Weird News: ಸರಣಿ ಸಾವು, ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ಜನ! ಊರನ್ನೇ ಖಾಲಿ ಮಾಡಿ ಹೊರಟಿದ್ದಾರೆ ಗ್ರಾಮಸ್ಥರು!

ಈ ಗ್ರಾಮದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ. ಸತ್ತವರು ನಮ್ಮ ಕರೆಯುತ್ತಿದ್ದಾರೆ ಎಂದು ಗ್ರಾಮಸ್ಥರೇ ಹೇಳುತ್ತಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ.

  • Local18
  • |
  •   | Telangana, India
First published:

  • 17

    Weird News: ಸರಣಿ ಸಾವು, ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ಜನ! ಊರನ್ನೇ ಖಾಲಿ ಮಾಡಿ ಹೊರಟಿದ್ದಾರೆ ಗ್ರಾಮಸ್ಥರು!

    ಆಂಧ್ರಪ್ರದೇಶದ ಪಾಡೇರು ಅಲ್ಲುರಿ ಸೀತಾರಾಮ ಜಿಲ್ಲೆಯ ಪೆಡಬಯಲು ತಾಲೂಕಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ. ಸತ್ತವರು ನಮ್ಮ ಕರೆಯುತ್ತಿದ್ದಾರೆ ಎಂದು ಗ್ರಾಮಸ್ಥರೇ ಹೇಳುತ್ತಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ.

    MORE
    GALLERIES

  • 27

    Weird News: ಸರಣಿ ಸಾವು, ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ಜನ! ಊರನ್ನೇ ಖಾಲಿ ಮಾಡಿ ಹೊರಟಿದ್ದಾರೆ ಗ್ರಾಮಸ್ಥರು!

    ಗ್ರಾಮದ ಜನರು ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುವವರನ್ನು ನೋಡಿ ಭೀತಿ ಉಂಟಾಗುತ್ತಿದೆ. ವಾರದೊಳಗೆ ಈ ಊರಿನಲ್ಲಿ ಏಳು ಮಂದಿ ಸಾವಿಗೀಡಾಗಿದ್ದಾರೆ. ಆದರೆ ಈ ಕಿಂಡಾಲಂ ಗ್ರಾಮದಲ್ಲಿ ನಿಜವಾಗಿ ಏನಾಗುತ್ತಿದೆ? ಎನ್ನುವುದೇ ದೊಡ್ಡ ಗೊಂದಲವಾಗಿ ಮಾರ್ಪಟ್ಟಿದೆ.

    MORE
    GALLERIES

  • 37

    Weird News: ಸರಣಿ ಸಾವು, ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ಜನ! ಊರನ್ನೇ ಖಾಲಿ ಮಾಡಿ ಹೊರಟಿದ್ದಾರೆ ಗ್ರಾಮಸ್ಥರು!

    ಮಾರ್ಚ್ ಕೊನೆಯ ವಾರದಲ್ಲಿ, ಕಿಂಡಾಲಂ ಗ್ರಾಮದಲ್ಲಿ ಸತತ ಏಳು ಸಾವುಗಳು ವರದಿಯಾಗಿವೆ. ಮೃತರೆಲ್ಲರೂ ಸಾಯುವ ಮುನ್ನ ತಮ್ಮ ಎದೆಯನ್ನು ಯಾರೋ ಹಿಸುಕುದಂತಾಗುತ್ತಿದೆ ಎಂಬ ಕಾರಣ ಹೇಳಿದ್ದಾರೆ.

    MORE
    GALLERIES

  • 47

    Weird News: ಸರಣಿ ಸಾವು, ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ಜನ! ಊರನ್ನೇ ಖಾಲಿ ಮಾಡಿ ಹೊರಟಿದ್ದಾರೆ ಗ್ರಾಮಸ್ಥರು!

    ಹೀಗೆ ವರ್ತಿಸುವವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಗ್ರಾಮದಲ್ಲಿ ಕೆಲವರು ಸಾವನ್ನಪ್ಪಿದ್ದರೆ, ಕೆಲವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸರಣಿ ಸಾವಿನಿಂದ ಗ್ರಾಮದಲ್ಲಿ ಏನಾದರೂ ದುರಂತ ಆಗಬಹುದು ಎಂಬ ಆತಂಕದಲ್ಲಿ ಹಲವರು ಊರು ತೊರೆದಿದ್ದಾರೆ.

