ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

Javagal Srinath: ಕ್ರಿಕೆಟ್ ಕೆರಿಯರ್​ನಲ್ಲಿ  500 ಕ್ಕೂ ಅಧಿಕ ವಿಕೆಟ್ ಪಡೆದಿರುವ ಬೌಲರ್​ಗೆ ಸಿಗಬೇಕಾದ ಅರ್ಹ ಮನ್ನಣೆ ಶ್ರೀನಾಥ್ ಅವರಿಗೆ ಸಿಕ್ಕಿರಲಿಲ್ಲ ಎಂಬುದು ನನ್ನ ಅನಿಸಿಕೆ ಎಂದು ಮಾಜಿ ಆಲ್​ರೌಂಡರ್ ಅಭಿಪ್ರಾಯಪಟ್ಟಿದ್ದರು.

First published:

  • 114

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ  7 ಸಾವಿರಕ್ಕೂ ಅಧಿಕ ರನ್, 800 ಕ್ಕೂ ಅಧಿಕ ವಿಕೆಟ್. ಒಬ್ಬ ಕ್ರಿಕೆಟಿಗನನ್ನು ಸರ್ವ ಶ್ರೇಷ್ಠ ಆಟಗಾರ ಎಂದು ಪರಿಗಣಿಸಲು ಇದಕ್ಕಿಂತ ದೊಡ್ಡ ಸಾಧನೆ ಬೇಕಿಲ್ಲ. ಇಂತಹ ಸಾಧನೆ ಮಾಡಿರುವುದು ಮತ್ಯಾರೂ ಅಲ್ಲ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್.

    MORE
    GALLERIES

  • 214

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಕರಾರುವಾಕ್ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಮಿಂಚಿದ್ದ ಶಾನ್ ಪೊಲಾಕ್ ಅತ್ಯುತ್ತಮ ಆಲ್​ರೌಂಡರ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರೇ ಒಬ್ಬರು ಬೌಲರ್​ನನ್ನು ಹೊಗಳುತ್ತಿದ್ದರೆ ಆತನ ಸಾಧನೆ ಕೂಡ ಶ್ರೇಷ್ಠವಾಗಿರಲೇಬೇಕು.

    MORE
    GALLERIES

  • 314

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಹೌದು, ಸಂದರ್ಶನವೊಂದರಲ್ಲಿ ಸೌತ್ ಆಫ್ರಿಕಾ ಮಾಜಿ ವೇಗಿ ಶಾನ್ ಪೊಲಾಕ್ ವಿವಿಧ ತಲೆಮಾರಿನ ಶ್ರೇಷ್ಠ ಬೌಲರ್‌ಗಳ ಬಗ್ಗೆ ಮಾತನಾಡಿದರು. ಇದೇ ದಕ್ಷಿಣ ಆಫ್ರಿಕಾ ಆಟಗಾರ ಹೆಸರಿಸಿದ ಶ್ರೇಷ್ಠ ಬೌಲರ್​ಗಳನ್ನು ಟೀಮ್ ಇಂಡಿಯಾ ಆಟಗಾರನ ಹೆಸರು ಕೂಡ ಇತ್ತು ಎಂಬುದು ವಿಶೇಷ.

    MORE
    GALLERIES

  • 414

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಎಸ್...ಶಾನ್ ಪೊಲಾಕ್ ಹೆಸರಿಸಿದ ಅತ್ಯುತ್ತಮ ವೇಗದ ಬೌಲರ್​ಗಳಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಅವರಿಗೂ ಸ್ಥಾನ ನೀಡಿದ್ದರು. ಶ್ರೀನಾಥ್ ಅವರು 90ರ ದಶಕದ ಉತ್ತಮ ವೇಗಿಯಾಗಿದ್ದರು. ಆದರೆ ಅವರಿಗೆ ಅರ್ಹವಾದ ಮನ್ನಣೆಯನ್ನು ದೊರೆತಿರಲಿಲ್ಲ ಎಂದೆನಿಸುತ್ತದೆ.

    MORE
    GALLERIES

  • 514

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಭಾರತದ ಪರ ಅನಿಲ್ ಕುಂಬ್ಳೆ (334) ನಂತರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಲ್ಲಿ ಶ್ರೀನಾಥ್ ಅವರು ಎರಡನೇ ಸ್ಥಾನವನ್ನು ಹೊಂದಿದ್ದಾರೆ. ಅವರು 315 ಏಕದಿನ ಮತ್ತು ಟೆಸ್ಟ್‌ನಲ್ಲಿ 236 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಅತ್ಯುತ್ತಮ ಪಂದ್ಯಗಳ ಬಗ್ಗೆ ಚರ್ಚಿಸುವಾಗ ಶ್ರೀನಾಥ್ ಹೆಸರು ಕೇಳಿ ಬರುವುದು ವಿರಳ ಎಂದು ಪೊಲಾಕ್ ಬೇಸರ ವ್ಯಕ್ತಪಡಿಸಿದ್ದರು.

