Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

Gautam Gambhir: ಭಾರತೀಯ ಕ್ರಿಕೆಟ್‌ನಲ್ಲಿ ಆಟಗಾರರನ್ನು ಹೀರೋ ಮಾಡುವ ಸಂಸ್ಕೃತಿಯ ಬಗ್ಗೆ ಗೌತಮ್ ಗಂಭೀರ್ ತಮ್ಮ ಅಸಮಾಧನಾವನ್ನು ಹೊರಹಾಕಿದ್ದಾರೆ. ಭಾರತೀಯ ಕ್ರಿಕೆಟ್ ದೊಡ್ಡದಾಗಿರಬೇಕು, ವ್ಯಕ್ತಿಗಳಲ್ಲ ಎಂದಿದ್ದಾರೆ.

First published:

  • 18

    Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

    ಗೌತಮ್ ಗಂಭೀರ್ ಕಳೆದ ಕೆಲ ದಿನಗಳಿಂದ ತಮ್ಮ ನೇರ ಮಾತುಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಈ ಬಾರಿ ಭಾರತೀಯ ಕ್ರಿಕೆಟಿಗರನ್ನು ಹೀರೋ ರೀತಿ ಆರಾಧಿಸುವುದನ್ನು ಜನರು ಬಿಡಬೇಕು ಎಂದು ಗಂಭೀರ್ ಹೇಳಿದ್ದು, ಅದರಲ್ಲಿಯೂ ಕೊಹ್ಲಿ ಮತ್ತು ವಿರಾಟ್​ ಬಗ್ಗೆ ಮಾತನಾಡಿರುವುದು ವೈರಲ್ ಆಗಿದೆ.

    MORE
    GALLERIES

  • 28

    Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

    ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಯಂತಹ ದೊಡ್ಡ ಸ್ಟಾರ್ ಆಟಗಾರರನ್ನು ಹೊರತುಪಡಿಸಿ ನಾವು ಕ್ರಿಕೆಟ್ ಮತ್ತು ತಂಡದ ಬಗ್ಗೆ ಮಾತನಾಡಬೇಕು ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಒಬ್ಬ ಆಟಗಾರನ ಮೇಲೆ ಕೇಂದ್ರೀಕರಿಸಬಾರದು ಎಂದಿದ್ದಾರೆ.

    MORE
    GALLERIES

  • 38

    Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

    ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ಟಾರ್ ಅಥವಾ ಹೀರೋ ಎಂದು ಸೃಷ್ಟಿಸಬೇಡಿ. ಭಾರತೀಯ ಕ್ರಿಕೆಟ್ ನಿಜವಾದ ಹೀರೋ ಆಗಿರಬೇಕು, ವ್ಯಕ್ತಿಯಲ್ಲ. ಒಬ್ಬ ಆಟಗಾರನನ್ನು ದೊಡ್ಡವರನ್ನಾಗಿ ಮಾಡುವ ಬದಲು ಇಡೀ ತಂಡವನ್ನು ದೊಡ್ಡದಾಗಿಸುವತ್ತ ಗಮನಹರಿಸಿ ಎಂದು ಹೇಳಿದ್ದಾರೆ.

    MORE
    GALLERIES

  • 48

    Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

    ಅದರಲ್ಲಿಯೂ ಗಂಭಿರ್​ ಧೋನಿ ಮತ್ತು ಕೊಹ್ಲಿ ಅವರನ್ನು ನೇರವಾಗಿ ಉದಾಹರಣೆಯನ್ನಾಗಿ ಹೇಳಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿ ಶತಕ ಗಳಿಸಿದಾಗ, ಇಡೀ ದೇಶವು ಸಂಭ್ರಮಿಸಿತು. ಭಾರತ ವೀರ ಸಂಸ್ಕೃತಿಯಿಂದ ಹೊರಬರಬೇಕು. ಅದು ಕ್ರಿಕೆಟ್ ಇರಲಿ, ರಾಜಕೀಯ ಇರಲಿ. ನಾವು ಕೇವಲ ಭಾರತೀಯ ಕ್ರಿಕೆಟ್ ಅನ್ನು ಆರಾಧಿಸಬೇಕಾಗಿದೆ.

