ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದರಂತೆ. ಆದರೆ ಇವರೆಲ್ಲರು ಯಾವ ಕಾರಣಕ್ಕಾಗಿ ಇಂತಹ ಸನ್ನಿವೇಷವನ್ನ ದಾಟಿ ಬಂದಿದ್ದಾರೆ? ಯಾಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

First published:

  • 119

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದರಂತೆ. ಆದರೆ ಇವರೆಲ್ಲರು ಯಾವ ಕಾರಣಕ್ಕಾಗಿ ಇಂತಹ ಸನ್ನಿವೇಷವನ್ನ ದಾಟಿ ಬಂದಿದ್ದಾರೆ? ಯಾಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    MORE
    GALLERIES

  • 219

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಟೀಂ ಇಂಡಿಯಾದ ವೇಗಿ ಮಹಮ್ಮದ್ ಶಮಿ ಕೂಡ ಹಿಂದೊಮ್ಮ ಆತ್ಮಹತ್ಯೆಗೆ ನಿರ್ಧರಿಸಿದ್ದರಂತೆ. ಈ ಬಗ್ಗೆ ಅವರೇ ಇನ್ಸ್ಟಾಗ್ರಾಂ ಲೈವ್​​​ನಲ್ಲಿ ಹೇಳಿಕೊಂಡಿದ್ದರು.

    MORE
    GALLERIES

  • 319

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    2019ರ ವಿಶ್ವಕಪ್ ಸಮಯದಲ್ಲಿ ಶಮಿ ಟೀಂ ಇಂಡಿಯಾ ಅಗ್ರಗಣ್ಯ ವೇಗಿಯಾಗಿದ್ದರು. ಬ್ಯಾಟ್ಸ್​ಮನ್​ಗಳ ವಿರುದ್ಧ ಪರಿಣಾಮಕಾರಿ ಬೌಲಿಂಗ್ ಮಾಡುವುದನ್ನು ಸಾಬೀತು ಪಡಿಸಿದ್ದರು. ಆದರೆ ಶಮಿ ಹಿಂದೊಮ್ಮೆ ಆತ್ಮಹತ್ಯೆ ಮಾಡಲು ನಿರ್ಧರಿಸಿದ್ದರಂತೆ!

    MORE
    GALLERIES

  • 419

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ರೋಹಿತ್ ಶರ್ಮಾ ಅವರ ಜೊತೆಗೆ ಇನ್​ಸ್ಟಾಗ್ರಾಂ ಲೈವ್ ಬಂದ ಶಮಿ ಈ ವಿಚಾರವನ್ನು ಹೇಳಿಕೊಂಡಿದ್ದರು. 2015ರ ವಿಶ್ವಕಪ್​ನಲ್ಲಿ ಮಹಮ್ಮದ್ ಶಮಿ ಗಾಯಗೊಂಡಿದ್ದರು. ಅದರಿಂದ ಚೇತರಿಸಿಕೊಳ್ಳಲು ಅವರು 18 ತಿಂಗಳ ಕಾಲ ಸಮಯ ತೆಗೆದುಕೊಂಡರು.

    MORE
    GALLERIES

  • 519

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಈ ಬಗ್ಗೆ ಲೈವ್​​ನಲ್ಲಿ ಮಾತನಾಡಿದ್ದ ಶಮಿ 18 ತಿಂಗಳ ಕಾಲ ಚೇತರಿಸಿಕೊಳ್ಳಲು ತೆಗೆದುಕೊಂಡ ಸಮಯವು ನನ್ನ ಜೀವನದ ಅತ್ಯಂತ ನೋವಿನ ಕ್ಷಣವಾಗಿತ್ತು. ಒತ್ತಡದ ಸಮಯವಾಗಿತ್ತು. ನಾನು ಮತ್ತೆ ಮರಳಿ ಆಟವಾಡಲು ಪ್ರಾರಂಭಿಸಿದಾಗ ಕೆಲವು ವೈಯ್ಯಕ್ತಿಕ ವಿಚಾರಗಳಿಂದ ಅಡಚಣೆಯಾಯಿತು. ಆ ಸಮಯದಲ್ಲಿ ನಾನು ಮೂರು ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚನೆ ಮಾಡಿದ್ದೆ ಎಂದು ಹೇಳಿದರು.

