Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

IPL 2023 Final: ಮುಂದಿನ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಈ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜತೆಗೆ ಬೌಲಿಂಗ್ ವಿಭಾಗವನ್ನು ತಂಡ ಬಲಿಷ್ಠಗೊಳಿಸಬೇಕಿದೆ.

First published:

  • 18

    Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

    ಐಪಿಎಲ್‌ನಲ್ಲಿ ಎಲ್ಲಾ ತಂಡಗಳು ಒಂದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮಾತ್ರ ವಿಭಿನ್ನವಾಗಿ ನಿಲ್ಲುತ್ತದೆ. ತಂಡದಲ್ಲಿ ಪ್ರತಿಭಾವಂತ ಆಟಗಾರರ ಕೊರತೆ ಇಲ್ಲ. ಕೊಹ್ಲಿ, ಗೇಲ್ ಮತ್ತು ಎಬಿಡಿ ತಂಡದಲ್ಲಿದ್ದರೂ ಆರ್‌ಸಿಬಿ ಟ್ರೋಫಿಗೆ ಮುತ್ತಿಕ್ಕಲಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.

    MORE
    GALLERIES

  • 28

    Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

    ಬೆಂಗಳೂರು ಅಭಿಮಾನಿಗಳು ಪ್ರತಿ ಬಾರಿಯೂ ಕಪ್ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿರುತ್ತಾರೆ. ಇದುವರೆಗೆ ಮೂರು ಬಾರಿ ಫೈನಲ್ ತಲುಪಿರುವ ಆರ್ ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. 2009, 2011 ಮತ್ತು 2016ರಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದ ಬೆಂಗಳೂರು ಫೈನಲ್‌ನಲ್ಲಿ ಎಡವಿತ್ತು. ಅದಕ್ಕಾಗಿಯೇ ಕೆಲವರು ಈ ತಂಡವನ್ನು ಐಪಿಎಲ್‌ನ ದಕ್ಷಿಣ ಆಫ್ರಿಕಾ ತಂಡ ಎಂದು ಬಣ್ಣಿಸುತ್ತಾರೆ.

    MORE
    GALLERIES

  • 38

    Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

    ಈ ಋತುವಿನಲ್ಲಿ ಇದಕ್ಕೆ ಹೊರತಾಗಿಲ್ಲ. ಐಪಿಎಲ್ 2023ರ ಋತುವಿನಲ್ಲಿ 14 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೋತು ಆರನೇ ಸ್ಥಾನಕ್ಕೆ ಕುಸಿಯಿತು. ಕೊನೆಯ ಪಂದ್ಯದಲ್ಲಿ ಗೆದ್ದಿದ್ದರೆ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಕ್ಕೆ ತಳ್ಳಿ ಅಗ್ರ 4ರಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಿತ್ತು.

    MORE
    GALLERIES

  • 48

    Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

    ಐಪಿಎಲ್ 2023 ರ ಋತುವಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸುಲಭವಾಗಿ ಗೆಲ್ಲಬೇಕಾದ ಪಂದ್ಯಗಳಲ್ಲಿಯೂ ಸೋತಿತು. ಐಪಿಎಲ್ 2023ರ ಋತುವಿನಲ್ಲಿ ಕೇವಲ ನಾಲ್ವರು ಆಟಗಾರರು ಆರ್‌ಸಿಬಿ ಪರ ಆಡಿದ್ದಾರೆ. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ. ಇತ್ತ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್.