    MORE
    GALLERIES

  • 58

    Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

    ಅದೇ ರೀತಿ ಕೊಹ್ಲಿ ಮಾತ್ರವಲ್ಲ ಧೋನಿ ಅವರ ಬಗ್ಗೆಯೂ ಇದೇ ರೀತಿ ಹೇಳಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಹೀರೋ ಸಂಸ್ಕೃತಿ ಎರಡು ಕಾರಣಗಳಿಗಾಗಿ ವಿಜೃಂಭಿಸಿತು. ಸಾಮಾಜಿಕ ಮಾಧ್ಯಮ ಅನುಯಾಯಿಗಳು, ಇದು ಬಹುಶಃ ಈ ದೇಶದಲ್ಲಿ ಅತ್ಯಂತ ನಕಲಿ ವಿಷಯವಾಗಿದೆ ಇದರ ಮೂಲಕ ಒಬ್ಬರನ್ನು ಹೀರೋ ಮಾಡುವುದು ತಪ್ಪು ಎಂದಿದ್ದಾರೆ.

    MORE
    GALLERIES

  • 68

    Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

    ಇದೇ ಸಮಸಯದಲ್ಲಿ ವಿರಾಟ್ ಕೊಹ್ಲಿ 71ನೇ ಶತಕ ಗಳಿಸಿದ ದಿನ, ಅದೇ ಪಂದ್ಯದಲ್ಲಿ, ಬೌಲರ್ ಭುವನೇಶ್ವರ್ ಕುಮಾರ್ 5 ವಿಕೆಟ್ ಪಡೆದರು. ಆದರೆ ಅವರ ಬಗ್ಗೆ ಯಾರೂ ಮಾತನಾಡಲಿಲ್ಲ. ಇದು ನಿಜಕ್ಕೂ ದುರದೃಷ್ಟಕರ. ಕಾಮೆಂಟರಿ ಸಮಯದಲ್ಲಿ ಭುವನೇಶ್ವರ್ ಬಗ್ಗೆ ನಿರಂತರವಾಗಿ ಚರ್ಚಿಸಿದ ಏಕೈಕ ವ್ಯಕ್ತಿ ನಾನು ಎಂದಿದ್ದಾರೆ.

    MORE
    GALLERIES

  • 78

    Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

    ಭಾರತೀಯ ಕ್ರಿಕೆಟ್‌ನಲ್ಲಿ ಆಟಗಾರರನ್ನು ಹೀರೋ ಮಾಡುವ ಸಂಸ್ಕೃತಿ ಬಿಡಬೇಕು. ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿಯಂತಹ ದೊಡ್ಡ ಸ್ಟಾರ್ ಆಟಗಾರರನ್ನು ಹೊರತುಪಡಿಸಿ, ನಾವು ಭಾರತೀಯ ಕ್ರಿಕೆಟ್ ಬಗ್ಗೆ ಮಾತನಾಡಬೇಕು. ಭಾರತೀಯ ಕ್ರಿಕೆಟ್ ದೊಡ್ಡದಾಗಿರಬೇಕು, ವ್ಯಕ್ತಿಗಳಲ್ಲ ಎಂದಿದ್ದಾರೆ.

    MORE
    GALLERIES

  • 88

    Gautam Gambhir: ಕೊಹ್ಲಿ-ಧೋನಿ ಪೂಜೆ ಮಾಡುವುದನ್ನು ನಿಲ್ಲಿಸಿ, ಶಾಕಿಂಗ್​ ಹೇಳಿಕೆ ನೀಡಿದ ಗಂಭೀರ್

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯು ನಾಳೆಯಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯವು ಮೊಹಾಲಿಯಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

    MORE
    GALLERIES