Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಎಂ ಎಸ್ ಧೋನಿಯ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಆಪ್ತ ಗೆಳೆಯನ ನಿವೃತ್ತಿಯಲ್ಲಿ ಸುರೇಶ್ ರೈನಾ ಸಾಥ್ ನಿಡಿ ದಿಗಿಲು ಹುಟ್ಟಿಸಿದ್ದರು. ಸದ್ಯ ಧೋನಿ ಬೆನ್ನಲ್ಲೆ ತಾನು ನಿವೃತ್ತಿ ಘೊಷಿಸಿದ್ದು ಯಾಕೆ ಎಂದು ರೈನಾ ಹೇಳಿದ್ದಾರೆ.
ಭಾರತ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ಮಹೇಂದ್ರ ಸಿಂಗ್ ಧೋನಿ ಜೊತೆ ದಿಢೀರ್ ನಿವೃತ್ತಿ ಘೋಷಿಸಲು ಏನು ಕಾರಣ ಎಂಬ ವಿಚಾರವನ್ನು ಇದೀಗ ಬಹಿರಂಗ ಪಡಿಸಿದ್ದಾರೆ.
2/ 11
ಕಳೆದ ವರ್ಷ ಆಗಸ್ಟ್ 15 ರಂದು ಎಂ. ಎಸ್ ಧೋನಿ ನಿವೃತ್ತಿಯನ್ನು ಇನ್ಸ್ಟಾಗ್ರಾಂನಲ್ಲಿ ಘೋಷಿಸುತ್ತಿದ್ದಂತೆಯೇ ಆಪ್ತ ಗೆಳೆಯ ಸುರೇಶ್ ರೈನಾ ಕೂಡ ತಮ್ಮ ನಿವೃತ್ತಿಯ ನಿರ್ಧಾರವನ್ನೂ ಪ್ರಕಟಿಸಿದ್ದರು.
3/ 11
ಧೋನಿಯ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಆಪ್ತ ಗೆಳೆಯನ ನಿವೃತ್ತಿಯಲ್ಲಿ ಸುರೇಶ್ ರೈನಾ ಸಾಥ್ ನಿಡಿ ದಿಗಿಲು ಹುಟ್ಟಿಸಿದ್ದರು. ಸದ್ಯ ಧೋನಿ ಬೆನ್ನಲ್ಲೆ ತಾನು ನಿವೃತ್ತಿ ಘೊಷಿಸಿದ್ದು ಯಾಕೆ ಎಂದು ರೈನಾ ಹೇಳಿದ್ದಾರೆ.
4/ 11
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಒಂದು ವರ್ಷದ ನಂತರ ಸುರೇಶ್ ರೈನಾ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ರಾಹುಲ್ ದ್ರಾವಿಡ್ ನಾಯಕನಾಗಿದ್ದಾಗ ರೈನಾ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು.
5/ 11
ಆದರೆ ಸುರೇಶ್ ರೈನಾ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಹೊರಬಂದಿದ್ದು ಧೋನಿ ನಾಯಕತ್ವದಲ್ಲಿ. 2011ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ರೈನಾ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.
6/ 11
ಒಟ್ಟಾರೆ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಎಡಗೈ ಆಟಗಾರ 300 ಸೀಮಿತ ಓವರ್ಗಳ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ಸಿಎಸ್ಕೆ ತಂಡದ ಪರವಾಗಿ ಕಳೆದ ವರ್ಷವೊಂದು ಬಿಟ್ಟು 2008ರಿಂದಲೂ ಕಣಕ್ಕಿಳಿಯುತ್ತಿದ್ದಾರೆ.
7/ 11
ಧೋನಿ ಹಾಗೂ ರೈನಾ ಇಬ್ಬರ ನಡುವೆ ಅಂಗಳದಾಚೆಯೂ ಅದ್ಭುತ ಗೆಳೆತನ ಬೆಳೆದಿತ್ತು. ಐಪಿಎಲ್ನಲ್ಲಿ ಚೆನ್ನೈ ತಂಡದ ನಾಯಕ ಉಪನಾಯಕನಾಗಿ ಇಬ್ಬರ ಕೊಡುಗೆಯೂ ಸಾಕಷ್ಟು ಮಹತ್ವದ್ದು. ಇದಕ್ಕಾಗಿಯೇ ತಮಿಳುನಾಡಿನ ಅಭಿಮಾನಿಗಳು ಈ ಇಬ್ಬರೂ ಕ್ರಿಕೆಟಿಗರನ್ನು ತಲ ಹಾಗೂ ಚಿನ್ನ ತಲ ಎಂದೇ ಕರೆಯುತ್ತಾರೆ.