    MORE
    GALLERIES

  • 58

    Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

    ಉಳಿದ ಆರ್‌ಸಿಬಿ ಆಟಗಾರರು ಇದ್ದರೂ ಇಲ್ಲದಿದ್ದರೂ ಒಂದೇ ಎಂಬಂತಾಗಿದೆ. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯಗಳಲ್ಲಿ ಆರ್‌ಸಿಬಿ ಸೋತಿತ್ತು. ಅದರಲ್ಲೂ ಕಳೆದ ಸೀಸನ್ ನಲ್ಲಿ ಫಿನಿಶರ್ ಪಾತ್ರ ಮಾಡಿದ್ದ ದಿನೇಶ್ ಕಾರ್ತಿಕ್ ಹೀನಾಯವಾಗಿ ವಿಫಲರಾಗಿದ್ದರು. ಅವರು 13 ಪಂದ್ಯಗಳಲ್ಲಿ ಒಂದೇ ಒಂದು ಗಮನಾರ್ಹ ಇನ್ನಿಂಗ್ಸ್‌ಗಳನ್ನು ಆಡಲಿಲ್ಲ. ಅವರು 11.67 ಸರಾಸರಿಯಲ್ಲಿ ಕೇವಲ 140 ರನ್ ಗಳಿಸಿದರು. ಅವರು ಮೂರು ಇನ್ನಿಂಗ್ಸ್‌ಗಳಲ್ಲಿ ಡಕ್ ಆದರು.

    MORE
    GALLERIES

  • 68

    Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

    ಆರ್‌ಸಿಬಿಯ ಯುವ ಆಟಗಾರರಲ್ಲಿ ಅನುಜ್ ರಾವತ್ ಹೊರತುಪಡಿಸಿ ಬೇರೆ ಯಾರೂ ಉತ್ತಮ ಪ್ರದರ್ಶನ ನೀಡಿಲ್ಲ. ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ ಮತ್ತು ಮಹಿಪಾಲ್ ಲೊಮ್ರೋರ್ ಸಂಪೂರ್ಣ ವಿಫಲರಾದರು. ವನಿಂದು ಹಸರಂಗ ಕೂಡ ತಂಡಕ್ಕೆ ಹೊರೆಯಾದರು. ರಜತ್ ಪಾಟಿದಾರ್, ರೀಸ್ ಟೋಪ್ಲಿ ಮತ್ತು ಡೇವಿಡ್ ವಿಲ್ಲಿ ಅವರಂತಹ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ಆರ್‌ಸಿಬಿಗೆ ಹಿನ್ನಡೆಯಾಯಿತು.

    MORE
    GALLERIES

  • 78

    Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಮುಖ ಆಟಗಾರರನ್ನು ಹೊರತುಪಡಿಸಿ ತಂಡದ ಉಳಿದ ಆಟಗಾರರನ್ನು ಬದಲಾಯಿಸಲು ಸಜ್ಜಾಗಿದೆ. ಈ ಋತುವಿನ ವೈಫಲ್ಯದ ಹಿನ್ನೆಲೆಯಲ್ಲಿ, RCB ಮುಂದಿನ ವರ್ಷ ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.

    MORE
    GALLERIES

  • 88

    Royal Challengers Bengaluru: ಸೋಲಿನ ಬಳಿಕ ಆರ್​ಸಿಬಿಯಲ್ಲಿ ಮೇಜರ್​ ಸರ್ಜರಿ, ಮೂವರು ಆಟಗಾರರಿಗೆ ಗೇಟ್​ಪಾಸ್ ಫಿಕ್ಸ್​?

    ದಿನೇಶ್ ಕಾರ್ತಿಕ್, ಶೆಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಆಕಾಶ್ ದೀಪ್ ಅವರಂತಹ ಆಟಗಾರರನ್ನು ಆರ್​ಸಿಬಿ ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಆದರೆ, ಮುಂದಿನ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಈ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜತೆಗೆ ಬೌಲಿಂಗ್ ವಿಭಾಗವನ್ನು ತಂಡ ಬಲಿಷ್ಠಗೊಳಿಸಬೇಕಿದೆ. ಫಾಫ್ ಡುಪ್ಲೆಸಿಸ್, ಮ್ಯಾಕ್ಸಿ, ಕೊಹ್ಲಿ ಮತ್ತು ಸಿರಾಜ್ ಹೊರತುಪಡಿಸಿ ಉಳಿದ ಆಟಗಾರರು ಹರಾಜಿನಲ್ಲಿ ಉಳಿಯುವ ಸಾಧ್ಯತೆಯಿದೆ.

    MORE
    GALLERIES