Chardham Yatra 2023: ಚಾರ್​ ಧಾಮ್​ ಯಾತ್ರೆಯ ಮಹತ್ವವೇನು? ಭಾರತೀಯರು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ? ಇಲ್ಲಿದೆ ಮಾಹಿತಿ

Chardham Yatra 2023: ಚಾರ್​ ಧಾಮ್​ ಯಾತ್ರೆಯು ಏಪ್ರಿಲ್ 22 ರಂದು ಪ್ರಾರಂಭವಾಗಿದೆ. ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆದರೆ, ಇದು ಸುಲಭದ ಪ್ರಯಾಣವಲ್ಲ. ಅನೇಕ ಸಾಹಸಗಳನ್ನು ಮಾಡಬೇಕಾಗಿದೆ. ಆದರೆ ಭಕ್ತರು ಏಕೆ ಹೆಚ್ಚು ಇಲ್ಲಿಗೆ ಹೋಗುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ..

  • News18 Kannada
  • |
  •   | Uttarakhand (Uttaranchal), India
First published:

  • 17

    Chardham Yatra 2023: ಚಾರ್​ ಧಾಮ್​ ಯಾತ್ರೆಯ ಮಹತ್ವವೇನು? ಭಾರತೀಯರು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ? ಇಲ್ಲಿದೆ ಮಾಹಿತಿ

    ಭಾರತ ಭಕ್ತಿ ಭಾವದ ತವರೂರು. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದೂ ಸಂಸ್ಕೃತಿ ಇದೆ. ಕೋಟಿಗಟ್ಟಲೆ ಜನರು ಆ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಅವುಗಳನ್ನು ಮುಂದಿನ ಪೀಳಿಗೆಗೂ ವರ್ಗಾಯಿಸುತ್ತಿದ್ದಾರೆ. ಅದರಲ್ಲಿ ಚಾರ್ಧಾಮ್ ಯಾತ್ರೆಯೂ ಒಂದು.

    MORE
    GALLERIES

  • 27

    Chardham Yatra 2023: ಚಾರ್​ ಧಾಮ್​ ಯಾತ್ರೆಯ ಮಹತ್ವವೇನು? ಭಾರತೀಯರು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ? ಇಲ್ಲಿದೆ ಮಾಹಿತಿ

    ಭಾರತೀಯರು ಇದನ್ನು ಪವಿತ್ರ ಕಾರ್ಯಕ್ರಮ ಎಂದು ಪರಿಗಣಿಸುತ್ತಾರೆ. ಈ ಯಾತ್ರೆಯಲ್ಲಿ ಭಕ್ತರು ಮುಖ್ಯವಾಗಿ ನಾಲ್ಕು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಈ ನಾಲ್ಕು ಅದೇ ರಾಜ್ಯದಲ್ಲಿದೆ. ಅವುಗಳೆಂದರೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು.

    MORE
    GALLERIES

  • 37

    Chardham Yatra 2023: ಚಾರ್​ ಧಾಮ್​ ಯಾತ್ರೆಯ ಮಹತ್ವವೇನು? ಭಾರತೀಯರು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ? ಇಲ್ಲಿದೆ ಮಾಹಿತಿ

    ಹಿಂದೂಗಳು ಚಾರ್​ ಧಾಮ್​ಗಳ ಯಾತ್ರೆಯನ್ನು ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಯಾತ್ರೆಯನ್ನು ಮಾಡುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆ ಮತ್ತು ಆತ್ಮವು ಶುದ್ಧವಾಗುತ್ತದೆ ಎಂದು ಬಲವಾಗಿ ನಂಬಲಾಗಿದೆ. (ಚಿತ್ರ ಕೃಪೆ - uttarakhandtourism.gov.in)

    MORE
    GALLERIES

  • 47

    Chardham Yatra 2023: ಚಾರ್​ ಧಾಮ್​ ಯಾತ್ರೆಯ ಮಹತ್ವವೇನು? ಭಾರತೀಯರು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ? ಇಲ್ಲಿದೆ ಮಾಹಿತಿ

    ವರ್ಷದ ಎಲ್ಲಾ ದಿನಗಳಲ್ಲಿ ಈ ಪ್ರವಾಸ ಮಾಡಲು ಸಾಧ್ಯವಿಲ್ಲ. ಕೆಲವೇ ತಿಂಗಳುಗಳಲ್ಲಿ ಮಾತ್ರ ಮಾಡಬಹುದು. ಆಗ ಮಾತ್ರ ವಾತಾವರಣ ಅನುಕೂಲಕರವಾಗಿರುತ್ತದೆ. ಆ ಸಮಯದಲ್ಲಿ ಯಾತ್ರೆ ಮಾಡಿದರೆ ಭಾಗ್ಯ ಲಭಿಸುತ್ತದೆ ಹಾಗೂ ದೇವತೆಗಳ ಕೃಪೆಗೆ ಪಾತ್ರರಾಗುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. (ಚಿತ್ರ ಕೃಪೆ - uttarakhandtourism.gov.in)