8/ 11
"ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ಹಿಂದೆ ಸರಿಯಲು ಸೂಕ್ತ ಸಮಯ ಎಂಬ ಭಾವನೆ ನನ್ನಲ್ಲಿ ಉಂಟಾಗಿತ್ತು. ದೇಶಕ್ಕೆ ಹಾಗೂ ಐಪಿಎಲ್ನಲ್ಲಿ ನಾನು ಮತ್ತು ಧೋನಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇವೆ….
9/ 11
ಖಚಿತವಾಗಿಯೂ ಮುಂದೆ ನಾವು ಭೇಟಿಯಾಗಲು ಯೋಜನೆ ರೂಪಿಸುತ್ತೇವೆ. ಸಂಗತಿಗಳು ಉತ್ತಮವಾಗಿರುತ್ತವೆ ಮತ್ತು ಯೋಜನೆಗೆ ತಕ್ಕಂತೆ ಎಲ್ಲವೂ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
10/ 11
ಕಳೆದ ಐಪಿಎಲ್ 13ನೇ ಸೀಸನ್ನಲ್ಲಿ ಸುರೇಶ್ ರೈನಾ ಕಣಕ್ಕಿಳಿದಿರಲಿಲ್ಲ. ದುಬೈಗೆ ತೆರಳಿದ್ದರೂ ವೈಯಕ್ತಿಕ ಕಾರಣ ನೀಡಿ ಅವರು ಭಾರತಕ್ಕೆ ವಾಪಸ್ಸಾಗಿದ್ದರು.
11/ 11
ಇನ್ನೂ ಇತ್ತೀಚೆಗಷ್ಟೆ, ಸುರೇಶ್ ರೈನಾ ನಮ್ಮ ತಂಡದಿಂದ ದೂರವಾಗಲು ಯಾವುದೇ ಯೋಜನೆಗಳಿಲ್ಲ. ಅವರು ಮತ್ತೆ ಸಿಎಸ್ಕೆ ಪರ ಆಡಲಿದ್ದಾರೆ. ಐಪಿಎಲ್ 2021ರಲ್ಲಿ ಚೆನ್ನೈ ಪರವೇ ಕಣಕ್ಕಿಳಿಯಲಿದ್ದಾರೆ ಎಂದು ಸಿಎಸ್ಕೆ ಅಧಿಕೃತ ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.
First published:
111
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಭಾರತ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ಮಹೇಂದ್ರ ಸಿಂಗ್ ಧೋನಿ ಜೊತೆ ದಿಢೀರ್ ನಿವೃತ್ತಿ ಘೋಷಿಸಲು ಏನು ಕಾರಣ ಎಂಬ ವಿಚಾರವನ್ನು ಇದೀಗ ಬಹಿರಂಗ ಪಡಿಸಿದ್ದಾರೆ.
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಕಳೆದ ವರ್ಷ ಆಗಸ್ಟ್ 15 ರಂದು ಎಂ. ಎಸ್ ಧೋನಿ ನಿವೃತ್ತಿಯನ್ನು ಇನ್ಸ್ಟಾಗ್ರಾಂನಲ್ಲಿ ಘೋಷಿಸುತ್ತಿದ್ದಂತೆಯೇ ಆಪ್ತ ಗೆಳೆಯ ಸುರೇಶ್ ರೈನಾ ಕೂಡ ತಮ್ಮ ನಿವೃತ್ತಿಯ ನಿರ್ಧಾರವನ್ನೂ ಪ್ರಕಟಿಸಿದ್ದರು.