    MORE
    GALLERIES

  • 619

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    2018ರಲ್ಲಿ ಶಮಿ ಪತ್ನಿ ಅವರ ಮೇಲೆ ಕೌಟುಂಬಿಕ ಹಿಂಸೆ ಮತ್ತು ವಿವಾಹೇತರ ಸಂಬಂಧಗಳ ಬಗ್ಗೆ ಆರೋಪ ಮಾಡಿದ್ದರು. ಈ ಘಟನೆ ಕೋರ್ಟ್ ಮೆಟ್ಟಿಲೇರಿತ್ತು

    MORE
    GALLERIES

  • 719

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಟೀಂ ಇಂಡಿಯಾದ ಮತ್ತೊರ್ವ ವೇಗಿ ಪ್ರವೀಣ್ ಕುಮಾರ್ ಕೂಡ ಹಿಂದೊಮ್ಮೆ ಬದುಕಿನಲ್ಲಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದರಂತೆ.

    MORE
    GALLERIES

  • 819

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಇಂಜುರಿಯಿಂದಾಗಿ ಪ್ರಮೀಣ್ ಕುಮಾರ್ ಕ್ರಿಕೆಟ್ ಭವಿಷ್ಯ ತುಗುಯ್ಯಾಲೆಯಲ್ಲಿತ್ತು. ಅದೇ ವೇಳೆಗೆ ಇವರ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಆಟಗಾರ ಆಯ್ಕೆಯಾಗಿ ಅಮೋಘ ಪ್ರದರ್ಶನ ನೀಡಿದರು. ಇಲ್ಲಿಂದ ಪ್ರವೀನ್ ಕುಮಾರ್ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡುವುದು ಅಸಾಧ್ಯವಾಯಿತು. ಬಳಿಕ ನಿವೃತ್ತಿ ಘೋಷಿಸಿದರು.

    MORE
    GALLERIES

  • 919

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಪ್ರವೀಣ್ ಕಮಾಲ್ ನಡೆಯಲಿಲ್ಲ. ಆರಂಭದಲ್ಲಿ ಎದುರಾಳಿಗರ ಮೈಚಳಿ ಬಿಡಿಸುತ್ತಿದ್ದ ಇವರು ಬರಬರುತ್ತಾ ದುಬಾರಿಯಾದರು. ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ತೋರಿದ ಪರಿಣಾಮ ಇಲ್ಲಿಗೆ ಇವರ ಕ್ರಿಕೆಟ್ ಜೀವನ ಅಂತ್ಯವಾಯಿತು ಎಂಬ ಮಾತುಗಳು ಕೇಳಬರಲಾರಂಭಿಸಿದವು. ಈ ವೇಳೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಜಚೆ ಮಾಡಿಕೊಂಡಿದ್ದರಂತೆ.

    MORE
    GALLERIES

  • 1019

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಕೊಡಗಿನ ಕುವರ ರಾಬಿನ್ ಉತ್ತಪ್ಪ ಟಿ20 ಕ್ರಿಕೆಟ್​ನಲ್ಲಿ ಅಕ್ರಮಣಕಾರಿ ಬ್ಯಾಟಿಂಗ್ ಬೀಸುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಟೀಂ ಇಂಡಿಯಾದ ಖಾಯಂ ಸ್ಥಾನವನ್ನು ಪಡೆದಿದ್ದರು

    MORE
    GALLERIES

  • 1119

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    2015ರಲ್ಲಿ ಕೊನೆಯ ಬಾರಿ ಟೀಂ ಇಂಡಿಯಾದ ಪರ ಆಡಿದರು. ಆನಂತರ ಅವಕಾಶಗಳಿಂದ ವಂಚಿತರಾಗಿದ್ದರು ಉತ್ತಪ್ಪ.