    MORE
    GALLERIES

  • 57

    Chardham Yatra 2023: ಚಾರ್​ ಧಾಮ್​ ಯಾತ್ರೆಯ ಮಹತ್ವವೇನು? ಭಾರತೀಯರು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ? ಇಲ್ಲಿದೆ ಮಾಹಿತಿ

    ಈ ನಾಲ್ಕು ಪುಣ್ಯಕ್ಷೇತ್ರಗಳು ಹಿಮಾಲಯದ ತಪ್ಪಲಿನಲ್ಲಿವೆ. ಅಲ್ಲಿಗೆ ಹೋದರೆ. ಸ್ವರ್ಗ ಅಂದರೆ ಹೀಗೆ ಇರಬಹುದು ಅನ್ನಿಸುತ್ತದೆ. ಬೇರೆ ಲೋಕದಲ್ಲಿ ಪಯಣಿಸುತ್ತಿರುವಂತೆ ಭಾಸವಾಗುತ್ತದೆ. ಅಜ್ಞಾತ ಆಧ್ಯಾತ್ಮಿಕ ಅನುಭವವನ್ನು ಪಡೆಯುತ್ತಾರೆ. ಮನುಷ್ಯ ಜೀವನದ ಪರಮಾರ್ಥ ತಿಳಿಯುತ್ತದೆ ಎನ್ನುತ್ತಾರೆ ಭಕ್ತರು. (ಚಿತ್ರ ಕೃಪೆ - uttarakhandtourism.gov.in)

    MORE
    GALLERIES

  • 67

    Chardham Yatra 2023: ಚಾರ್​ ಧಾಮ್​ ಯಾತ್ರೆಯ ಮಹತ್ವವೇನು? ಭಾರತೀಯರು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ? ಇಲ್ಲಿದೆ ಮಾಹಿತಿ

    ಚಾರ್​ ಧಾಮ್​ ಯಾತ್ರೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದನ್ನು ಅದೃಷ್ಟ ಎನ್ನುತ್ತಾರೆ. ಭಗವಂತನ ಕೃಪೆಯಿಂದ ಮಾತ್ರ ಇದು ಸಾಧ್ಯ ಎನ್ನುತ್ತಾರೆ. ಈ ಪ್ರವಾಸವು ನಿಜಕ್ಕೂ ಸಾಹಸಗಳಿಂದ ತುಂಬಿದೆ. ಸರಿಯಾದ ರಸ್ತೆಗಳಿಲ್ಲ ಮತ್ತು ಎತ್ತರದ ಪರ್ವತಗಳಲ್ಲಿ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗಬೇಕಾಗಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಬೇಕು. ಆಗ ಮಾತ್ರ ನೀವು ಪ್ರಯಾಣಿಸಬಹುದು. (ಚಿತ್ರ ಕೃಪೆ - uttarakhandtourism.gov.in)

    MORE
    GALLERIES

  • 77

    Chardham Yatra 2023: ಚಾರ್​ ಧಾಮ್​ ಯಾತ್ರೆಯ ಮಹತ್ವವೇನು? ಭಾರತೀಯರು ಏಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ? ಇಲ್ಲಿದೆ ಮಾಹಿತಿ

    ಆಧ್ಯಾತ್ಮಿಕ ಮಹತ್ವ, ಪ್ರಾಕೃತಿಕ ಸೊಬಗು, ಸಾಹಸಮಯ ಪಯಣ, ಇವೆಲ್ಲಾ ಸೇರಿ ಚಾರ್ ಧಾಮ್ ಯಾತ್ರೆ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಜೀವನದಲ್ಲಿ ಒಮ್ಮೆಯಾದರೂ ಈ ಪ್ರವಾಸ ಮಾಡಬೇಕು ಎಂದು ಭಕ್ತರು ಭಾವಿಸುತ್ತಾರೆ. ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದ ನಂತರ ತನ್ಮಯರಾಗುತ್ತಾರೆ. (ಚಿತ್ರ ಕೃಪೆ - uttarakhandtourism.gov.in)

    MORE
    GALLERIES