ರಾಹುಲ್ ದ್ರಾವಿಡ್ ಅವರ ಸಾಧನೆಗೆ ತಕ್ಕಂತ ಮನ್ನಣೆ ನೀಡುತ್ತಿಲ್ಲ..!
Rahul Dravid: 16 ವರ್ಷಗಳ ವೃತ್ತಿ ಜೀವನದಲ್ಲಿ 164 ಟೆಸ್ಟ್ ಪಂದ್ಯಗಳಲ್ಲಿ 13,288 ಹಾಗೂ 344 ಏಕದಿನ ಪಂದ್ಯಗಳಲ್ಲಿ 10889 ರನ್ ಗಳಿಸಿದ್ದಾರೆ. ಹಾಗೆಯೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಕೂಡ ಜವಾಬ್ದಾರಿ ನಿರ್ವಹಿಸಿದ್ದಾರೆ.
ದ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಶ್ರೇಷ್ಠ ಕ್ರಿಕೆಟಿಗ ಎನ್ನಲು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಲೆಹಾಕಿರುವ 24 ಸಾವಿರಕ್ಕೂ ಅಧಿಕ ರನ್ಗಳೇ ಸಾಕ್ಷಿ. ಅದೇ ದ್ರಾವಿಡ್ ಅವರಿಗೆ ಭಾರತದಲ್ಲಿ ತಕ್ಕ ಮನ್ನಣೆ ಸಿಗಲಿಲ್ಲ ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ.
2/ 13
ಹೌದು, ರಾಹುಲ್ ದ್ರಾವಿಡ್ ಅವರಿಗೆ ಸಿಗಬೇಕಾದ ಮನ್ನಣೆ ನೀಡಿಲ್ಲ ಎಂದು ಬಹಿರಂಗವಾಗಿ ಹೇಳಿದ್ದು ಗೌತಮ್ ಗಂಭೀರ್. ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಂತೆ ದೊಡ್ಡ ಪ್ರಭಾವ ಬೀರಿದ್ದಾರೆ. ಆದರೆ ಅವರ ಕೊಡುಗೆಗೆ ತಕ್ಕಂತಹ ಮನ್ನಣೆ ಮಾತ್ರ ಸಿಗಲಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
3/ 13
ಹಾಗೆಯೇ ರಾಹುಲ್ ದ್ರಾವಿಡ್ ಅವರ ನಾಯಕತ್ವದ ಬಗ್ಗೆ ಕೂಡ ಯಾರೂ ಮಾತನಾಡುವುದಿಲ್ಲ ಎಂದಿರುವ ಗಂಭೀರ್, ಸಾಮಾನ್ಯವಾಗಿ ನಾವು ಸೌರವ್ ಗಂಗೂಲಿ, ಎಂಎಸ್ ಧೋನಿ ಈಗ ವಿರಾಟ್ ಕೊಹ್ಲಿ ಬಗ್ಗೆ ಮಾತ್ರ ಮಾತನಾಡುತ್ತೇವೆ.
4/ 13
ಆದರೆ ರಾಹುಲ್ ದ್ರಾವಿಡ್ ಕೂಡ ಅದ್ಭುತ ನಾಯಕರಾಗಿದ್ದರು. ನಾನು ಗಂಗೂಲಿ ಹಾಗೂ ದ್ರಾವಿಡ್ ಅವರ ನಾಯಕತ್ವದಡಿಯಲ್ಲಿ ಆಡಿದ್ದೇನೆ. ಅವರ ನಾಯಕತ್ವದಲ್ಲಿ ಭಾರತ 79 ಏಕದಿನ ಪಂದ್ಯಗಳ ಪೈಕಿಯಲ್ಲಿ 42 ರಲ್ಲಿ ಗೆಲುವು ಸಾಧಿಸಿದೆ.
5/ 13
ಇದರಲ್ಲಿ ಸತತ 14 ಗೆಲುವುಗಳು ಚೇಸಿಂಗ್ ಮೂಲಕ ಬಂದಿದ್ದವು. ಇದು ವಿಶ್ವದಾಖಲೆಯಾಗಿದೆ ಎಂದು ಗಂಭೀರ್ ನೆನಪಿಸಿಕೊಂಡರು.
6/ 13
ಇನ್ನು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ದ್ರಾವಿಡ್ ನಾಯಕತ್ವದ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರಿತ್ತು.
7/ 13
ಆದರೆ ಇತರೆ ನಾಯಕರಿಗೆ ನೀಡುವ ಮನ್ನಣೆಯನ್ನು ದ್ರಾವಿಡ್ ಅವರಿಗೆ ನೀಡದಿರುವುದು ದುರದೃಷ್ಟಕರ ಎಂದು ಟೀಮ್ ಇಂಡಿಯಾ ಮಾಜಿ ಆರಂಭಿಕ ಅಭಿಪ್ರಾಯಪಟ್ಟರು.
8/ 13
ನನ್ನ ಪ್ರಕಾರ ರಾಹುಲ್ ದ್ರಾವಿಡ್ ಅವರು ಭಾರತದ ಅಂಡರ್ ರೇಟೆಡ್ ಕ್ರಿಕೆಟರ್ ಹಾಗೂ ಅಂಡರ್ ರೇಟೆಡ್ ನಾಯಕ ಎಂದು ಅಭಿಪ್ರಾಯಪಟ್ಟ ಗಂಭೀರ್, ಅವರ ನಾಯಕತ್ವದಲ್ಲಿ ನಾವು ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಸತತವಾಗಿ 14ರಿಂದ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೆವು ಎಂದು ನೆನಪಿಸಿಕೊಂಡರು.
9/ 13
ತಂಡಕ್ಕಾಗಿ ಯಾವುದೇ ಪಾತ್ರವನ್ನು ನಿರ್ವಹಿಸಲು ಸಿದ್ಧರಿದ್ದ ಅವರು, ಅತ್ಯುತ್ತಮ ಕ್ರಿಕೆಟಿಗ ಮಾತ್ರವಲ್ಲದೇ, ಆದರ್ಶಪ್ರಾಯರಾಗಿದ್ದರು. ನನ್ನ ಕ್ರಿಕೆಟ್ ಕೆರಿಯರ್ನಲ್ಲಿ ಅವರ ಪ್ರಭಾವ ಬಲು ದೊಡ್ಡದು ಎಂದು ಗಂಭೀರ್ ಹೇಳಿದರು.
10/ 13
ರಾಹುಲ್ ದ್ರಾವಿಡ್ ತಮ್ಮ 16 ವರ್ಷಗಳ ವೃತ್ತಿ ಜೀವನದಲ್ಲಿ 164 ಟೆಸ್ಟ್ ಪಂದ್ಯಗಳಲ್ಲಿ 13,288 ಹಾಗೂ 344 ಏಕದಿನ ಪಂದ್ಯಗಳಲ್ಲಿ 10889 ರನ್ ಗಳಿಸಿದ್ದಾರೆ. ಹಾಗೆಯೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಕೂಡ ಜವಾಬ್ದಾರಿ ನಿರ್ವಹಿಸಿದ್ದಾರೆ.
11/ 13
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಬಳಿಕ 2016ರಿಂದ 2019ರವರೆಗೂ ಅಂಡರ್ -19 ಮತ್ತು ಭಾರತ ಎ ಟೀಮ್ ನ ಮುಖ್ಯ ಕೋಚ್ ಆಗಿ ಕೂಡ ಯುವ ಪ್ರತಿಭೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
12/ 13
ಸದ್ಯ ರಾಹುಲ್ ದ್ರಾವಿಡ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.