    MORE
    GALLERIES

  • 614

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಕ್ರಿಕೆಟ್ ಕೆರಿಯರ್​ನಲ್ಲಿ  500 ಕ್ಕೂ ಅಧಿಕ ವಿಕೆಟ್ ಪಡೆದಿರುವ ಬೌಲರ್​ಗೆ ಸಿಗಬೇಕಾದ ಅರ್ಹ ಮನ್ನಣೆ ಶ್ರೀನಾಥ್ ಅವರಿಗೆ ಸಿಕ್ಕಿರಲಿಲ್ಲ ಎಂಬುದು ನನ್ನ ಅನಿಸಿಕೆ ಎಂದು ಸೌತ್ ಆಫ್ರಿಕಾ ಮಾಜಿ ಆಲ್​ರೌಂಡರ್ ಹೇಳಿದರು.

    MORE
    GALLERIES

  • 714

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಇದೀಗ ಜಾವಗಲ್ ಶ್ರೀನಾಥ್ ಅವರನ್ನು ಟೀಮ್ ಇಂಡಿಯಾದ ಟೆಸ್ಟ್​ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ ಕೂಡ ಹಾಡಿ ಹೊಗಳಿದ್ದಾರೆ.

    MORE
    GALLERIES

  • 814

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಮೈಸೂರಿನಿಂದ ಬಂದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಟೀಮ್ ಇಂಡಿಯಾದಲ್ಲಿ ವೇಗದ ಬೌಲಿಂಗ್‍ನಲ್ಲಿ ಕ್ರಾಂತಿಯ ಕಿಡಿ ಹಚ್ಚಿದ್ದರು ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 914

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ವೇಗದ ಬೌಲಿಂಗ್‍ಗೆ ಸಹಕಾರಿಯಲ್ಲದ ಪಿಚ್‍ಗಳಲ್ಲೂ ಅವರು ಅದ್ಭುತ ಸ್ಪೆಲ್ ಮಾಡುತ್ತಿದ್ದರು. ಎಂತಹ ಕಠಿಣ ಸಂದರ್ಭದಲ್ಲೂ ಅತ್ಯುತ್ತಮ ಬೌಲಿಂಗ್ ಮಾಡುವ ತುಡಿತವೇ ಶ್ರೀ ಯಶಸ್ವಿಗೆ ಕಾರಣ ಎಂದು ಲಕ್ಷ್ಮಣ್ ಮೈಸೂರ್ ಎಕ್ಸ್​ಪ್ರೆಸ್​ರನ್ನು ಹಾಡಿ ಹೊಗಳಿದ್ದಾರೆ.

    MORE
    GALLERIES

  • 1014

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಟೀಮ್ ಇಂಡಿಯಾ ಪರ  67 ಟೆಸ್ಟ್ ಪಂದ್ಯಗಳನ್ನು ಆಡಿರುವ ಶ್ರೀನಾಥ್  15,104 ಎಸೆತಗಳನ್ನು ಎಸೆದಿದ್ದರು. ಇದರಲ್ಲಿ 236 ವಿಕೆಟ್ ಉರುಳಿಸಿದ್ದರು. ಹಾಗೆಯೇ  86 ಕ್ಕೆ 8 ವಿಕೆಟ್ ಅವರ ಟೆಸ್ಟ್ ಇನಿಂಗ್ಸ್​ವೊಂದರ ಅತ್ಯುತ್ತಮ ಸಾಧನೆ.

    MORE
    GALLERIES

  • 1114

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    229 ಏಕದಿನ ಪಂದ್ಯಗಳಲ್ಲಿ ಜಾವಗಲ್ ಶ್ರೀನಾಥ್ ಅವರು 227 ಇನಿಂಗ್ಸ್​ನಲ್ಲಿ ಬೌಲ್ ಮಾಡಿದ್ದರು. ಒಟ್ಟು 11,935 ಎಸೆತ ಬೌಲ್ ಮಾಡಿರುವ ಕನ್ನಡಿಗ  315 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ  23 ರನ್​ಗೆ  5 ವಿಕೆಟ್ ಕಬಳಿಸಿರುವುದು ಶ್ರೇಷ್ಠ ದಾಖಲೆಯಾದರೆ, 3 ಬಾರಿ  5 ವಿಕೆಟ್​ಗಳ ಗುಚ್ಛ ಪಡೆದಿದ್ದರು.

    MORE
    GALLERIES

  • 1214

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ನವೆಂಬರ್  29, 1991 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಪಂದ್ಯದೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಜಾವಗಲ್ ಶ್ರೀನಾಥ್ ಅವರು ಮಾರ್ಚ್​  23, 2003 ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ತಮ್ಮ ಕೊನೆಯ ಅಂತರಾಷ್ಟ್ರೀಯ ಏಕದಿನ ಪಂದ್ಯವಾಡಿರುವುದು ವಿಶೇಷ.

    MORE
    GALLERIES

  • 1314

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ಜಾವಗಲ್‌ ಶ್ರೀನಾಥ್

    MORE
    GALLERIES

  • 1414

    ಟೀಮ್​​ ಇಂಡಿಯಾ ವೇಗದ ಬೌಲಿಂಗ್​ಗೆ ಕ್ರಾಂತಿಯ ಕಿಡಿ ಹಚ್ಚಿದ್ದು ಕನ್ನಡಿಗ..!

    ನಿವೃತ್ತಿ ಬಳಿಕ ಮೈಸೂರ್ ಎಕ್ಸ್​ಪ್ರೆಸ್ ಶ್ರೀನಾಥ್ ಮ್ಯಾಚ್ ರೆಫರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    MORE
    GALLERIES