    MORE
    GALLERIES

  • 1219

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಇತ್ತೀಚೆಗೆ ರಾಯಲ್ ರಾಜಸ್ಥಾನ್ ಫೌಂಡೇಶನ್​​ ಮೈಂಡ್ ಬಾಡಿ ಅ್ಯಂಡ್ ಸೋಲ್ ಎಂಬ ಲೈವ್ ಸಂವಾದದಲ್ಲಿ ತಮ್ಮ ಕ್ರಿಕೆಟ್ ಬದುಕಿನ ಕಹಿ ಘಟನೆಗಳನ್ನು ಉತ್ತಪ್ಪ ನೆನಪಿಸಿಕೊಂಡಿದ್ದಾರೆ. ಸಂವಾದದಲ್ಲಿ ಮಾತನಾಡುತ್ತಾ 2009 ರಿಂದ 2011 ರವರೆಗಿನ ಅವಧಿ ಅತ್ಯಂತ ಕಠಿಣವಾಗಿತ್ತು ಎಂದು ಹೇಳಿದ್ದಾರೆ.

    MORE
    GALLERIES

  • 1319

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    2006ರಲ್ಲಿ ತಂಡಕ್ಕೆ ಪಾದಾರ್ಪಾಣೆ ಮಾಡಿದಾಗ ನನಗೆ ನನ್ನ ಬಗ್ಗೆ ಅಷ್ಟೇನು ತಿಳಿದಿರಲಿಲ್ಲ. ಆ ಬಳಿಕ ಬಹಳಷ್ಟು ವಿಚಾರಗಳನ್ನು ಕಳಿತು ಸುಧಾರಿಸಿಕೊಂಡೆ. ನನ್ನ ಗುರಿ ಬಗ್ಗೆ ಸ್ಟಷ್ಟ ಪಡಿಸಿಕೊಂಡೆ.

    MORE
    GALLERIES

  • 1419

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    2009 ರಿಂದ 2011 ನನಗೆ ಕಷ್ಟದ ಸಮಯವಾಗಿತ್ತು. ಅವಕಾಶ ಮತ್ತು ಪಂದ್ಯಗಳಿಂದ ನಾನು ವಂಚಿನಾಗಿದ್ದೆ. ಈ ಸಮಯದಲ್ಲಿ ನನ್ನಲ್ಲಿ ಪ್ರತಿದಿನ ಆತ್ಮಹತ್ಯೆಯಂತಹ ಆಲೋಚನೆಗಳು ಮೂಡುತ್ತಿದ್ದವು. ಅಂದು ನಾನು ಅನುಭವಿಸಿದ ನೋವು ಇಂದಿಗೂ  ನೆನಪಿದೆ. ನನ್ನ ಮುಂದಿನ ಜೀವನದ ಬಗ್ಗೆ ಚಿಂತಿತನಾಗುತ್ತಿದೆ. ಏಕೆಂದರೆ ನಾನು ಕ್ರಿಕೆಟ್ ಬಗ್ಗೆ ಸ್ವಲ್ಪ ಯೋಚಿಸುತ್ತಿದ್ದೆ. ನನ್ನ ಗುರಿ ಯಾವ ದಿಕ್ಕಿನಲ್ಲಿದೆ. ಮುಂದೆ ಏನು ಮಾಡಬೇಕಿದೆ ಎಂಬ ನೂರೆಂಟು ಪ್ರಶ್ನೆಗಳು ನನ್ನನ್ನು ಕಾಡುತ್ತಿತ್ತು .ಪಂದ್ಯಗಳು ಇಲ್ಲದಿದ್ದಾಗ ಯೋಚಿಸಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದೆ. ಆದರೆ ಕ್ರಿಕೆಟ್ ಆಡುವಾಗ ಅಂತಹ ಆಲೋಚನೆಯಿಂದ ದೂರವಾಗುತ್ತಿದ್ದವು ಎಂದು ಹಳೇಯ ಕಹಿ ಘಟನೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 1519

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಟೀಂ ಇಂಡಿಯಾದ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ತಮ್ಮ ಜೀವನದ ಕಹಿ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕುಲದೀಪ್ ಯಾವ್ ಅವರಿಗೆ 13 ವರ್ಷವಿದ್ದಾಗ ಉತ್ತರ ಪ್ರದೇಶದ ಅಂಡರ್ 15 ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಕುಲದೀಪ್ ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