    MORE
    GALLERIES

  • 57

    Weird News: ಸರಣಿ ಸಾವು, ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ಜನ! ಊರನ್ನೇ ಖಾಲಿ ಮಾಡಿ ಹೊರಟಿದ್ದಾರೆ ಗ್ರಾಮಸ್ಥರು!

    ಕೆಲವರು ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಊರಿಗೆ ಮರಳಿದ್ದಾರೆ. ಗ್ರಾಮದಲ್ಲಿ ಅನೇಕ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಿಂಡಾಲಂ ಗ್ರಾಮದಲ್ಲಿ 244 ಜನರು ವಾಸಿಸುತ್ತಿದ್ದಾರೆ. ಅಲ್ಲದೆ ಒಂದು ಪ್ರಾಥಮಿಕ ಶಾಲೆ ಇದ್ದು, ಮಕ್ಕಳಿಗೆ ಏನಾಗುವುದೋ ಎಂಬ ಆತಂಕ ಮನೆ ಮಾಡಿದೆ.

    MORE
    GALLERIES

  • 67

    Weird News: ಸರಣಿ ಸಾವು, ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ಜನ! ಊರನ್ನೇ ಖಾಲಿ ಮಾಡಿ ಹೊರಟಿದ್ದಾರೆ ಗ್ರಾಮಸ್ಥರು!

    ಅಲ್ಲಿಯ ಜನ ದೆವ್ವ ಹಿಡಿದಂತೆ ವರ್ತಿಸುತ್ತಿರುವುದು ನಿಗೂಢವಾಗಿ ಪರಿಣಮಿಸಿದೆ. ಇದರಿಂದ ಗ್ರಾಮಸ್ಥರು ಮಂತ್ರವಾದಿಯನ್ನು ಕರೆಸಿದ್ದಾರೆ. ಆದರೂ ಕೂಡ ಈ ದೆವ್ವ ಬಂದವರಂತೆ ವರ್ತಿಸುವವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿಂದೆ ಪೆಡಬಯಲು ತಾಲೂಕಿನ ರೂಢಕೋಟ ಮತ್ತು ಪಾಡೇರು ಮಂಡಲದ ಗುರಗರರೂವು ಗ್ರಾಮಗಳಲ್ಲಿ ಸರಣಿ ಶಿಶುಮರಣ ಸಂಭವಿಸಿತ್ತು.

    MORE
    GALLERIES

  • 77

    Weird News: ಸರಣಿ ಸಾವು, ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಿರುವ ಜನ! ಊರನ್ನೇ ಖಾಲಿ ಮಾಡಿ ಹೊರಟಿದ್ದಾರೆ ಗ್ರಾಮಸ್ಥರು!

    ಇದೀಗ ಪದೇ ಪದೇ ಸಾವನ್ನಪ್ಪುತ್ತಿರುವುದರಿಂದ ಗ್ರಾಮಸ್ಥರ ಆತಂಕ ತಾರಕಕ್ಕೇರಿದೆ. ಗ್ರಾಮದಲ್ಲಿ ಇಂತಹ ಪರಿಸ್ಥಿತಿಯಿಂದಾಗಿ ಗ್ರಾಮಸ್ಥರು ಎಲ್ಲ ಮಕ್ಕಳನ್ನು ತಮ್ಮ ಮನೆಗಳಿಗೆ ಸೀಮಿತಗೊಳಿಸಿದ್ದಾರೆ. ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಈ ವೈದ್ಯಕೀಯ ಶಿಬಿರದಲ್ಲಿ ಮೂವರು ವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮಸ್ಥರ ಸ್ಥಿತಿಗತಿಯನ್ನು ಗಮನಿಸುತ್ತಿದ್ದಾರೆ. ಪೆದಬಯಲು ಕಡೆಯಿಂದ ವೈದ್ಯಕೀಯ ತಂಡ ಬಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿದೆ.

    MORE
    GALLERIES