Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

ನಾವು ಪಾಕಿಸ್ತಾನದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಹಾಗೆಯೇ ಅವರು ನಮ್ಮ ಸಮಸ್ಯೆಗಳ ಬಗ್ಗೆಯೂ ಮಾತನಾಡಬಾರದು. ಅವರೇಕೆ ನಮ್ಮ ದೇಶದ ಬಗ್ಗೆ ಮಾತನಾಡಬೇಕು?

First published:

  • 19

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ನಡುವಣ ಶೀತಲ ಸಮರ ಮುಂದುವರೆದಿದೆ. 2007ರಲ್ಲಿ ನಾಗ್ಪುರದಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಣ ಪಂದ್ಯದಿಂದ ಆರಂಭವಾದ ಈ ಕಿತ್ತಾಟ ನಿವೃತ್ತಿ ಬಳಿಕ ಕೂಡ ಮುಂದುವರೆದಿರುವುದು ವಿಶೇಷ. ಇಬ್ಬರು ಆಟಗಾರರ ಆರೋಪ ಪ್ರತ್ಯಾರೋಪಗಳಿಗೆ ಹಲವು ಬಾರಿ ಸೋಷಿಯಲ್ ಮೀಡಿಯಾ ಸಾಕ್ಷಿಯಾಗಿತ್ತು.

    MORE
    GALLERIES

  • 29

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ಶಾಹಿದ್ ಅಫ್ರಿದಿ​ 'ಜಂಟಲ್‌ಮ್ಯಾನ್ಸ್ ಗೇಮ್' ಅನ್ನು ರಾಜಕೀಯಗೊಳಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಗಂಭೀರ್ ಹಲವು ಬಾರಿ ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನಡೆದ 2011 ರ ವಿಶ್ವಕಪ್ ಪಂದ್ಯಾವಳಿಯ ಘಟನೆಯನ್ನು ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಮುಂದಿಟ್ಟಿದ್ದಾರೆ.

    MORE
    GALLERIES

  • 39

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ಭಾರತ-ಪಾಕಿಸ್ತಾನ ನಡುವಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಪುನರಾರಂಭಿಸುವ ಬಗ್ಗೆ ಮಾತನಾಡಿದ ಗಂಭೀರ್, ಹಳೆಯ ಘಟನೆಯನ್ನು ಉಲ್ಲೇಖಿಸಿದರು. ಐಸಿಸಿ ವಿಶ್ವಕಪ್ 2011 ರಲ್ಲಿ ಶಾಹಿದ್ ಅಫ್ರಿದಿ ಅವರು ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಗಂಭೀರ್ ನೆನಪಿಸಿದ್ದಾರೆ.

    MORE
    GALLERIES

  • 49

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ಅದು 2011 ಸೆಮಿ ಫೈನಲ್ ಪಂದ್ಯ. ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಅಫ್ರಿದಿ ತಂಡಗಳ ನಾಯಕರಾಗಿದ್ದರು. ಈ ವೇಳೆ ಸೆಮಿಫೈನಲ್​ನಲ್ಲಿ, ಕಾಶ್ಮೀರಕ್ಕಾಗಿ ಟಾಸ್ ಗೆಲ್ಲಲು ಬಯಸುತ್ತೇನೆ ಎಂದು ಅಫ್ರಿದಿ ಹೇಳಿದ್ದರು. ಇದೊಂದು ಹಾಸ್ಯಾಸ್ಪದ ಹೇಳಿಕೆಯಾಗಿತ್ತು.

    MORE
    GALLERIES

  • 59

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ಏಕೆಂದರೆ ನಾವು ಪಾಕಿಸ್ತಾನದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಹಾಗೆಯೇ ಅವರು ನಮ್ಮ ಸಮಸ್ಯೆಗಳ ಬಗ್ಗೆಯೂ ಮಾತನಾಡಬಾರದು. ಅವರೇಕೆ ನಮ್ಮ ದೇಶದ ಬಗ್ಗೆ ಮಾತನಾಡಬೇಕು? ಅಲ್ಲವೇ, ಆದರೆ ಈ ಪಂದ್ಯಕ್ಕೂ ಮುನ್ನ ಅಫ್ರಿದಿ ಟಾಸ್​​ ವಿಷಯಕ್ಕೂ ರಾಜಕೀಯ ಬಣ್ಣ ನೀಡಿದ್ದರು ಎಂದು ಗೌತಮ್ ಗಂಭೀರ್ ತಿಳಿಸಿದರು.

    MORE
    GALLERIES

  • 69

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ಅಂದು ನಾವು ವಿಶ್ವಕಪ್ ಗೆದ್ದು 26/11 ರ ಮುಂಬೈ ದಾಳಿಯಲ್ಲಿ  ಹುತಾತ್ಮರಾದವರಿಗೆ ಅರ್ಪಿಸಿದೆವು. ಆದರೆ ಅಫ್ರಿದಿ ಟಾಸ್ ಅನ್ನು ರಾಜಕೀಯಗೊಳಿಸಿದ್ದರು. ನನ್ನ ನಿಲುವು ಇನ್ನೂ ಒಂದೇ ಆಗಿರುತ್ತದೆ. ಅದನ್ನೇ ಬಹಿರಂಗವಾಗಿ ಹೇಳಬಯಸುತ್ತೇನೆ.

    MORE
    GALLERIES

  • 79

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ನನ್ನ ಪ್ರಕಾರ ಭಾರತ-ಪಾಕಿಸ್ತಾನ ಸರಣಿಯನ್ನು ಪ್ರಾರಂಭಿಸುವ ಯಾವುದೇ ಅಗತ್ಯವಿಲ್ಲ. ಕಾಶ್ಮೀರದಲ್ಲಿ ಭಯೋತ್ಪಾದನೆ ಮುಗಿಯುವವರೆಗೂ ನಾವು ಪಾಕ್​ನೊಂದಿಗೆ ಸರಣಿ ಆಡಬಾರದು ಎಂಬುದು ನನ್ನ ಸ್ಪಷ್ಟ ನಿಲುವು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

    MORE
    GALLERIES

  • 89

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ಸಚಿನ್-ಅಫ್ರಿದಿ

    MORE
    GALLERIES

  • 99

    Gautam Gambhir: ಕಾಶ್ಮೀರಕ್ಕಾಗಿ ನಾವು ಟಾಸ್ ಗೆಲ್ಲುತ್ತೇವೆ ಎಂದಿದ್ದ ಅಫ್ರಿದಿ: 2011ರ ಘಟನೆ ಮೆಲುಕು ಹಾಕಿದ ಗಂಭೀರ್

    ಸಚಿನ್-ಅಫ್ರಿದಿ

    MORE
    GALLERIES