ಮಾರಕ ಮಹಾಮಾರಿ ಕ್ಯಾನ್ಸರ್ ಗೆದ್ದು ಬಂದು ಮತ್ತೆ ಮೈದಾನಕ್ಕಿಳಿದ ಆಟಗಾರರಲ್ಲಿ ಯುವರಾಜ್ ಸಿಂಗ್ ಹೆಸರು ಮುಂಚೂಣಿಯಲ್ಲಿ ಕಾಣಿಸುತ್ತದೆ. ಇದೀಗ ಸಿಕ್ಸರ್ ಕಿಂಗ್ರಂತೆ ಯುವ ಬ್ಯಾಟ್ಸ್ಮನ್ವೊಬ್ಬ ಕೂಡ ಸಾವನ್ನು ಗೆದ್ದು ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.
2/ 11
ಹೌದು, ಈತನ ಹೆಸರು ಕಮಲ್ ಸಿಂಗ್. ಉತ್ತರಾಖಂಡ್ ರಣಜಿ ತಂಡದ ಯುವ ಬ್ಯಾಟ್ಸ್ಮನ್. ತಮ್ಮ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
3/ 11
ಮೂರು ವರ್ಷಗಳ ಹಿಂದೆ ಕ್ಯಾನ್ಸರ್ ಕಮಲ್ಗೆ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಬೇಕಾಗಿತ್ತು.
4/ 11
16ನೇ ವಯಸ್ಸಿನಲ್ಲೇ ಆವರಿಸಿದ ಮಹಾಮಾರಿ ಯುವ ಆಟಗಾರನ ಕನಸನ್ನು ನುಚ್ಚುನೂರು ಮಾಡಿತ್ತು. ಒಂದು ವರ್ಷಗಳ ಕಾಲ ಸಂಪೂರ್ಣ ಕ್ರಿಕೆಟ್ನಿಂದ ದೂರ ಉಳಿದರು.
5/ 11
ಆದರೆ ಮತ್ತೆ ಮೈದಾನಕ್ಕಿಳಿಯಬೇಕೆಂಬ ತುಡಿತ ಕಮಲ್ ಸಿಂಗ್ ಅವರಲ್ಲಿ ಹಾಗೆಯೇ ಉಳಿದಿತ್ತು. ಏಕೆಂದರೆ ತಮ್ಮ ಆರೋಗ್ಯ ಸಮಸ್ಯೆ ಕುರಿತಾಗಿ ಕಮಲ್ಗೆ ಆರಂಭದಲ್ಲಿ ಹೆಚ್ಚೇನು ತಿಳಿದಿರಲಿಲ್ಲ.
6/ 11
ಆರೋಗ್ಯ ಸಮಸ್ಯೆ ಕಾರಣ ಕ್ರಿಕೆಟ್ ಆಡಲು ಬಿಡುತ್ತಿಲ್ಲ ಎಂದಷ್ಟೇ ನಂಬಿದ್ದರು. ಅದೇ ನಂಬಿಕೆಯಲ್ಲಿ ಚೇತರಿಸಿಕೊಳ್ಳುತ್ತೇನೆಂಬ ಭರವಸೆಯನ್ನು ಮೂಡಿಸಿಕೊಂಡಿದ್ದರು.
7/ 11
ಆಮೇಲಷ್ಟೇ ತಿಳಿಯಿತು ನನಗೆ ಬಂದಿರುವುದು ಕ್ಯಾನ್ಸರ್ ಎಂಬುದು. ಆದರೆ ಈ ಬಗ್ಗೆ ಆರಂಭದಲ್ಲಿ ನಾನು ಪೋಷಕರಿಗೆ ತಿಳಿಸಿರಲಿಲ್ಲ. ಇದರ ನಡುವೆ ಆರೋಗ್ಯ ಕೂಡ ಸದಾ ಕೈ ಕೊಡುತ್ತಿತ್ತು.
8/ 11
ಈ ವೇಳೆ ವೈದ್ಯರು ಗುಣಮುಖನಾಗುವ ಸಾಧ್ಯತೆ ಹೆಚ್ಚಿದೆ ಎಂದು ಭರವಸೆ ನೀಡಿದ್ದರು. ಜೊತೆಗಿದ್ದವರು ನನ್ನನ್ನು ಪ್ರೇರೇಪಿಸಿದರು ಎಂದು ಕಮಲ್ ನೆನಪಿಸಿಕೊಳ್ಳುತ್ತಾರೆ.
9/ 11
ಇವರೆಲ್ಲರ ಸಹಾಯದಿಂದ ಆತ್ಮ ವಿಶ್ವಾಸ ಕ್ಯಾನ್ಸರ್ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಂಡು ಇದೀಗ ಮತ್ತೆ ಮೈದಾನಕ್ಕಿಳಿದಿದ್ದಾರೆ ಕಮಲ್.
10/ 11
ಅಲ್ಲದೆ ಉತ್ತರಾಖಂಡ್ ಪರ ಚೊಚ್ಚಲ ರಣಜಿ ಟೀಂ ನಲ್ಲೂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವ ಬ್ಯಾಟ್ಸ್ಮನ್ ಮಹಾರಾಷ್ಟ್ರ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ.
11/ 11
18ರ ಹರೆಯದ ಯುವ ಆಟಗಾರನ 101 ರನ್ಗಳ ಕಾಣಿಕೆಯಿಂದ ಉತ್ತರಾಖಂಡ್ ಮೊದಲ ಇನಿಂಗ್ಸ್ನಲ್ಲಿ 251 ರನ್ಗಳಿಸಿದೆ.
First published:
111
ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ
ಮಾರಕ ಮಹಾಮಾರಿ ಕ್ಯಾನ್ಸರ್ ಗೆದ್ದು ಬಂದು ಮತ್ತೆ ಮೈದಾನಕ್ಕಿಳಿದ ಆಟಗಾರರಲ್ಲಿ ಯುವರಾಜ್ ಸಿಂಗ್ ಹೆಸರು ಮುಂಚೂಣಿಯಲ್ಲಿ ಕಾಣಿಸುತ್ತದೆ. ಇದೀಗ ಸಿಕ್ಸರ್ ಕಿಂಗ್ರಂತೆ ಯುವ ಬ್ಯಾಟ್ಸ್ಮನ್ವೊಬ್ಬ ಕೂಡ ಸಾವನ್ನು ಗೆದ್ದು ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.
ಮಾರಕ ಮಹಾಮಾರಿಯನ್ನೇ ಮೆಟ್ಟಿ ನಿಂತು ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಯುವ ಕ್ರಿಕೆಟಿಗ
ಅಲ್ಲದೆ ಉತ್ತರಾಖಂಡ್ ಪರ ಚೊಚ್ಚಲ ರಣಜಿ ಟೀಂ ನಲ್ಲೂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವ ಬ್ಯಾಟ್ಸ್ಮನ್ ಮಹಾರಾಷ್ಟ್ರ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ.