Arjun Tendulkar: ಅರ್ಜುನ್​ ತೆಂಡೂಲ್ಕರ್​ಗೆ ಕಚ್ಚಿದ ನಾಯಿ! ಏನಾಯ್ತು ಸಚಿನ್​ ಪುತ್ರನಿಗೆ ಪಾಪ?

Arjun Tendulkar: ಲಕ್ನೋ ಯುವ ಆಟಗಾರ ಜೊತೆ ಮೈದಾನದಲ್ಲಿಅಭ್ಯಾದ ವೇಳೆ ಮಾತನಾಡಿದ ಅರ್ಜುನ್ ತೆಂಡೂಲ್ಕರ್, ತನಗೆ ನಾಯಿ ಕಚ್ಚಿದೆ ಎಂಬ ವಿಷಯವನ್ನು ತಿಳಿಸಿದ್ದಾರೆ.

First published:

  • 17

    Arjun Tendulkar: ಅರ್ಜುನ್​ ತೆಂಡೂಲ್ಕರ್​ಗೆ ಕಚ್ಚಿದ ನಾಯಿ! ಏನಾಯ್ತು ಸಚಿನ್​ ಪುತ್ರನಿಗೆ ಪಾಪ?

    ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕಳೆದ ಕೆಲವು ಸೀಸನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡಿರುವ ಅರ್ಜುನ್​ ಒಟ್ಟು ನಾಲ್ಕು ಪಂದ್ಯಗಳನ್ನಾಡಿದ್ದಾರೆ.

    MORE
    GALLERIES

  • 27

    Arjun Tendulkar: ಅರ್ಜುನ್​ ತೆಂಡೂಲ್ಕರ್​ಗೆ ಕಚ್ಚಿದ ನಾಯಿ! ಏನಾಯ್ತು ಸಚಿನ್​ ಪುತ್ರನಿಗೆ ಪಾಪ?

    ಈ 4 ಪಂದ್ಯಗಳ ಮೂಲಕ ಅರ್ಜುನ್ ತೆಂಡೂಲ್ಕರ್ ಒಟ್ಟು ಮೂರು ವಿಕೆಟ್ ಪಡೆದಿದ್ದಾರೆ. ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಬೌಲ್ ಮಾಡಿ ಮುಂಬೈ ಗೆಲುವಿನಲ್ಲಿ ತಮ್ಮ ಪಾತ್ರವನ್ನು ವಹಿಸಿದ್ದರು.

    MORE
    GALLERIES

  • 37

    Arjun Tendulkar: ಅರ್ಜುನ್​ ತೆಂಡೂಲ್ಕರ್​ಗೆ ಕಚ್ಚಿದ ನಾಯಿ! ಏನಾಯ್ತು ಸಚಿನ್​ ಪುತ್ರನಿಗೆ ಪಾಪ?

    ಆದರೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ನಂತರ ಅರ್ಜುನ್ ತೆಂಡೂಲ್ಕರ್ ಅಂತಿಮ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ಕಳೆದ ಕೆಲ ಪಂದ್ಯಗಳಿಂದ ದೂರ ಉಳಿದಿದ್ದಾರೆ.

    MORE
    GALLERIES

  • 47

    Arjun Tendulkar: ಅರ್ಜುನ್​ ತೆಂಡೂಲ್ಕರ್​ಗೆ ಕಚ್ಚಿದ ನಾಯಿ! ಏನಾಯ್ತು ಸಚಿನ್​ ಪುತ್ರನಿಗೆ ಪಾಪ?

    ಪ್ಲೇ-ಆಫ್ ರೇಸ್‌ನಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಮಹತ್ವದ ಪಂದ್ಯವನ್ನು ಆಡಲಿದೆ. ಈ ಸಂದರ್ಭದಲ್ಲಿ ಅರ್ಜುನ್ ತೆಂಡೂಲ್ಕರ್ ಒಂದು ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 57

    Arjun Tendulkar: ಅರ್ಜುನ್​ ತೆಂಡೂಲ್ಕರ್​ಗೆ ಕಚ್ಚಿದ ನಾಯಿ! ಏನಾಯ್ತು ಸಚಿನ್​ ಪುತ್ರನಿಗೆ ಪಾಪ?

    ಲಕ್ನೋ ಸೂಪರ್‌ಜೈಂಟ್ಸ್ ಯುವ ಆಟಗಾರರಾದ ಯುದ್ವೀರ್ ಸಿಂಗ್ ಜೊತೆ ಮಾತನಾಡುವಾಗ ತಮ್ಮ ಎಡಗೈ ಬೆರಳಿಗೆ ನಾಯಿ ಕಚ್ಚಿದೆ ಎಂದು ಹೇಳಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

    MORE
    GALLERIES

  • 67

    Arjun Tendulkar: ಅರ್ಜುನ್​ ತೆಂಡೂಲ್ಕರ್​ಗೆ ಕಚ್ಚಿದ ನಾಯಿ! ಏನಾಯ್ತು ಸಚಿನ್​ ಪುತ್ರನಿಗೆ ಪಾಪ?

    ಲಕ್ನೋ ಯುವ ಆಟಗಾರ ಜೊತೆ ಮೈದಾನದಲ್ಲಿಅಭ್ಯಾದ ವೇಳೆ ಮಾತನಾಡಿದ ಅರ್ಜುನ್ ತೆಂಡೂಲ್ಕರ್, ತನಗೆ ನಾಯಿ ಕಚ್ಚಿದೆ ಎಂಬ ವಿಷಯವನ್ನು ತಿಳಿಸಿದ್ದಾರೆ. ಇದಕ್ಕೆ ಲಕ್ನೋ ಆಟಗಾರ ನಾಯಿಯೇ? ಎಂದು ಅಚ್ಚರಿಯಿಂದ ಕೇಳಿದ ವಿಡಿಯೋ ಸದ್ಯ ಸಖತ್​ ವೈರಲ್​ ಆಗುತ್ತಿದೆ.

    MORE
    GALLERIES

  • 77

    Arjun Tendulkar: ಅರ್ಜುನ್​ ತೆಂಡೂಲ್ಕರ್​ಗೆ ಕಚ್ಚಿದ ನಾಯಿ! ಏನಾಯ್ತು ಸಚಿನ್​ ಪುತ್ರನಿಗೆ ಪಾಪ?

    ಇನ್ನು, ಈ ಋತುವಿನಲ್ಲಿ ಅತ್ಯಂತ ದುಬಾರಿ ಬೌಲಿಂಗ್ ಮಾಡಿದ ಅರ್ಜುನ್, ಗುಜರಾತ್ ಟೈಟಾನ್ಸ್ ಯಶ್ ದಯಾಲ್ ಅವರನ್ನು ಸರಿಗಟ್ಟಿದ್ದಾರೆ. ಅಂತಿಮ ಓವರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 31 ರನ್‌ಗಳ ಅಗತ್ಯವಿದ್ದಾಗ ಎಡಗೈ ಆಟಗಾರ ದಯಾಲ್​ ಅವರು ರಿಂಕು ಸಿಂಗ್‌ಗೆ ಸತತ ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅರ್ಜುನ್​ ಸಹ ಇದೀಗ 31 ರನ್​ ನೀಡಿ ದುಬಾರಿಯಾಗಿದ್ದರು.

    MORE
    GALLERIES