2019 ವಿಶ್ವಕಪ್ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಲೀಗ್ ಹಂತದಲ್ಲಿ ಒಂದೂ ಸೋಲನ್ನು ಕಾಣದೆ ಗೆದ್ದು ಬೀಗುತ್ತಿದ್ದ ಕೊಹ್ಲಿ ಪಡೆ, ಸೆಮಿ ಫೈನಲ್ನಲ್ಲಿ ಮಾತ್ರ ನ್ಯೂಜಿಲೆಂಡ್ ವಿರುದ್ಧ ಸೋತು ವಿಶ್ವಕಪ್ ಪ್ರಯಾಣ ಅಂತ್ಯಗೊಳಿಸಿತ್ತು.
2/ 9
ಸದ್ಯ ಈ ವಿಚಾರವಾಗಿ ಟೀಂ ಇಂಡಿಯಾ ಮಾಜಿ ಆಟಗಾರ, 2011 ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮಾತನಾಡಿದ್ದಾರೆ.
3/ 9
ನನಗನಿಸಿರುವ ಪ್ರಕಾರ ಭಾರತ ತಂಡ 2019 ವಿಶ್ವಕಪ್ಗಾಗಿ ಪೂರ್ವತಯಾರಿ ಏನೂ ನಡೆಸಿಲ್ಲ. ಪ್ರಮುಖವಾಗಿ ಬಿಸಿಸಿಐ ಆಯ್ಕೆ ಸಮಿತಿ ಕೆಲವು ತಪ್ಪು ನಿರ್ಧಾರಗಳನ್ನು ಕೈಗೆತ್ತಿಕೊಂಡಿತು ಎಂದು ಯುವಿ ಹೇಳಿದ್ದಾರೆ.
4/ 9
ಬಿಸಿಸಿಐಯ ಕೆಲವು ಕೆಟ್ಟ ನಿರ್ಧಾರಗಳು ಭಾರತ ವಿಶ್ವಕಪ್ನಲ್ಲಿ ಸೋಲಲು ಪ್ರಮುಖ ಕಾರಣ ಎಂದು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
5/ 9
ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿದಾಗಿನಿಂದ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.
6/ 9
ನಾನು ಯೋ ಯೋ ಟೆಸ್ಟ್ ಪಾಸಾದರೂ ನನಗೆ ಅಂತರಾಷ್ಟ್ರೀಯ ಪಂದ್ಯವನ್ನು ಆಡಲು ಅವಕಾಶ ನೀಡಲಿಲ್ಲ. ಯಾರೊಬ್ಬರು ನನ್ನಲ್ಲಿ ಸರಿಯಾಗಿ ಸಂವಹನ ಮಾಡಲಿಲ್ಲ ಎಂದು ಈ ಹಿಂದೆ ಯುವಿ ಹೇಳಿದ್ದರು.
7/ 9
ಸದ್ಯ ಮತ್ತೆ ಬಿಸಿಸಿಐ ವಿರುದ್ಧ ಮಾತನಾಡಿರುವ ಯುವಿ, ಭಾರತದಲ್ಲಿ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ಆದರೆ, ಅವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಈರೀತಿ ಆಗುತ್ತಿರುವುದು ವಿಷಾದನೀಯ ಎಂದಿದ್ದಾರೆ.
8/ 9
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಸಾಕಷ್ಟು ಬೆಳವಣಿಗೆ ಆಗಿದೆ. ಇವರ ಅವಧಿಯಲ್ಲಿ ಟೀಂ ಇಂಡಿಯಾ ಸಾಧನೆ ಮತ್ತಷ್ಟು ಎತ್ತರಕ್ಕೆ ಏರಲಿದೆ ಎಂಬ ವಿಶ್ವಾಸ ನನಗಿದೆ- ಯುವರಾಜ್.
9/ 9
ಸದ್ಯ ಯುವರಾಜ್ ಸಿಂಗ್ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಪರಿಹಾರಾರ್ಥ ಪಂದ್ಯದಲ್ಲಿ ಬ್ಯಾಟ್ ಬೀಸಲು ತಯಾರಾಗಿದ್ದಾರೆ.
First published:
19
Yuvraj Singh: 2019 ವಿಶ್ವಕಪ್ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!
2019 ವಿಶ್ವಕಪ್ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ಲೀಗ್ ಹಂತದಲ್ಲಿ ಒಂದೂ ಸೋಲನ್ನು ಕಾಣದೆ ಗೆದ್ದು ಬೀಗುತ್ತಿದ್ದ ಕೊಹ್ಲಿ ಪಡೆ, ಸೆಮಿ ಫೈನಲ್ನಲ್ಲಿ ಮಾತ್ರ ನ್ಯೂಜಿಲೆಂಡ್ ವಿರುದ್ಧ ಸೋತು ವಿಶ್ವಕಪ್ ಪ್ರಯಾಣ ಅಂತ್ಯಗೊಳಿಸಿತ್ತು.
Yuvraj Singh: 2019 ವಿಶ್ವಕಪ್ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!
ನನಗನಿಸಿರುವ ಪ್ರಕಾರ ಭಾರತ ತಂಡ 2019 ವಿಶ್ವಕಪ್ಗಾಗಿ ಪೂರ್ವತಯಾರಿ ಏನೂ ನಡೆಸಿಲ್ಲ. ಪ್ರಮುಖವಾಗಿ ಬಿಸಿಸಿಐ ಆಯ್ಕೆ ಸಮಿತಿ ಕೆಲವು ತಪ್ಪು ನಿರ್ಧಾರಗಳನ್ನು ಕೈಗೆತ್ತಿಕೊಂಡಿತು ಎಂದು ಯುವಿ ಹೇಳಿದ್ದಾರೆ.
Yuvraj Singh: 2019 ವಿಶ್ವಕಪ್ನಲ್ಲಿ ಭಾರತ ಸೋತಿದ್ಯಾಕೆ?; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಯುವರಾಜ್!
ಸದ್ಯ ಮತ್ತೆ ಬಿಸಿಸಿಐ ವಿರುದ್ಧ ಮಾತನಾಡಿರುವ ಯುವಿ, ಭಾರತದಲ್ಲಿ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ಆದರೆ, ಅವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಈರೀತಿ ಆಗುತ್ತಿರುವುದು ವಿಷಾದನೀಯ ಎಂದಿದ್ದಾರೆ.