28

    KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

    ಕೋಲ್ಕತ್ತಾ​ ಪಂದ್ಯಕ್ಕಾಗಿ ಆರ್​ಸಿಬಿ ತಂಡಕ್ಕೆ ಜೋಶ್ ಹ್ಯಾಝಲ್​ವುಡ್ ಫಿಟ್​ ಆಗಿದ್ದು, ಇಂದು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಪಂದ್ಯಕ್ಕೂ ಮುನ್ನ ಇದೀಗ ಹೊಸ ವರದಿ ಹೊರಬಿದಿದ್ದು, ಅವರು ಇಂದೂ ಸಹ ಕಣಕ್ಕಿಳಿಯುತ್ತಿಲ್ಲ ಎನ್ನಲಾಗಿದೆ.

    MORE
    GALLERIES

  • 38

    KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

    ಜೋಶ್ ಹ್ಯಾಝಲ್​ವುಡ್ ಕೆಕೆಆರ್​ ಪಂದ್ಯದಲ್ಲಿ ಆಡಲು ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಮತ್ತೊಮ್ಮೆ ಇಂದು ಹ್ಯಾಝಲ್​ವುಡ್ ಬದಲಿಗೆ ಡೇವಿಡ್ ವಿಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ.

    MORE
    GALLERIES

  • 48

    KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

    ಜೋಶ್ ಹೇಜಲ್‌ವುಡ್ ಕಳೆದ 4-5 ತಿಂಗಳಿನಿಂದ ಕ್ರಿಕೆಟ್‌ನಿಂಮದ ದೂರವಿದ್ದಾರೆ. ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು, ಈವರೆಗೂ ಸರಿಯಾಗಿ ಫಿಟ್​ ಆಗಿಲ್ಲ ಎಂದು ತಿಳಿದುಬಂದಿದೆ. ಆದರೆ ಇದೀಗ ಮತ್ತೊಂದು ಹೊಸ ಮಾಹಿತಿ ಸಹ ಹರಿದಾಡುತ್ತಿದೆ.

    MORE
    GALLERIES

  • 58

    KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

    ಹೌದು, ಹೇಜಲ್‌ವುಡ್ ಬದಲಿಗೆ ಡೇವಿಡ್ ವಿಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಇದರ ನಡುವೆ ದಿನೇಶ್​ ಕಾರ್ತಿಕ್ ಮತ್ತು ಶಹಬಾಜ್​ ಅಹ್ಮದ್, ಮಹಿಪಾಲ್ ಲೋಮ್ರರ್​ ಸಹ ಕಳೆದ ಕೆಲ ಪಂದ್ಯಗಳಿಂದ ಉತ್ತಮವಾಗಿ ಬ್ಯಾಟಿಂಗ್​ ಮಾಡುತ್ತಿಲ್ಲ. ಅವರಲ್ಲಿ ಒಬ್ಬರನ್ನು ಇಂದು ತಂಡದಿಂದ ಕೈಬಿಡುವ ಸಾಧ್ಯತೆ ಇದೆ.

    MORE
    GALLERIES

  • 68

    KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

    ಹೀಗಾಗಿ ಇವರ ಬದಲಿಗೆ ಇದೀಗ ಮತ್ತೋರ್ವ ಕನ್ನಡಿಗನಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಹೌದು, ಕರ್ನಾಟಕದ ಮನೋಜ್ ಬಾಂಡಗೆ ಅವರನ್ನು ತಂಡ ಖರೀದಿಸಿದ್ದು, ಇವರು ಕರ್ನಾಟಕದ ರಾಯಚೂರು ಜಿಲ್ಲೆಯವರಾಗಿದ್ದಾರೆ. ಅವರನ್ನು ಬೆಂಗಳೂರು ತಂಡ 20 ಲಕ್ಷ ರೂ.ಗೆ ಖರೀದಿಸಿತ್ತು.

    MORE
    GALLERIES

  • 78

    KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

    ರಾಯಚೂರು ಜಿಲ್ಲೆ ಸಿಂಧನೂರಿನ ಮನೋಜ್ ಬಾಂಡಗೆ ಅವರು ಆಲ್ ರೌಂಡರ್ ಆಗಿದ್ದಾರೆ. ಅವರು, ಎಡಗೈ ಬ್ಯಾಟ್ಸ್​ಮನ್ ಹಾಗೂ ಬಲಗೈ ಫಾಸ್ಟ್​ ಬೌಲರ್ ಆಗಿದ್ದಾರೆ. 2019ರ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಮೂಲಕ ಕರ್ನಾಟಕ ತಂಡಕ್ಕೆ ಮನೋಜ್​ ಪದಾರ್ಪಣೆ ಮಾಡಿದ್ದರು.

    MORE
    GALLERIES

  • 88

    KKR vs RCB: ಇಂದಿನ ಪಂದ್ಯದಿಂದ ಸ್ಟಾರ್​ ಬೌಲರ್​ ಔಟ್​? ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್ ಫಿಕ್ಸ್?

    24 ವರ್ಷದ ಮನೋಜ್ ಬಾಂಡಗೆ ಅವರು ಒಟ್ಟು 16 ಟಿ20 ಪಂದ್ಯಗಳ ಮೂಲಕ 7 ಇನಿಂಗ್ಸ್​ನಲ್ಲಿ 116 ರನ್​ ಕಲೆಹಾಕಿದ್ದಾರೆ. ಜೊತೆಗೆ 8 ವಿಕೆಟ್​ಗಳನ್ನು ಪಡೆದಿದ್ದಾರೆ.

    MORE
    GALLERIES