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಧೋನಿಯ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಆಪ್ತ ಗೆಳೆಯನ ನಿವೃತ್ತಿಯಲ್ಲಿ ಸುರೇಶ್ ರೈನಾ ಸಾಥ್ ನಿಡಿ ದಿಗಿಲು ಹುಟ್ಟಿಸಿದ್ದರು. ಸದ್ಯ ಧೋನಿ ಬೆನ್ನಲ್ಲೆ ತಾನು ನಿವೃತ್ತಿ ಘೊಷಿಸಿದ್ದು ಯಾಕೆ ಎಂದು ರೈನಾ ಹೇಳಿದ್ದಾರೆ.
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಒಂದು ವರ್ಷದ ನಂತರ ಸುರೇಶ್ ರೈನಾ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ರಾಹುಲ್ ದ್ರಾವಿಡ್ ನಾಯಕನಾಗಿದ್ದಾಗ ರೈನಾ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು.
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಆದರೆ ಸುರೇಶ್ ರೈನಾ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಹೊರಬಂದಿದ್ದು ಧೋನಿ ನಾಯಕತ್ವದಲ್ಲಿ. 2011ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ರೈನಾ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಒಟ್ಟಾರೆ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಎಡಗೈ ಆಟಗಾರ 300 ಸೀಮಿತ ಓವರ್ಗಳ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ಸಿಎಸ್ಕೆ ತಂಡದ ಪರವಾಗಿ ಕಳೆದ ವರ್ಷವೊಂದು ಬಿಟ್ಟು 2008ರಿಂದಲೂ ಕಣಕ್ಕಿಳಿಯುತ್ತಿದ್ದಾರೆ.
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಧೋನಿ ಹಾಗೂ ರೈನಾ ಇಬ್ಬರ ನಡುವೆ ಅಂಗಳದಾಚೆಯೂ ಅದ್ಭುತ ಗೆಳೆತನ ಬೆಳೆದಿತ್ತು. ಐಪಿಎಲ್ನಲ್ಲಿ ಚೆನ್ನೈ ತಂಡದ ನಾಯಕ ಉಪನಾಯಕನಾಗಿ ಇಬ್ಬರ ಕೊಡುಗೆಯೂ ಸಾಕಷ್ಟು ಮಹತ್ವದ್ದು. ಇದಕ್ಕಾಗಿಯೇ ತಮಿಳುನಾಡಿನ ಅಭಿಮಾನಿಗಳು ಈ ಇಬ್ಬರೂ ಕ್ರಿಕೆಟಿಗರನ್ನು ತಲ ಹಾಗೂ ಚಿನ್ನ ತಲ ಎಂದೇ ಕರೆಯುತ್ತಾರೆ.
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
"ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ಹಿಂದೆ ಸರಿಯಲು ಸೂಕ್ತ ಸಮಯ ಎಂಬ ಭಾವನೆ ನನ್ನಲ್ಲಿ ಉಂಟಾಗಿತ್ತು. ದೇಶಕ್ಕೆ ಹಾಗೂ ಐಪಿಎಲ್ನಲ್ಲಿ ನಾನು ಮತ್ತು ಧೋನಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇವೆ….
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಖಚಿತವಾಗಿಯೂ ಮುಂದೆ ನಾವು ಭೇಟಿಯಾಗಲು ಯೋಜನೆ ರೂಪಿಸುತ್ತೇವೆ. ಸಂಗತಿಗಳು ಉತ್ತಮವಾಗಿರುತ್ತವೆ ಮತ್ತು ಯೋಜನೆಗೆ ತಕ್ಕಂತೆ ಎಲ್ಲವೂ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ
ಇನ್ನೂ ಇತ್ತೀಚೆಗಷ್ಟೆ, ಸುರೇಶ್ ರೈನಾ ನಮ್ಮ ತಂಡದಿಂದ ದೂರವಾಗಲು ಯಾವುದೇ ಯೋಜನೆಗಳಿಲ್ಲ. ಅವರು ಮತ್ತೆ ಸಿಎಸ್ಕೆ ಪರ ಆಡಲಿದ್ದಾರೆ. ಐಪಿಎಲ್ 2021ರಲ್ಲಿ ಚೆನ್ನೈ ಪರವೇ ಕಣಕ್ಕಿಳಿಯಲಿದ್ದಾರೆ ಎಂದು ಸಿಎಸ್ಕೆ ಅಧಿಕೃತ ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.