    MORE
    GALLERIES

  • 1619

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವೇಳೆ ಕುಲದೀಪ್ ಬದುಕಿನ ಕಹಿ ಘಟನೆಯನ್ನ ಬಿಚ್ಚಿಟ್ಟಿದ್ದಾರೆ. ನಾನು ಅಂಡರ್ 15ಗೆ ಆಯ್ಕೆಯಾಗಲು ತುಂಬಾ ಶ್ರಮವಹಿಸಿದೆ. ಆದರೆ ನಾನು ಆಯ್ಕೆಯಾಗದೇ ಇದ್ದಾಗ ನೊಂದುಕೊಂಡೆ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಚಿಂತೆ ನನ್ನನ್ನು ಆವರಿಸಿತ್ತು ಎಂದು ಹೇಳಿದ್ದಾರೆ,

    MORE
    GALLERIES

  • 1719

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ನಾನು ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದೆ. ಕೇವಲ ಮೋಜಿಗಾಗಿ ಕ್ರಿಕೆಟ್ ಆಗುತ್ತಿದ್ದೆ. ನಾನು ಕ್ರಿಕೆಟನ್ನು ವೃತ್ತಿಯಾಗಿಸಲು ಎಂದಿಗೂ ನಿರ್ಧರಿಸಿರಲಿಲ್ಲ. ಆದರೆ ವಾಸ್ತವವಾಗಿ ನನ್ನ ತಂದೆ ನಾನು ಕ್ರಿಕೆಟಿಗ ಆಗಬೇಕು ಎಂಬ ಆಸೆ ಹೊತ್ತಿದ್ದರು. ಹಾಗಾಗಿ ನನ್ನನ್ನು ಕೋಚ್ ಬಳಿ ಕರೆದುಕೊಂಡು ಕ್ರಿಕೆಟ್​​ ಅಭ್ಯಾಸ ಮಾಡಿಸಿದರು.

    MORE
    GALLERIES

  • 1819

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಕ್ರಿಕೆಟಿಗ ಶ್ರೀಶಾಂತ್ 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಂತರ ವಿಚಾರಣೆ ವೇಳೆ ಬಿಸಿಸಿಐ ಶ್ರೀಶಾಂತ್ ಅವರಿಗೆ ಕ್ರಿಕೆಟ್ ಆಡಲು ನಿಷೇಧ ಹೇರಿತು. 2019ರ ಸುಪ್ರಿಂ ಕೋಟ್ ಹತ್ತಕ್ಷೇಪದ ನಂತರ ಶ್ರೀಶಾಂತ್ ಶಿಕ್ಷೆಯ ಸಮಯವನ್ನು ಏಳು ವರ್ಷಕ್ಕೆ ಇಳಿಸಿದೆ. ಹಾಗಾಗಿ 2020ರಿಂದ ಶ್ರೀಶಾಂತ್ ಕ್ರಿಕೆಟ್ ಆಡಲು ಅವಕಾಶವಿರುತ್ತದೆ.

    MORE
    GALLERIES

  • 1919

    ಆತ್ಮಹತ್ಯೆಗೆ ನಿರ್ಧರಿಸಿದ್ದರು ಟೀಂ ಇಂಡಿಯಾದ ಈ ಐವರು ಕ್ರಿಕೆಟಿಗರು!

    ಇತ್ತೀಚೆಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ್ದರು. ಈ ವೇಳೆ ಕ್ರಿಕೆಟಿಗ ಶ್ರೀಶಾಂತ್ ಕೂಡ  ಸಂದರ್ಶನವೊಂದರಲ್ಲಿ ಕ್ರಿಕೆಟ್​ನಿಂದ ನಿಷೇಧವಾದಗ ತಮಗಾದ ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯೆಯ ಆಲೋಚನೆ ಬಗ್ಗೆ ಹೇಳಿಕೊಂಡಿದ್ದರು.

    MORE
    GALLERIES